Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ನಾಮ್ ಶಬಾನಾ: ತಾಪಸಿ ಸಾಹಸ ಚಿತ್ರದ...

ನಾಮ್ ಶಬಾನಾ: ತಾಪಸಿ ಸಾಹಸ ಚಿತ್ರದ ಹೈಲೈಟ್, ಕತೆ ಮಾತ್ರ ಅಷ್ಟೇ ಲೈಟ್

ವಾರ್ತಾಭಾರತಿವಾರ್ತಾಭಾರತಿ30 March 2017 12:42 PM IST
share
ನಾಮ್ ಶಬಾನಾ: ತಾಪಸಿ ಸಾಹಸ ಚಿತ್ರದ ಹೈಲೈಟ್, ಕತೆ ಮಾತ್ರ ಅಷ್ಟೇ ಲೈಟ್

ಹೊಸದಿಲ್ಲಿ, ಮಾ.30: ಬಹು ನಿರೀಕ್ಷಿತ ಚಿತ್ರ ನಾಮ್ ಶಬಾನಾ ಬಿಡುಗಡೆಯಾಗಿದೆ. ಚಿತ್ರದ ನಾಯಕಿ ತಾಪಸೀ ಪನ್ನು ಅವರ ನಟನೆ ಮತ್ತು ಸಾಹಸವೇ ಚಿತ್ರದ ಹೈಲೈಟ್ ಆಗಿದ್ದರೆ ಚಿತ್ರದ ಕತೆ ಮಾತ್ರ ಅಷ್ಟೇ ಲೈಟ್ ಆಗಿದೆ. ಚಿತ್ರದ ನಿರ್ದೇಶಕ ನೀರಜ್ ಪಾಂಡೆ ದೇಶಭಕ್ತಿಯ ಭಾವವನ್ನು ಬೆಳೆಸುವ ಚಿತ್ರಗಳಿಗೆ ಹೆಸರುವಾಸಿಯಾದಂತೆ ಈ ಚಿತ್ರದಲ್ಲೂ ದೇಶಭಕ್ತಿಯ ಕಿಚ್ಚು ನಾಯಕಿಯಲ್ಲಿರುವುದು ಸ್ಪಷ್ಟ.

ಅದೇ ಸಮಯ ಚಿತ್ರ ಹೊಸತನದ ಕೊರತೆಯೂ ಎದುರಿಸುತ್ತಿದ್ದು ಚಿತ್ರದ ಕೆಲ ದೃಶ್ಯಗಳಲ್ಲಿ ನಾಯಕ ತಾಪಸಿ ಖಳರ ವಿರುದ್ಧ ಹೋರಾಡಿದರೆ, ಇನ್ನು ಕೆಲವು ದೃಶ್ಯಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ಹುಡುಗರ ಏನು ಮಾಡುತ್ತಾರೆಂದು ನಾಯಕ ನಟ ಅಕ್ಷಯ್ ಕುಮಾರ್ ಆಕೆಗೆ ತೋರಿಸಿದ್ದು ಬಿಟ್ಟರೆ ಚಿತ್ರದಲ್ಲಿ ನಾವೀನ್ಯತೆಯೇನೂ ಇಲ್ಲವಾಗಿದೆ.

ಚಿತ್ರದಲ್ಲಿ ತಾಪಸಿ ನಾಯಕಿ ಶಬಾನಾ ಪಾತ್ರಧಾರಿಯಾಗಿದ್ದಾರೆ. ತನ್ನ ತಾಯಿಯೊಡನೆ ವಾಸವಾಗಿರುವ ಶಬಾನಾಳನ್ನು ದೇಶದ ವೈರಿಗಳ ವಿರುದ್ಧದ ಹೋರಾಟದಲ್ಲಿ ಅತ್ಯಧಿಕ ಅಧಿಕಾರಗಳನ್ನು ಹೊಂದಿರುವ ಗುಪ್ತಚರ ಸಂಸ್ಥೆಯೊಂದಿಗೆ ಸೇರಲು ಆಯ್ಕೆ ಮಾಡಲಾಗುತ್ತದೆ. ಚತುರೆ ಸ್ಪೆಶಲ್ ಏಜೆಂಟ್ ಆಕೆ ಹೇಗಾದಳೆಂದು ಚಿತ್ರ ತಿಳಿಸುತ್ತದೆ. ಚಿತ್ರದಲ್ಲಿ ಆಕೆ ಮಾಡಿದ ಪಾತ್ರಕ್ಕಾಗಿ ಅದೆಷ್ಟೋ ನಟಿಯರು ಹಂಬಲಿಸಿದ್ದಿರಬಹುದು. ಆಕೆಯ ಸಾಹಸ ಚಿತ್ರದಲ್ಲಿ ಅದೆಷ್ಟಿದೆಯೆಂದರೆ ಹಲವಾರು ಬಾರಿ ಆಕೆಯೇ ಇದನ್ನೆಲ್ಲಾ ಮಾಡಿದ್ದಾಳೆಯೇ ಎಂದು ಮೂಗಿಗೆ ಬೆರಳಿಡುವಂತೆ ಮಾಡುತ್ತದೆ.

ಚಿತ್ರ ಕಥೆ ಒಂದು ನಿರ್ದಿಷ್ಟ ಸ್ಥಳಕ್ಕೆ ಸೀಮಿತಗೊಳ್ಳದೆ ಯುರೋಪಿಯನ್ ನಗರಗಳಿಂದ ಹಿಡಿದು ದೇಸಿ ಸ್ಥಳಗಳಿಗೆ ಬದಲಾವಣೆಯಾಗುತ್ತಾ ಹೋಗುತ್ತದೆ. ಮನೋಜ್ ಬಾಜಪೇಯಿ ನೇತೃತ್ವದ ಗೂಢಚರರ ತಂಡವು ಜಾಗತಿಕ ಶಸ್ತ್ರಾಸ್ತ್ರ ಹಾಗೂ ಡ್ರಗ್ಸ್ ಸ್ಮಗ್ಲರ್ ಒಬ್ಬನ ಬೆನ್ನ ಹಿಂದೆ ಬಿದ್ದಿರುವುದೇ ಇದಕ್ಕೆ ಕಾರಣ. ಆದರೆ ಚಿತ್ರದ ನಾಯಕಿಯ ಗುಣಗಳನ್ನು ಹೊಗಳುವಂತಹದ್ದೇನೂ ಚಿತ್ರದಲ್ಲಿ ಕಾಣಿಸದೇ ಇದ್ದು ಮಹಿಳೆಯರು ಹುಟ್ಟು ಗೂಢಚರರು ಎಂಬರ್ಥದ ವಾಕ್ಯಗಳನ್ನು ಚಿತ್ರದಲ್ಲಿ ಕೇಳಬಹುದು.

ಚಿತ್ರದುದ್ದಕ್ಕೂ ಕೇಳಿ ಬರುವ ಹಿನ್ನೆಲೆ ಸಂಗೀತವೂ ಕಿರಿಕಿರಿಯೆನಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X