Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಪ್ರಿಲ್ 1ರಿಂದ ಆದಾಯ ತೆರಿಗೆಯಲ್ಲಿ...

ಎಪ್ರಿಲ್ 1ರಿಂದ ಆದಾಯ ತೆರಿಗೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ25 March 2017 11:28 AM IST
share
ಎಪ್ರಿಲ್ 1ರಿಂದ ಆದಾಯ ತೆರಿಗೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತೇ?

ಹೊಸದಿಲ್ಲಿ, ಮಾ.25: ಹಣಕಾಸು ಮಸೂದೆ ಬುಧವಾರ ಅಂಗೀಕಾರಗೊಂಡಿದ್ದು, 2017-18ನೆ ಸಾಲಿನ ಬಜೆಟ್ ಸಂಬಂಧಿತ ಪ್ರಕ್ರಿಯೆಯನ್ನು ಲೋಕಸಭೆ ಪೂರ್ತಿಗೊಳಿಸಿದೆ. ಎಪ್ರಿಲ್ 1ರಿಂದ ಆದಾಯ ತೆರಿಗೆಯಲ್ಲಿ ಕೆಳಗೆ ನೀಡಲಾದ ಕೆಲ ಪ್ರಮುಖ ಬದಲಾವಣೆಗಳಾಗಲಿವೆ.

1. ರೂ.2.5ರಿಂದ ರೂ.5 ಲಕ್ಷ ಆದಾಯವಿರುವವರಿಗೆ ಆದಾಯ ತೆರಿಗೆಯನ್ನು ಅರ್ಧಕ್ಕೆ ಅಂದರೆ ಶೇ.5ಕ್ಕೆ ಇಳಿಸಲಾಗಿದೆ.
ಈ ಹಿಂದೆ ಈ ಆದಾಯ ವಿಭಾಗದಲ್ಲಿ ಬರುವವರು ಶೇ.10ರಷ್ಟು ಆದಾಯ ತೆರಿಗೆ ಪಾವತಿಸಬೇಕಿದ್ದರೆ, ಇದೀಗ ಅದು ಎಪ್ರಿಲ್ 1ರಿಂದ ಶೇ.5ರಷ್ಟಾಗುತ್ತಿದೆ.

2. ರೂ.50 ಲಕ್ಷದಿಂದ ರೂ.1 ಕೋಟಿಯಷ್ಟು ಆದಾಯವಿರುವ ತೆರಿಗೆದಾರರ ಮೇಲೆ ಶೇ.10ರಷ್ಟು ಸರ್ಚಾರ್ಜ್ ವಿಧಿಸಲಾಗುವುದು. ಅದೇ ಸಮಯ ರೂ.1 ಕೋಟಿಗಿಂತಲೂ ಅಧಿಕ ಆದಾಯ ಹೊಂದಿದವರು ಶೇ.15ರಷ್ಟು ಸರ್ಚಾರ್ಜ್ ಪಾವತಿಸಬೇಕು.

3. ರೂ.5 ಲಕ್ಷದಷ್ಟು ಆದಾಯ ಹೊಂದಿರುವವರು ಒಂದು ಪುಟದ ಟ್ಯಾಕ್ಸ್ ರಿಟರ್ನ್ ಫಾರ್ಮ್ ಅನ್ನು ತುಂಬಿಸಬೇಕು.

ಬಿಸಿನೆಸ್ ಆದಾಯ ಹೊರತು ಪಡಿಸಿ ರೂ.5 ಲಕ್ಷದಷ್ಟು ತೆರಿಗೆ ಹೇರಬಲ್ಲ ಆದಾಯವಿರುವ ವ್ಯಕ್ತಿಗಳು ಒಂದು ಪುಟದ ಸರಳ ತೆರಿಗೆ ಫಾರ್ಮ್ ತುಂಬಿಸಬೇಕಿದೆ. ಮೇಲಾಗಿ ಈ ವಿಭಾಗದಲ್ಲಿ ಬರುವವರು ಮೊದಲ ಬಾರಿ ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಅವರನ್ನು ಪ್ರಥಮ ವರ್ಷದಲ್ಲಿ ಸರಕಾರದ ಬಳಿ ಏನಾದರೂ ನಿರ್ದಿಷ್ಟ ಮಾಹಿತಿಯಿರದ ಹೊರತು ಯಾವುದೇ ತಪಾಸಣೆಗೆ ಗುರಿ ಪಡಿಸಲಾಗುವುದಿಲ್ಲ.

4. ತಡವಾಗಿ ಆದಾಯ ತೆರಿಗೆ ಪಾವತಿಸುವವರಿಗೆ ರೂ.10,000 ತನಕ ದಂಡ

ಆದಾಯ ತೆರಿಗೆಯನ್ನು ಕೊನೆಯ ದಿನಾಂಕದ ನಂತರ ಆದರೆ ಡಿಸೆಂಬರ್ 31ರೊಳಗಾಗಿ ಪಾವತಿಸಿದಲ್ಲಿ ರೂ. 5000 ದಂಡ ಪಾವತಿಸಬೇಕು. ಇತರ ಪ್ರಕರಣಗಳಲ್ಲಿ ರೂ.10,000 ಪಾವತಿಸಬೇಕು. ಆದರೆ ಆದಾಯ ರೂ.5 ಲಕ್ಷ ದಾಟದೇ ಹೋದಲ್ಲಿ ದಂಡ ಮೊತ್ತ ರೂ.1000 ದಾಟದು.

5. ಟ್ಯಾಕ್ಸ್ ರಿಟರ್ನ್ ಪರಿಷ್ಕರಣೆ ಸಮಯವನ್ನು 12 ತಿಂಗಳುಗಳಿಗೆ ಇಳಿಸಲಾಗಿದೆ.

ಈ ಹಿಂದೆ ಇದ್ದ ಎರಡು ವರ್ಷಗಳ ಬದಲು ಟ್ಯಾಕ್ಸ್ ರಿಟರ್ನ್ ಪರಿಷ್ಕರಣೆಗೆ ಸಂಬಂಧಿತ ಆರ್ಥಿಕ ವರ್ಷದಿಂದ ಇಲ್ಲವೇ ಅಸೆಸ್ ಮೆಂಟ್ ವರ್ಷದಿಂದ, ಯಾವುದು ಮುಂಚಿತವಾಗುವುದೋ ಆ ಸಮಯದಿಂದ ಒಂದು ವರ್ಷ ಸಮಯ ಮಿತಿ ನಿಗದಿಪಡಿಸಲಾಗಿದೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X