ಸಹಾರಾ : ಒಂದಾನೊಂದು ಕಾಲದಲ್ಲಿ...
![ಸಹಾರಾ : ಒಂದಾನೊಂದು ಕಾಲದಲ್ಲಿ... ಸಹಾರಾ : ಒಂದಾನೊಂದು ಕಾಲದಲ್ಲಿ...](https://www.varthabharati.in/sites/default/files/images/articles/2017/03/26/sahara-desert-2.gif)
ಒಂದು ಕಾಲದಲ್ಲಿ ಸಹಾರಾ ಹಸಿರಿನಿಂದ ಕಂಗೊಳಿಸುತ್ತಿತ್ತು. ಅಲ್ಲೂ ನೀರಾನೆಗಳು, ಜಿರಾಫೆಗಳಂತಹ ಪ್ರಾಣಿಗಳು ಜೀವಿಸುತ್ತಿದ್ದವು ಮತ್ತು ನದಿದಡಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಮಾನವರು ಆಾರದ ಲಭ್ಯತೆಯಿಂದಾಗಿ ನೆಲೆಸಿದ್ದರು.
‘‘ಆಫ್ರಿಕಾದ ಶುಷ್ಕಾವಧಿ’’ ಅಥವಾ ‘‘ಹಸಿರು ಸಹಾರಾ’’ ಕಾಲವು 11,000 ಮತ್ತು 4,000 ವರ್ಷಗಳ ಮಧ್ಯೆ ಉತ್ತರ ಆಫ್ರಿಕಾದ ಮೂರನೆ ಎರಡು ಭಾಗದಲ್ಲಿ ಇಂದು ಮಳೆಯಾಗುವುದಕ್ಕಿಂತ ಹಲವು ಪಟ್ಟು ಹೆಚ್ಚು ಮಳೆಯಾಗುತ್ತಿದ್ದ ಅವಧಿ.
ಸಹಾರಾದ ಸಸ್ಯ ಸಂಕುಲವು ಬಹಳಷ್ಟು ವೈವಿಧ್ಯಮಯವಾಗಿತ್ತು ಮತ್ತು ಇವುಗಳಲ್ಲಿ ಸಾಮಾನ್ಯ ವಾಗಿ ಇಂದಿನ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಂಡುಬರುವ ಮತ್ತು ಮರುಭೂಮಿಯ ಸಸ್ಯಗಳು ಸೇರಿವೆ. ಅದೊಂದು ಅತ್ಯುತ್ತಮ ಉತ್ಪಾದಕ ಮತ್ತು ಊಹಿಸಬಲ್ಲ ಪರಿಸರ ವ್ಯವಸ್ಥೆಯಾಗಿದ್ದು ಬೇಟೆಗಾರರ ಸಂತತಿಯು ಬೆಳೆಯಲು ಅನುಕೂಲದಾಯಕವಾಗಿತ್ತು.
ಈ ಪರಿಸ್ಥಿತಿಗಳು ಉತ್ತರ ಆಫ್ರಿಕಾದ ಈಗಿನ ಹವಾಮಾನ ಸ್ಥಿತಿಗಿಂತ ತೀರ ವಿರುದ್ಧವಾಗಿದೆ. ಇಂದು ಸಹಾರಾವು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಬಿಸಿಯಾಗಿರುವ ಮರುಭೂಮಿಯಾಗಿದೆ. ಈ ಪ್ರದೇಶವು ಭೂಮಿಯ ಮೇಲ್ಮೈಯ ವಾತಾವರಣದ ಒತ್ತಡವು ಸುತ್ತಮುತ್ತಲಿನ ಪರಿಸರಕ್ಕಿಂತ ಹೆಚ್ಚಾಗಿರುವ ಪರ್ವತಶ್ರೇಣಿಗಳನ್ನು ಹೊಂದಿರುವ ಉಪ ಉಷ್ಣವಲಯದ ಅಕ್ಷಾಂಶಗಳಲ್ಲಿ ಬರುತ್ತದೆ. ಈ ಪರ್ವತ ಶ್ರೇಣಿಗಳು ಉಷ್ಣಹವೆಯನ್ನು ಉಂಟುಮಾಡುತ್ತದೆ.
ಸಹಾರಾವು ಮರುಭೂಮಿ ಹೇಗಾಯಿತು?
ಹತ್ತು ಸಾವಿರ ವರ್ಷಗಳ ಹಿಂದೆಗೂ ವರ್ತಮಾನಕ್ಕೂ ಇರುವ ಬಹುದೊಡ್ಡ ವ್ಯತ್ಯಾಸವು ಭೂಮಿಯ ಕಕ್ಷೀಯ ಸ್ಥಿತಿಯಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಉಂಟಾಗಿದೆ. ತನ್ನ ಕಕ್ಷೆ ಮತ್ತು ಅಕ್ಷರೇಖೆಯ ಒಳಗೆ ಭೂಮಿಯ ಕಂಪನವು ಸೂರ್ಯನಿಗೆ ಸಂಬಂಧಿಸಿದ್ದಾಗಿದೆ.
ಆದರೆ ಈ ಅವಧಿಯು ವಿಚಿತ್ರವಾಗಿ ಕೊನೆಯಾಯಿತು. ಉತ್ತರ ಆಫ್ರಿಕಾದ ಕೆಲವೊಂದು ಪ್ರದೇಶಗಳಲ್ಲಿ ತೇವದಿಂದ ಒಣಗುವಿಕೆಯತ್ತ ಈ ಪರಿವರ್ತನೆಯು ನಿಧಾನವಾಗಿ ನಡೆಯಿತು. ಇನ್ನು ಇತರ ಪ್ರದೇಶಗಳಲ್ಲಿ ಈ ಪ್ರಕ್ರಿಯೆ ಥಟ್ಟನೆ ನಡೆಯಿತು. ಇಂತಹ ಬದಲಾವಣೆಗಳು ನಿಧಾನ ಮತ್ತು ರೇಖೀಯವಾಗಿರುವುದರಿಂದ ಸಹಾರಾದಲ್ಲಿ ನಡೆದ ಬದಲಾವಣೆಯ ವಿನ್ಯಾಸವು ಬದಲಾಗುತ್ತಿರುವ ಕಕ್ಷೀಯ ಪರಿಸ್ಥಿತಿಯ ನಿರೀಕ್ಷೆಗಳನ್ನು ಪಾಲಿಸುತ್ತಿಲ್ಲ.
ಈ ಬದಲಾವಣೆಯ ಬಗ್ಗೆ ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟಿರುವ ವಾದವೆಂದರೆ, ಒಂದು ಪ್ರದೇಶದ ಸಸ್ಯಸಂಕುಲವು ಸಂಪೂರ್ಣ ವಾಗಿ ನಾಶವಾಗಿದೆ ಎಂದರೆ ಅದರರ್ಥ ಭೂ ಮೇಲ್ಪದರದಿಂದ ಅತೀಹೆಚ್ಚು ಬೆಳಕು ಪ್ರತಿಫಲನಗೊಂಡಿದ್ದು ಇಂದು ಸಹಾರಾ ದ್ಯಂತ ಕಾಣಸಿಗುವ ಅತ್ಯುಷ್ಣದ ಪರ್ವತ ಶ್ರೇಣಿಗಳ ಸೃಷ್ಟಿಗೆ ಕಾರಣವಾಯಿತು. (ಇದಕೆ್ಕ ಅಲ್ಬೆಡೊ ಪರಿಣಾಮ ಎನ್ನುತ್ತಾರೆ).
ಆದರೆ ಆರಂಭಿಕ ಸಸ್ಯಸಂತತಿ ನಾಶಕ್ಕೆ ಕಾರಣವಾದರೂ ಏನು? ಅದು ಭಾಗಶಃ ಅಸ್ಪಷ್ಟ, ಯಾಕೆಂದರೆ ಈ ಬಗ್ಗೆ ಅಧ್ಯಯನ ನಡೆಸಬೇಕಾದ ಪ್ರದೇಶವು ಅತ್ಯಂತ ವಿಸ್ತಾರವಾಗಿದೆ. ಆದರೆ, ಸಹಾರಾದಲ್ಲಿ ವೇಗವಾಗಿ ಒಣಗಲ್ಪಟ್ಟ ಪ್ರದೇಶಗಳಲ್ಲೇ ಮೊದಲು ಪ್ರಾಣಿಗಳ ಸಾಕಣೆ ಆರಂಭವಾಗಿತ್ತು ಎಂಬುದಕ್ಕೆ ನನ್ನ ಇತ್ತೀಚೆಗಿನ ಬರಹಗಳಲ್ಲಿ ಪುರಾವೆಯನ್ನು ನೀಡಲಾಗಿದೆ. ಅದನ್ನು ತೋರಿಸಲು ಪುರಾವೆಗಳಿರುವ ಈ ಕಾಲದಲ್ಲಿ ಹುಲ್ಲುಗಾವಲಿನಿಂದ ಮರಳುಗಾಡಿನ ಸಸ್ಯಗಳಾಗಿ ಬದಲಾಗುವ ಪರಿವರ್ತನೆಯನ್ನು ನಾವು ಕಾಣಬಹುದು.
ಇಂದಿನ ಸಹಾರಾ ಮತ್ತು ಮೆಡಿಟರೇನಿಯನ್ ಪರಿಸರ ವ್ಯವಸ್ಥೆಯನ್ನು ಕುರುಚಲು ಗಿಡಗಳು ಆವರಿಸಿದ್ದು ಹುಲ್ಲುಗಾವಲು ಗಳಿಗಿಂತ ಹೆಚ್ಚಿನ ಅಲ್ಬೆಡೊ ಪರಿಣಾಮವನ್ನು ಹೊಂದಿೆ.
ನನ್ನ ಊಹೆಯು ಸರಿಯಾಗಿದ್ದರೆ, ಈ ಪರಿವರ್ತನೆಯ ಆರಂಭಿಕ ಹೊಣೆಗಾರ ಮಾನವನಾಗಿದ್ದಾನೆ ಯಾಕೆಂದರೆ ಈತ ಆರಂಭಿಸಿದ ಪ್ರಕ್ರಿಯೆ ಈ ಪ್ರದೇಶವು ಪಾರಿಸಾರಿಕ ಮಿತಿಯನ್ನು ದಾಟುವವರೆಗೂ ಇಡೀ ಪ್ರದೇಶವನ್ನೇ ಆವರಿಸಿಕೊಂಡಿತು. ಈ ಪ್ರಕ್ರಿಯೆಯು ಕಕ್ಷೀಯ ಬದಲಾವಣೆಯ ಜೊತೆಜೊತೆಗೆ ನಡೆದಿದ್ದು ಪರಿಸರವ್ನು ವಿನಾಶದತ್ತ ಕೊಂಡೊಯ್ಯಿತು.
ನನ್ನ ಊಹೆಯನ್ನು ಪರೀಕ್ಷಿಸಲು ಒಂದು ಸಮಸ್ಯೆಯಿದೆ. ಅಂಕಿ ಅಂಶಗಳ ಕೊರತೆಯಿದೆ. ಉತ್ತರ ಆಫ್ರಿಕಾದ್ಯಂತದ ಪಾರಿಸಾರಿಕ ಮತ್ತು ಪುರಾತತ್ವ ಅಧ್ಯಯನಗಳು ಜೊತೆಯಾಗಿ ಬಹಳ ಅಪರೂಪವಾಗಿ ನಡೆಸಲಾಗಿದೆ.
ಆದರೆ ಉತ್ತಮವಾಗಿ ಪರೀಕ್ಷಿಸಲ್ಪಟ್ಟ ಹೋಲಿಕೆಗಳು ಜಗತ್ತಿನಾದ್ಯಂತದ ಇತಿಹಾಸಪೂರ್ವ ಮತ್ತು ಐತಿಹಾಸಿಕ ದಾಖಲೆಗಳಲ್ಲಿ ಯಥೇಚ್ಛವಾಗಿ ಸಿಗುತ್ತವೆ. ಉತ್ತರ ಯೂರೋಪ್, ಚೀನಾ ಮತ್ತು ನೈಋತ್ಯ ಏಷ್ಯಾದ ನವಶಿಲಾಯುಗದ ರೈತರು ಗಣನೀಯವಾಗಿ ಅರಣ್ಯನಾಶದಲ್ಲಿ ತೊಡಗಿದ್ದರು ಎಂಬುದು ದಾಖಲೆಗಳ ಮೂಲಕ ತಿಳಿಯುತ್ತದೆ.
ಪೂರ್ವ ಏಷ್ಯಾದ ವಿಷಯದಲ್ಲಿ ಅಲ್ಲಿನ ಅಲೆಮಾರಿ ದನಗಾಹಿಗಳು 6,000 ವರ್ಷಗಳ ಹಿಂದೆ ಈ ಪ್ರದೇಶದ ಹುಲ್ಲುಗಳನ್ನು ಗಣನೀಯವಾಗಿ ಪಶುಗಳ ಮೇವಿಗೆ ಬಳಸಿಕೊಂಡ ಕಾರಣ ಅದು ಆವಿಬಾಷ್ಪೀಕರಣದ (ಮೋಡಗಳು ಸೃಷ್ಟಿಯಾಗುವಂತೆ ಮಾಡುವ ಪ್ರಕ್ರಿಯೆ) ಕುಸಿತಕ್ಕೆ ಕಾರಣವಾಗಿ ಮಳೆಯ ಪ್ರಮಾಣದಲ್ಲಿ ಕುಸಿತವುಂಟಾಗಲು ಕಾರಣವಾದರು.
ಅವರು ಯಾವ ಮಟ್ಟದಲ್ಲಿ ಹುಲ್ಲುಗಳನ್ನು ಸುಡುತ್ತಿದ್ದರು ಮತ್ತು ಕಟಾವು ಮಾಡುತ್ತಿದ್ದರೆಂದರೆ ಅವರು ಆ ಪ್ರದೇಶಕ್ಕೆ ಬಂದ ನೂರಾರು ವರ್ಷಗಳ ಒಳಗೆಯೇ ಅಲ್ಲಿನ ಭೂಮಿ ಮತ್ತು ವಾತಾವರಣದ ಮಧ್ಯೆಯ ಸಂಬಂಧದಲ್ಲಿ ಗಣನೀಯವಾಗಿ ಬದಲಾವಣೆಗಳು ಉಂಟಾದವು.
ಇಂಥದ್ದೇ ಬದಲಾವಣೆಗಳು 1,800ರ ದಶಕದಲ್ಲಿ ನ್ಯೂಝಿಲ್ಯಾಂಡ್ ಮತ್ತು ಉತ್ತರ ಅಮೆರಿಕದಲ್ಲಿ ನೆಲೆಸಿದ್ದ ಯುರೋಪಿಯನ್ನರು ಅಲ್ಲಿಗೆ ಸಾಕು ಪ್ರಾಣಿಗಳನ್ನು ಪರಿಯಿಸಿದ ಸಂದರ್ಭದಲ್ಲೂ ನಡೆಯಿತು.
ಪರಿಸರ ಭಯ ಪ್ರದೇಶವನ್ನು ಸುಡುವ ಪ್ರಕ್ರಿಯೆಯು ಮಿಲಿಯನ್ಗಟ್ಟಲೆ ವರ್ಷಗಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಳೆಯ ಜಗತ್ತಿನ ಭೂಪ್ರದೇಶವು ಮಿಲಿಯನ್ ವರ್ಷಗಳಿಗಿಂತಲೂ ಹೆಚ್ಚು ಕಾಲ ಮಾನವರನ್ನು ಮತ್ತು ಮೇಯುವ ಪ್ರಾಣಿಗಳನ್ನು 20 ಮಿಲಿಯನ್ ವರ್ಷಗಳಿಗಿಂತಲೂ ಹೆಚ್ಚುಕಾಲದಿಂದ ಆಧರಿಸುತ್ತಲೇ ಬಂದಿದೆ. ವಾತಾವರಣದಲ್ಲಿ ಕಕ್ಷೀಯ ಕಾರಣದಿಂದ ಉಂಟಾಗಿರುವ ಬದಲಾವಣೆಗಳು ಭೂಮಿಯ ವಾತಾವರಣ ವ್ಯವಸ್ಥೆಯಷ್ಟೇ ಹಳೆಯಾಗಿದೆ.
ಹಾಗಾದರೆ ಸಹಾರಾದಲ್ಲಿ ಬದಲಾವಣೆಗಳಾಗಲು ಕಾರಣವೇನು? ಇದಕ್ಕೆ ‘‘ಪರಿಸರ ಭಯ’’ ಎಂಬ ವಾದವು ಒಂದಷ್ಟು ಉತ್ತರ ನೀಡಬಹುದು. ಪರಭಕ್ಷಕ ಪ್ರಾಣಿಗಳು ತಮ್ಮ ಬೇಟೆಯತ್ತ ತೋರುವ ನಡವಳಿಕೆ ಭೂಮೇಲ್ಮೈಯ ಪ್ರಕ್ರಿಯೆ ಮೇಲೆ ಗಣನೀಯ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಪರಿಸರತಜ್ಞರು ಗುರುತಿಸುತ್ತಾರೆ. ಉದಾಹರಣೆಗೆ ತೆರೆದ ಭೂ ಪ್ರದೇಶಗಳಲ್ಲಿ ಪರಭಕ್ಷಕ ಪ್ರಾಣಿಗಳಿಗೆ (ಮಾನವರನ್ನೂ ಸೇರಿಸಿ) ತಾವು ಸುಲಭ ತುತ್ತಾಗುತ್ತೇವೆ ಎಂಬ ಕಾರಣಕ್ಕೆ ಜಿಂಕೆಗಳು ಅಂತಹ ಪ್ರದೇಶಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದಿಲ್ಲ.
ಆದರೆ ಪರಭಕ್ಷಕ ಪ್ರಾಣಿಗಳ ಭಯವಿಲ್ಲವಾದರೆ ಈ ಪ್ರಾಣಿಗಳ ನಡವಳಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನದಲ್ಲಿ ಪರಭಕ್ಷಕ ಪ್ರಾಣಿಗಳ ಗೈರು ಸಸ್ಯಹಾರಿ ಪ್ರಾಣಿಗಳ ವರ್ತನೆಯಲ್ಲಿ ಬದಲಾವಣೆಯನ್ನು ತಂದಿದೆ. ನದಿದಡಗಳಲ್ಲಿ ಈ ಪ್ರಾಣಿಗಳು ಆರಾಮವಾಗಿ ಮೇಯುವ ಪರಿಣಾಮವಾಗಿ ಈ ಪ್ರದೇಶದಲ್ಲಿ ಭೂಸವೆತವು ಹೆಚ್ಚಾಗಿದೆ. ಆದರೆ ತೋಳಗಳನ್ನು ಇಲ್ಲಿಗೆ ಮರುಪರಿಚಯ ಮಾಡಿದಾಗ ಇಲ್ಲಿನ ಪರಿಸರದಲ್ಲಿ ವ್ಯಾಪಕ ಬದಲಾವಣೆಗಳು ಕಂಡುಬಂದಿದ್ದು ಕೆಲವೇ ವರ್ಷಗಳಲ್ಲಿ ಕಾಡುಗಳು ಮರುಸೃಷ್ಟಿಯಾದವು. ‘‘ಭಯ ಆಧಾರಿತ ಪರಿಸರ’’ವನ್ನು ಬದಲಾಯಿಸುವ ಮೂಲಕ ಭೂಮೇಲ್ಮೈ ಪ್ರಕ್ರಿಯೆಯಲ್ಲಿ ಗಮನೀಯ ಬದಲಾವಣೆಗಳಾಗುವುದು ಖಚಿತ.
ಸಹಾರಾಗೆ ಜಾನುವಾರುಗಳನ್ನು ಪರಿಚಯಿಸಿದ್ದು ಕೂಡಾ ಇಂಥದ್ದೇ ಪರಿಣಾಮವನ್ನು ಬೀರಿರಬಹುದು. ಸಹಾರಾದಲ್ಲಿ ಪರೀಕ್ಷಿಸಲ್ಪಟ್ಟ ಕೆಲವು ಪ್ರದೇಶಗಳು ಭೂಪ್ರದೇಶ ಸುಡುವ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಪೂರ್ವನವಶಿಲಾಯುಗ ಮತ್ತು ನವಶಿಲಾಯುಗ ನಂತರದ ಸುಡುವ ಪ್ರಕ್ರಿಯೆಯಲ್ಲಿ ಇದ್ದ ಪ್ರಾಥಮಿಕ ವ್ಯತ್ಯಾಸವೆಂದರೆ ಪರಿಸರದ ಭಯವನ್ನು ಬದಲಾಯಿಸಲಾಗಿತ್ತು.
ಬಹುತೇಕ ಮೇಯುವ ಪ್ರಾಣಿಗಳು ಸುಡಲ್ಪಟ್ಟ ಭೂ ಪ್ರದೇಶಗಳಿಗೆ ತೆರಳುವುದಿಲ್ಲ ಯಾಕೆಂದರೆ ಅಲ್ಲಿ ಕೇವಲ ಆಹಾರದ ಕೊರತೆ ಮಾತ್ರವಲ್ಲ ಪರಭಕ್ಷಕ ಪ್ರಾಣಿಗಳಿಗೆ ಗುರಿಯಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಸುಟ್ಟ ಪ್ರದೇಶಗಳು ಹೆಚ್ಚು ಅಪಾಯವನ್ನು ತಂದೊಡ್ಡಿದರೆ ಕಡಿಮೆ ಲಾಭವನ್ನು ಹೊಂದಿದೆ.
ಸಾಕುಪ್ರಾಣಿಗಳನ್ನು ಮಾನವರು ನೋಡಿಕೊಳ್ಳುವುದರಿಂದ ಈ ಪ್ರಾಣಿಗಳು ಪರಭಕ್ಷಕ ಮತ್ತು ಬೇಟೆಯಾಗುವ ಪ್ರಾಣಿಗಳೆಂಬ ವಿಭಾಗಕ್ಕೆ ಸೇರುವುದಿಲ್ಲ. ಅವುಗಳನ್ನು ಇತ್ತೀಚೆಗೆ ಸುಡಲ್ಪಟ್ಟ ಪ್ರದೇಶಗಳಿಗೆ ಬಿಟ್ಟರೂ ಅಲ್ಲಿ ಬೆಳೆದಿರುವ ಹುಲ್ಲುಗಳನ್ನಷ್ಟೇ ಮೇಯ್ದು ಪೊದೆಗಳನ್ನು ಹಾಗೆಯೇ ಬಿಡುತ್ತವೆ. ಭೂಮೇಲ್ಮೈ ಪುನರುತ್ಪಾದನೆಯ ಅವಧಿಯಲ್ಲಿ ತಿನ್ನಲು ರಸವತ್ತಾದ ಹುಲ್ಲುಗಳಿಗಿಂತ ಕಡಿಮೆ ಯೋಗ್ಯವಾದ ಪೊದೆಗಳು ವೇಗವಾಗಿ ಬೆಳೆದು ಭೂಮೇಲ್ಮೈಯು ತನ್ನ ಹೊಸ್ತಿಲನ್ನು ಮೀುತ್ತದೆ.
ಆರಂಭಿಕ ಸಹಾರಾದ ಕುರುಬರು ಈ ಪ್ರದೇಶದಲ್ಲಿ ಪರಿಸರ ಭಯವನ್ನು ಬದಲಾಯಿಸಿದ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಹುಲ್ಲುಗಾವಲುಗಳ ಬದಲಾಗಿ ಕುರುಚಲುಗಿಡಗಳು ಬೆಳೆಯಲು ಕಾರಣವಾಯಿತು. ಇದು ಮುಂದೆ ಅಲ್ಬೆಡೊ ಮತ್ತು ದೂಳಿನ ಸೃಷ್ಟಿಗೆ ಕಾರಣವಾಗಿ ಆಫ್ರಿಕಾದ ತೇವದ ಅವಧಿಯ ಅಂತ್ಯಕ್ಕೆ ವೇಗ ನೀಡಿತು. ನಾನು ಈ ಊಹೆಯನ್ನು ಆ ಪ್ರದೇಶದಾದ್ಯಂತ ಜಾನುವಾರುಗಳ ಪರಿಚಯದ ಸಂಭವನೀಯತೆಗಳು ಮತ್ತು ಪರಿಣಾಮಗಳ ಮಧ್ಯೆ ಸಹಸಂಬಂಧ ಕಲ್ಪಿಸುವ ಮೂಲಕ ಪರೀಕ್ಷಿಸಿದ್ದೇನೆ. ಆದರೆ ಶಿಲಾಯುಗದ ಪರಿಸರದ ವಿಸ್ತಾರವಾದ ಅಧ್ಯಯನದ ಅಗತ್ಯವಿದೆ. ಈ ವಾದವು ಸಾಬೀತಾದಲ್ಲಿ ಉತ್ತರ ಆಫ್ರಿಕಾದ್ಯಂತ ತೇವದಿಂದ ಒಣಗುವಿಕೆಗೆ ಪರಿವರ್ನೆಯ ಸ್ವಭಾವವನ್ನು ವಿವರಿಸಲಿದೆ.
ಹೆಚ್ಚಿನ ಕೆಲಸ ಬಾಕಿಯಿದ್ದರೂ ಪರಿಸರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬದಲಾಯಿಸಬಲ್ಲ ಮಾನವನ ಸಾಮರ್ಥ್ಯ ಆಧುನಿಕ ಸಮಾಜಕ್ಕೆ ಪರಿಣಾಮಕಾರಿಯಾ ಸಂದೇಶವನ್ನು ರವಾನಿಸಬೇಕಿದೆ.
ಜಗತ್ತಿನ ಜನಸಂಖ್ಯೆಯ ಶೇ.35ಕ್ಕೂ ಅಧಿಕ ಜನರು ಒಣಪ್ರದೇಶದ ಪರಿಸರ ವ್ಯವಸ್ಥೆಯಲ್ಲಿ ಜೀವಿಸುತ್ತಿದ್ದಾರೆ ಮತ್ತು ಈ ಪ್ರದೇಶಗಳು ಮುಂದೆಯೂ ಮಾನವ ಸಂಕುಲವನ್ನು ಸಲಹಬೇಕಿದ್ದರೆ ಇವುಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವ ಅಗತ್ಯವಿದೆ. ಆಫ್ರಿಕಾದ ತೇವಾವಧಿಯ ಅಂತ್ಯ ಒಣಪ್ರದೇಶಗಳಲ್ಲಿ ಜೀವಿಸುವ ಆಧುನಿಕ ಸಮಾಜಕ್ಕೆ ಪಾಠವಾಗಬೇಕಿದೆ; ನೀವು ಸಸ್ಯಸಂಕುಲವನ್ನು ನಾಶ ಮಾಡಿದರೆ ನೀವು ಭೂಮಿ-ಹವಾಮಾನ ಕ್ರಿಯೆಯನ್ನು ಬದಲಾವಣೆ ಮಾಡಿದಂತೆ ಮತ್ತು ಇದರಿಂದ ಮಳೆಯು ಗಣನೀಯವಾಗಿ ಕಡಿಮೆಯಾಗಲಿದೆ. ಅಮೆರಿಕದ ನೈಋತ್ಯ ಮರುಭೂಮಿಯ ಮಳೆ ಪ್ರಮಾಣ ಮತ್ತು ಸಸ್ಯವರ್ಗಗಳ ಐತಿಹಾಸಿಕ ದಾಖಲೆಗಳು ಇದನ್ನೇ ನಿಖರವಾಗಿ ನಿರೂಪಿಸುತ್ತವೆ.
ಇದೇ ವೇಳೆ ನಾವು ಪರಿಸರದ ಉಸ್ತುವಾರಿಯ ಪ್ರತಿಯಾಗಿ ಆರ್ಥಿಕ ಬದಲಾವಣೆಯನ್ನು ಸಮತೋಲನ ಮಾಡಬೇಕು. ಐತಿಹಾಸಿಕ ಪರಿಸರವು ನಮಗೆ ಕಲಿಸುವುದೇನೆಂದರೆ, ಒಮ್ಮೆ ಪಾರಿಸಾರಿಕ ಹೊಸ್ತಿಲನ್ನು ದಾಟಿದರೆ ಮತ್ತೆ ಹಿಂದಕ್ಕೆ ಹೋಗಲು ಸಾಧ್ಯವಿಲ್ಲ. ಅಲ್ಲಿ ಎರಡನೆ ಅವಕಾಶ ಎಂಬುದಿಲ್ಲ. ಹಾಗಾಗಿ ಶೇ.35 ಮಾನವಸಂಕುಲದ ದೀರ್ಘ ಬಾಳ್ವಿಕೆಯು ಅವರು ಜೀವಿಸುವ ಭೂಪ್ರದೇಶವನ್ನು ನಿರ್ವಹಿಸುವ ರೀತಿಯ ಮೇಲೆ ಅವಲಂಬಿತವಾಗಿದೆ. ಇಲ್ಲವಾದಲ್ಲಿ ನಾವು ಜಗತ್ತಿನಾದ್ಯಂತ ಹೆಚ್ಚೆಚ್ಚು ಸಹಾರಾಗಳನ್ನು ಸೃಷ್ಟಿಸುತ್ತಾ ಹೋಗುತ್ತೇವೆ.