ಕೊಡಗಿನ ಧರ್ಮ ಗುರುಗಳ ಹತ್ಯೆ: ಇಮಾಮ್ಸ್ ಕೌನ್ಸಿಲ್ ಖಂಡನೆ
ಬೆಂಗಳೂರು, ಮಾ. 21: ಕಾಸರಗೋಡಿನ ಮಸೀದಿಯಲ್ಲಿ ನಿದ್ರಿಸುತ್ತಿದ್ದ ಧರ್ಮಗುರು ಕೊಡಗಿನ ರಿಯಾಝ್ ಮುಸ್ಲಿಯಾರ್ರನ್ನು ಕೊಲೆ ಮಾಡಿದ ಕೃತ್ಯವನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.
ಮಸೀದಿಯ ಗುರುಗಳನ್ನು ಕೊಲೆ ಮಾಡುವ ಮೂಲಕ ಕೇರಳದಲ್ಲಿ ಹಿಂದು-ಮುಸ್ಲಿಂ ಗಲಭೆಗೆ ಪಿತೂರಿ ನಡೆಸುವ ಕೋಮುವಾದಿ ಶಕ್ತಿಗಳನ್ನು ಮಟ್ಟಹಾಕಬೇಕು. ಕೊಲೆಯ ಹಿಂದಿರುವ ಎಲ್ಲಾ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಧಾರ್ಮಿಕ ಕೇಂದ್ರಗಳ ಮತ್ತು ಧರ್ಮ ಗುರುಗಳ ರಕ್ಷಣೆಯ ಖಾತರಿ ಪಡಿಸಬೇಕು. ಕೊಲೆಯಾದ ರಿಯಾಝ್ ಮುಸ್ಲಿಯಾರ್ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಒದಗಿಸಿಕೊಡಬೇಕು ಎಂದು ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮೌಲಾನ್ ಜಾಫರ್ ಸಾದಿಕ್ ಪೈಝಿ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
Next Story