Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೆಎಲ್ 01 ಸಿಬಿ1 ಫ್ಯಾನ್ಸಿ ಕಾರ್...

ಕೆಎಲ್ 01 ಸಿಬಿ1 ಫ್ಯಾನ್ಸಿ ಕಾರ್ ನಂ.ಗಾಗಿ ಬರೋಬ್ಬರಿ 18 ಲ.ರೂ.ತೆತ್ತ ಕೇರಳದ ಉದ್ಯಮಿ!

ವಾರ್ತಾಭಾರತಿವಾರ್ತಾಭಾರತಿ21 March 2017 11:45 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕೆಎಲ್ 01 ಸಿಬಿ1 ಫ್ಯಾನ್ಸಿ ಕಾರ್ ನಂ.ಗಾಗಿ ಬರೋಬ್ಬರಿ 18 ಲ.ರೂ.ತೆತ್ತ ಕೇರಳದ ಉದ್ಯಮಿ!

ತಿರುವನಂತಪುರ,ಮಾ.21: ನಗರದ ಉದ್ಯಮಿಯೋರ್ವರು ತನ್ನ ಸ್ಪೋರ್ಟ್ಸ್ ಯುಟಿಲಿಟಿ ವಾಹನ (ಎಸ್‌ಯುವಿ)ಕ್ಕೆ ಫ್ಯಾನ್ಸಿ ನೋಂದಣಿ ಸಂಖ್ಯೆಯನ್ನು ಪಡೆಯಲು 18 ಲ.ರೂ.ಗಳ ದಾಖಲೆ ಹರಾಜು ಮೊತ್ತವನ್ನು ಪಾವತಿಸಿದ್ದಾರೆ.

ಕೆಎಲ್ 01 ಸಿಬಿ1 ನಂಬರ್ ಪಡೆಯಲು ಔಷಧಿ ಸಂಸ್ಥೆ ಮಾಲಿಕ ಕೆ.ಎಸ್. ಬಾಲಗೋಪಾಲ್ ಅವರು ಪಾವತಿಸಿರುವ ಮೊತ್ತ ರಾಜ್ಯದಲ್ಲಿಯೇ ಗರಿಷ್ಠವಾಗಿದೆ. ಹಿಂದಿನ ದಾಖಲೆಯಲ್ಲಿ ತ್ರಿಶೂರಿನಲ್ಲಿ ಫ್ಯಾನ್ಸಿ ನಂಬರ್‌ವೊಂದು 16.50 ಲ.ರೂ.ಗೆ ಮಾರಾಟವಾಗಿತ್ತು.

ಆರು ವರ್ಷಗಳ ಹಿಂದೆ ಎಕೆ ಸರಣಿಯ ನಂಬರ್‌ಗಳು ಎಂಟು ಲ.ರೂ.ಗಳನ್ನು ಗಳಿಸಿದ್ದವು. ಕೇಂದ್ರ ತನಿಖಾ ಸಂಸ್ಥೆಯ ಸಂಕ್ಷಿಪ್ತ ರೂಪ ‘ಸಿಬಿಐ’ ಅನ್ನು ಹೋಲುವ ಸಿಬಿ1 ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿಸಿದೆ.

ಹರಾಜಿನಲ್ಲಿ ಒಂದು ಲಕ್ಷ ರೂ.ನ ಮೂಲಬೆಲೆಯನ್ನು ನಿಗದಿಗೊಳಿಸ ಲಾಗಿದ್ದು, ಮೊದಲ ಸುತ್ತಿನಲ್ಲಿ 18 ಜನರು ಭಾಗವಹಿಸಿದ್ದರು, ಆದರೆ ಮೊತ್ತ 10 ಲ.ರೂ.ದಾಟಿದಾಗ ಮೂವರು ಮಾತ್ರ ಉಳಿದುಕೊಂಡಿದ್ದರು. ಅಂತಿಮವಾಗಿ ಬಾಲಗೋಪಾಲ್ ತನ್ನ ಒಂದು ಕೊಟಿಗೂ ಅಧಿಕ ವೌಲ್ಯದ ಟೊಯೊಟಾ ಲ್ಯಾಂಡ್ ಕ್ರುಯಿಸರ್‌ಗಾಗಿ 18 ಲ.ರೂ.ತೆತ್ತು ಫ್ಯಾನ್ಸಿ ನಂಬರ್‌ನ್ನು ತನ್ನದಾಗಿಸಿಕೊಂಡರು.

ಇತರ 27 ಫ್ಯಾನ್ಸಿ ನಂಬರ್‌ಗಳನ್ನೂ ಹರಾಜಿಗಿಡಲಾಗಿದ್ದು, ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಮೋಟಾರು ವಾಹನಗಳ ಇಲಾಖೆ ಈ ಪ್ರಕ್ರಿಯೆಯ ಮೂಲಕ 27 ಲ.ರೂ.ಗಳ ಆದಾಯ ಗಳಿಸಿದೆ.

ರಾಜ್ಯದಲ್ಲಿ ಹಲವಾರು ಶ್ರೀಮಂತರು ಫ್ಯಾನ್ಸಿ ನಂಬರ್‌ಗಳಿಗಾಗಿ ತಮ್ಮ ಕಾರಿನ ವೌಲ್ಯಕ್ಕಿಂತಲೂ ಹೆಚ್ಚಿನ ಹಣ ಪಾವತಿಸಿದ ನಿದರ್ಶನಗಳಿವೆ. ಇತ್ತೀಚಿಗೆ ಕೊಚ್ಚಿಯ ಮಾರುತಿ ಸ್ವಿಫ್ಟ್ ಕಾರಿನ ಮಾಲಿಕ ತನ್ನ ನೆಚ್ಚಿನ ನಂಬರ್ ಪಡೆಯಲು ಕಾರಿನ ಬೆಲೆಗೂ ಹೆಚ್ಚಿನ ಹಣವನ್ನು ನಿಡಿದ್ದ.
 ಇದಿಷ್ಟೇ ಅಲ್ಲ,ತಮ್ಮ ಇಷ್ಟದ ನಂಬರ್‌ಗಳಿಗಾಗಿ ಜನರು ಪರಸ್ಪರ ಹೊಯ್ ಕೈಗೆ ಇಳಿದಿದ್ದೂ ಇದೆ.

 ಈ ವರ್ಷದ ಜನವರಿಯಲ್ಲಿ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ವಯ್ಯೂರಿನ ಸಾರಿಗೆ ಪ್ರಾಧಿಕಾರದ ಕಚೇರಿಯಲ್ಲಿ ಆಡಳಿತ ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ನಾಯಕರು ನಂಬರ್‌ಗಾಗಿ ಹೊಡೆದಾಟಕ್ಕೇ ಇಳಿದಿದ್ದರು. ಅಂದು ಎಪಿ 16 ಡಿಡಿ 7777 ನಂಬರ್ 60,000 ರೂ.ಗೆ ಮಾರಾಟವಾಗಿತ್ತು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ವಾರ್ತಾಭಾರತಿ
ವಾರ್ತಾಭಾರತಿ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X