Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಟಿ.ಆರ್.ಪಿ. ಮತ್ತು ಆಧಾರ ರಹಿತ ವೈದ್ಯಕೀಯ...

ಟಿ.ಆರ್.ಪಿ. ಮತ್ತು ಆಧಾರ ರಹಿತ ವೈದ್ಯಕೀಯ ಸುದ್ದಿಗಳು

-ಇಸ್ಮತ್, ಫಜೀರ್-ಇಸ್ಮತ್, ಫಜೀರ್28 March 2017 12:23 AM IST
share

ಮಾನ್ಯರೆ,

ಇತ್ತೀಚೆಗೆ ಮಲಯಾಳಂನ ಪ್ರಸಿದ್ಧ ಸುದ್ದಿ ವಾಹಿನಿಯೊಂದರಲ್ಲಿ ವೈದ್ಯಕೀಯ ಪ್ರಯೋಗಾಲಯಗಳಿಗೆ ಸಂಬಂಧಿಸಿದಂತಹ ಸುದ್ದಿಯೊಂದು ಪ್ರಸಾರವಾಗಿತ್ತು. ಅದೇನೆಂದರೆ ‘‘ನೀವು ಕೋಳಿಯ, ನಾಯಿಯ ಅಥವಾ ಇನ್ಯಾವುದೇ ಪ್ರಾಣಿಯ ರಕ್ತವನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ನೀಡಿ ನಿರ್ದಿಷ್ಟ ಪರೀಕ್ಷೆಗಳನ್ನು ಮಾಡಿಕೊಡಲು ಕೋರಿದರೆ ಅವರು ಮನುಷ್ಯನ ರಕ್ತ ಪರೀಕ್ಷೆಯಂತಹದ್ದೇ ಪರೀಕ್ಷೆ ಮಾಡಿ ಕೊಡುತ್ತಾರೆ..... ಮೋಸ ಮೋಸ ಮೋಸ....!!! ಪ್ರಯೋಗಾಲಯಗಳ ಬಗ್ಗೆ ಜಾಗರೂಕರಾಗಿರಿ’’ ಈ ಸುದ್ದಿಯ ವೀಡಿಯೊ ಕ್ಲಿಪ್ ವೈರಲ್ ಆಗಿ ಬಿಟ್ಟಿದೆ. ಜನ ಈ ಸುದ್ದಿಯನ್ನು ಕುರುಡಾಗಿ ನಂಬಿ ಬಿಟ್ಟಿದ್ದಾರೆ ಕೂಡಾ.....

ವೈದ್ಯಕೀಯ ಕ್ಷೇತ್ರದ ಕುರಿತು ಇಂತಹ ಸುದ್ದಿ ಪ್ರಸಾರ ಮಾಡುವವರಿಗೆ ಆ ಕ್ಷೇತ್ರದ ಕುರಿತಂತೆ ಕನಿಷ್ಠ ಜ್ಞಾನವಾದರೂ ಇರಬೇಕು. ಈ ಸುದ್ದಿಯ ಹಿಂದಿನ ತರ್ಕವೇನೆಂದು ನೋಡೋಣ.

ನೀವು ಯಾವುದೇ ವೈದ್ಯಕೀಯ ಪ್ರಯೋಗಾಲಯಕ್ಕೆ ನಾಯಿಯ ರಕ್ತದ ನಮೂನೆಯೊಂದನ್ನು ಕೊಂಡೊಯ್ದು ಯಾವುದಾದರೂ ನಿರ್ದಿಷ್ಟ ಪರೀಕ್ಷೆಯನ್ನು ಮಾಡಲು ಕೋರಿದರೆ ಅವರು ಮಾಡಿಕೊಡುತ್ತಾರೆ. ಅದು ಸಾಧ್ಯವೂ ಇದೆ. ಮನುಷ್ಯನ ರಕ್ತದ ಯಾವೆಲ್ಲಾ ಪರೀಕ್ಷೆಗಳನ್ನು ಮಾಡಬಹುದೋ ಅವೆಲ್ಲಾ ಪರೀಕ್ಷೆಯನ್ನು ನಾಯಿಯ ರಕ್ತದಿಂದಲೂ ಮಾಡಬಹುದು. ಮನುಷ್ಯನಿಗಿರುವಂತೆಯೇ ನಾಯಿಗೂ ಹೃದಯ, ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ ಹೀಗೆ ಎಲ್ಲವೂ ಇರುತ್ತದೆ. ಮನುಷ್ಯನ ದೇಹದಲ್ಲಿ ರಕ್ತ ಸಂಚರಿಸುವಂತೆಯೇ ನಾಯಿಯ ದೇಹದಲ್ಲೂ ರಕ್ತ ಸಂಚರಿಸುತ್ತದೆ. ಅನೇಕ ರಕ್ತ ಪರೀಕ್ಷೆಗಳ ನಾರ್ಮಲ್ ವ್ಯಾಲ್ಯೂ ನಾಯಿಗೂ ಮನುಷ್ಯನಿಗೂ ಒಂದೇ ಆಗಿರುತ್ತದೆ. ನೀವು ಅದನ್ನು ನಾಯಿಯ ರಕ್ತ ಎಂದು ಹೇಳುವವರೆಗೆ ಯಾವುದೇ ವೈದ್ಯನಿಗೋ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞನಿಗೋ ಮೇಲ್ನೋಟಕ್ಕೆ ಅದು ನಾಯಿಯ ರಕ್ತವೋ ಮನುಷ್ಯನ ರಕ್ತವೋ ಎಂದು ತಿಳಿಯುವುದಿಲ್ಲ.

ನೀವು ಯಾವುದಾದರೂ ಸಂಶೋಧನಾ ಪ್ರಯೋಗಾಲಯಕ್ಕೆ ಕೊಂಡೊಯ್ದು ಇದು ಯಾವುದರ ರಕ್ತವೆಂದು ಪರೀಕ್ಷಿಸಲು ಕೋರಿದರೆ ಮಾತ್ರ ಅವರು ಅದನ್ನು ನಾಯಿಯ ರಕ್ತವೋ, ಮನುಷ್ಯನ ರಕ್ತವೋ ಅಥವಾ ಇನ್ಯಾವುದೋ ಪ್ರಾಣಿಯ ರಕ್ತವೋ ಎಂದು ಪತ್ತೆ ಹಚ್ಚಲು ಸಾಧ್ಯ. ಯಾವುದೇ ವೈದ್ಯಕೀಯ ಪ್ರಯೋಗಾಲಯಗಳು ಯಾವ ಪ್ರಾಣಿಯ ರಕ್ತವೆಂದು ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಳವಡಿಸುವುದಿಲ್ಲ. ಅದರ ಅಗತ್ಯ ಯಾರಿಗೂ ಬೀಳುವುದಿಲ್ಲ. ಮನುಷ್ಯನಿಗೆ ಬಾಧಿಸಿದಂತೆ ನಾಯಿಗೂ ರಕ್ತಹೀನತೆ, ಕ್ಯಾನ್ಸರ್, ಮೂತ್ರಪಿಂಡದ ವೈಫಲ್ಯ, ಮಧುಮೇಹ ಮುಂತಾದ ಕಾಯಿಲೆಗಳು ಬಾಧಿಸಬಹುದು. ಹಾಗೆ ನೋಡ ಹೋದರೆ ಎಚ್‌ಐವಿ ಮೊಟ್ಟಮೊದಲು ಬಾಧಿಸಿದ್ದು ಮನುಷ್ಯನಿಗಲ್ಲ. ಅದು ಗೊರಿಲ್ಲಾಗಳಿಂದ ಮನುಷ್ಯನಿಗೆ ಹರಡಿದ್ದು. ಎಚ್‌ಐವಿ ಪೀಡಿತ ಗೊರಿಲ್ಲಾವೊಂದರ ರಕ್ತದ ನಮೂನೆ ನೀಡಿ ಎಚ್‌ಐವಿ ಪರೀಕ್ಷೆ ಮಾಡಲು ಕೋರಿದರೆ ಎಚ್‌ಐವಿ ಪಾಸಿಟೀವ್ ಫಲಿತಾಂಶ ಬರಬಹುದು.

ಇಂದು ಕೆಲವು ಸುದ್ದಿ ವಾಹಿನಿಗಳಿಗೆ ತಮ್ಮ ಟಿಆರ್‌ಪಿ ಏರಿಸಲು ವೈದ್ಯಕೀಯ ಜಗತ್ತೆಂದರೆ ಬರೇ ಮೋಸ, ದಗಲ್ಬಾಜಿ, ವಂಚನೆ ಎಂಬ ಸುದ್ದಿಗಳನ್ನು ಪ್ರಸಾರ ಮಾಡುವ ಚಟ ಹತ್ತಿಕೊಂಡಿದೆ.
  
ವೈದ್ಯಕೀಯ ಕ್ಷೇತ್ರದಲ್ಲಿ ಕಳ್ಳರಿರಬಹುದು, ಸುಳ್ಳರಿರಬಹುದು, ವಂಚಕರಿರಬಹುದು ಅಂದ ಮಾತ್ರಕ್ಕೆ ಆ ಕ್ಷೇತ್ರದಲ್ಲಿ ಪ್ರಾಮಾಣಿಕರಿಲ್ಲ ಎನ್ನಲು ಸಾಧ್ಯವೇ.....? ಯಾವುದೇ ವೈದ್ಯನನ್ನು ಅಪ್ರಾಮಾಣಿಕ ಎನ್ನಲು ಈ ಮೇಲಿನ ಕುತಂತ್ರಗಳು ಮಾನದಂಡವಲ್ಲ.

share
-ಇಸ್ಮತ್, ಫಜೀರ್
-ಇಸ್ಮತ್, ಫಜೀರ್
Next Story
X