Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮನಸಿಗಿಳಿಯದ ಮಲ್ಲಿಗೆ

ಮನಸಿಗಿಳಿಯದ ಮಲ್ಲಿಗೆ

ಶಶಿಧರ ಚಿತ್ರದುರ್ಗಶಶಿಧರ ಚಿತ್ರದುರ್ಗ2 April 2017 12:30 AM IST
share
ಮನಸಿಗಿಳಿಯದ ಮಲ್ಲಿಗೆ

ಕಳೆದ ವರ್ಷ ತೆರೆಕಂಡಿದ್ದ ಮರಾಠಿ ಸಿನೆಮಾ ‘ಸೈರಾಟ್’ ದೊಡ್ಡ ಸದ್ದು ಮಾಡಿತ್ತು. ಮರ್ಯಾದಾ ಹತ್ಯೆ ಕುರಿತ ಮನಮಿಡಿಯುವ ಪ್ರೇಮಕತೆಯಿದು. ಸಾಮಾಜಿಕ ಸಂಕಟವೊಂದಕ್ಕೆ ಬಲಿಯಾಗುವ ಪ್ರೇಮಿಗಳಿಬ್ಬರ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಸಹಜವಾಗಿಯೇ ಈ ಚಿತ್ರದ ಕನ್ನಡ ಅವತರಣಿಕೆ ‘ಮನಸು ಮಲ್ಲಿಗೆ’ ಬಗ್ಗೆ ನಿರೀಕ್ಷೆಯಿತ್ತು. ಅನುಭವಿ ನಿರ್ದೇಶಕ ಎಸ್.ನಾರಾಯಣ್ ಸಾರಥ್ಯದಲ್ಲಿ ತಯಾರಾಗಿರುವ ಸಿನೆಮಾ ಮೂಲ ಕತೆಗೆ ಬದ್ಧವಾಗಿದೆ. ಆದರೆ ತಾಜಾತನ ಕಳೆದುಕೊಂಡಿರುವ ಸಿನೆಮಾಗೆ ಅಲ್ಲಿನ ಘಮಲು ಮಾತ್ರ ದಕ್ಕಿಲ್ಲ.

‘ಸೈರಾಟ್’ನ ದೊಡ್ಡ ಯಶಸ್ಸಿನ ಹಿಂದಿನ ಶಕ್ತಿ ಎಂದರೆ ಅಲ್ಲಿನ ಪ್ರಾದೇಶಿಕತೆ, ಆಕರ್ಷಕ ನಿರೂಪಣೆ ಮತ್ತು ನಾಯಕಿ ರಿಂಕು ರಾಜ್‌ಗುರು. ಕನ್ನಡ ಅವತರಣಿಕೆಯಲ್ಲಿ ನಾಯಕಿಯಾಗಿ ರಿಂಕು ನಟಿಸಿದ್ದಾರಾದರೂ ಇತರ ವಿಭಾಗಗಳಲ್ಲಿ ಚಿತ್ರ ಬಸವಳಿದಿದೆ. ನಿರ್ದೇಶಕ ಎಸ್.ನಾರಾಯಣ್ ನೆಲದ ಗುಣ ಸಿಗುವ ಗಟ್ಟಿಯಾದ ಪ್ರಾದೇಶಿಕತೆಯನ್ನು ಹಿನ್ನೆಲೆಯಾಗಿ ಬಳಕೆ ಮಾಡಿಕೊಳ್ಳುವ ಹಂತದಲ್ಲೇ ಎಡವಿದ್ದಾರೆ. ಹಾಗಾಗಿ ಕತೆಗೆ ಅಗತ್ಯವಿದ್ದ ಸಾಮಾಜಿಕ ಅಸಮಾನತೆ, ರಾಜಕಾರಣ, ಜಾತಿ ವೈಷಮ್ಯದಂತಹ ಸಂಗತಿಗಳು ಮೈದಾಳುವುದಿಲ್ಲ. ಜತೆಗೆ ಹಾಡಿನಲ್ಲಿ ಗ್ರಾಫಿಕ್ಸ್ ಬಳಕೆ, ಮನೆ-ಬಂಗಲೆಯ ಸೆಟ್‌ಗಳು ಅಸಹಜವಾಗಿ ಕಾಣಿಸುವುದರಿಂದ ನವಿರು ಪ್ರೇಮಕತೆಗೆ ಸರಿಯಾದ ಭೂಮಿಕೆಯೇ ಸಿದ್ಧವಾಗುವುದಿಲ್ಲ.
 
ಇಂತಹ ಕೆಲವು ಮಿತಿಗಳ ಮಧ್ಯೆಯೂ ಚಿತ್ರದ ದ್ವಿತೀಯಾರ್ಧ ಕೊಂಚ ಸಹ್ಯವೆನಿಸುತ್ತದೆ. ಅದು ಕೂಡ ಕತೆಯ ಕಾರಣಕ್ಕಾಗಿ. ಮೂಲ ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ನಟಿ ರಿಂಕು ರಾಜ್‌ಗುರು ಕನ್ನಡ ಅವತರಣಿಕೆಯ ಸಾಮರ್ಥ್ಯ ಮತ್ತು ದೌರ್ಬಲ್ಯವೂ ಹೌದು! ಮರಾಠಿ ಮಾತೃಭಾಷೆಯ ರಿಂಕು ಇಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ತಾವೇ ಡಬ್ ಮಾಡಿದ್ದಾರೆ. ಮುದ್ದಾಗಿ ಕಾಣಿಸುವ ಅವರ ಕನ್ನಡ ಉಚ್ಚಾರ ಚಿತ್ರದ ಓಘಕ್ಕೆ ಅಡ್ಡಿಯಾಗುತ್ತದೆ. ನವನಟ ನಿಶಾಂತ್ ಚೊಚ್ಚಲ ಸಿನೆಮಾದಲ್ಲೇ ಸೊಗಸಾಗಿ ನಟಿಸಿದ್ದಾರೆ. ‘ಡ್ರಾಮಾ ಜೂನಿಯರ್ಸ್‌’ ಖ್ಯಾತಿಯ ಐದು ವರ್ಷದ ಪುಟಾಣಿ ಅಚಿಂತ್ಯನ ಬಾಯಲ್ಲಿ ಆತನ ವಯಸ್ಸಿಗೆ ಮೀರಿದ ಮಾತುಗಳನ್ನಾಡಿಸುವ ಅಗತ್ಯವಿರಲಿಲ್ಲ. ಇದು ‘ಅಭಿರುಚಿ’ಯ ಪ್ರಶ್ನೆ.

ಕೆಲವು ಸಿನೆಮಾಗಳನ್ನು ರೀಮೇಕ್ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕೆ ‘ಮನಸು ಮಲ್ಲಿಗೆ’ ಮತ್ತೊಂದು ಉದಾಹರಣೆಯಾಗಿ ನಿಲ್ಲುತ್ತದೆ.

ನಿರ್ದೇಶನ: ಎಸ್. ನಾರಾಯಣ್, ನಿರ್ಮಾಣ : ರಾಕ್‌ಲೈನ್ ವೆಂಕಟೇಶ್ ಮತ್ತು ಆಕಾಶ್ ಚಾವ್ಲಾ, ಸಂಗೀತ : ಅಜಯ್-ಅತುಲ್ ಮತ್ತು ಎಸ್.ನಾರಾಯಣ್, ಛಾಯಾಗ್ರಹಣ : ಮನೋಹರ್ ಜೋಶಿ, ತಾರಾಗಣ : ನಿಶಾಂತ್, ರಿಂಕು ರಾಜ್‌ಗುರು ಮತ್ತಿತರರು.

ರೇಟಿಂಗ್ - **

share
ಶಶಿಧರ ಚಿತ್ರದುರ್ಗ
ಶಶಿಧರ ಚಿತ್ರದುರ್ಗ
Next Story
X