Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ.. ಮೆಣಸೇ..

ಓ.. ಮೆಣಸೇ..

ಪಿ.ಎ.ರೈಪಿ.ಎ.ರೈ3 April 2017 12:24 AM IST
share

ಮುಂದಿನ ಎರಡು ವರ್ಷಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಆಡಳಿತದಲ್ಲಿ ಸುಧಾರಣೆ ಸ್ಪಷ್ಟವಾಗಿ ಕಾಣಿಸಲಿದೆ

-ಸುರೇಶ್ ಪ್ರಭು, ಕೆಂದ್ರ ಸಚಿವ

ಬಹುಶಃ ಎಲ್ಲರಿಗೂ ಉಚಿತ ಭೂತಕನ್ನಡಿ ವಿತರಿಸುವ ಯೋಜನೆಯಿರಬೇಕು.

---------------------

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರಲ್ಲಿ ಎಲ್ಲ ವಿಷಯಗಳಲ್ಲೂ ಕೇವಲ ಹಿಟ್ ಆ್ಯಂಡ್ ರನ್ ವರ್ತನೆ

- ಜಗದೀಶ್ ಶೆಟ್ಟರ್, ವಿ.ವಿ.ನಾಯಕ

ಅದು ರಾಗಿ ಹಿಟ್ ತಿಂದ ಪರಿಣಾಮ.

---------------------
  ನಾನು ಶಿಸ್ತು ಕಲಿತದ್ದು ಆರೆಸ್ಸೆಸ್‌ನಿಂದ

-ಎಲ್.ಕೆ.ಅಡ್ವಾಣಿ, ಬಿಜೆಪಿ ನಾಯಕ

ಮೋದಿ ಆರೆಸ್ಸೆಸ್‌ಗೆ ಕೃತಜ್ಞರಾಗಿದ್ದಾರಂತೆ.

---------------------

  ಮುಲಾಯಂ ಸಿಂಗ್, ಮಾಯಾವತಿ ಮತ್ತು ಎಲ್ಲ ಜಾತ್ಯತೀತ ಪಕ್ಷಗಳು ಒಂದಾದರೆ ಬಿಜೆಪಿ ಕಥೆ ಮುಗಿದಂತೆಯೇ

  - ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ನಾಯಕ

ಬರೇ ಕಥೆ ಕಟ್ಟುವುದೇ ಆಯಿತು.

---------------------

ಸಂವಿಧಾನವನ್ನು ಸಂರಕ್ಷಿಸುವ ನಾಯಕತ್ವ ನಮ್ಮಲ್ಲಿ ಬೆಳೆದು ಬರಬೇಕು
   - ಆಸ್ಕರ್ ಫೆರ್ನಾಂಡಿಸ್ ರಾಜ್ಯ ಸಭಾ ಸದಸ್ಯ

ಬೆಳೆಯಲು ನೀವು ಬಿಡಬೇಕಲ್ಲ?
---------------------

ರಾಹುಲ್‌ರನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬುದು ಸುಳ್ಳು

  -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕಾಂಗ್ರೆಸ್‌ನ್ನು ಸೈಡ್‌ಲೈನ್ ಮಾಡುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ?

ಯುವ ಮನಸ್ಸುಗಳನ್ನು ಇತರ ಆಕರ್ಷಣೆಗಳಿಂದ ಬೇರ್ಪಡಿಸಿ ಧಾರ್ಮಿಕ ಆಚರಣೆ ಬೆಳೆಸುವ ಕೆಲಸ ಆಗಬೇಕು

  -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ರಾಘವೇಶ್ವರ ಸ್ವಾಮೀಜಿಗಳದ್ದು ಯುವಮನಸ್ಸು ಅಲ್ಲ ಅಂತೀರಾ?
---------------------

ನಾನು ಹಣಮಾಡುವ ಆಸೆಯಿಂದ ರಾಜಕೀಯಕ್ಕೆ ಬಂದಿಲ್ಲ

  - ಪ್ರಮೋದ್ ಮಧ್ವರಾಜ್, ಸಚಿವ

ಈ ಹೇಳಿಕೆಯ ಹಿಂದೆ ಅದೇನು ದುರಾಸೆಯಿದೆಯೋ?
---------------------
  ಹಿಂದೂ-ಮುಸ್ಲಿಂ ಜೊತೆ ಸೇರಿ ರಾಮ ಮಂದಿರ ಕಟ್ಟೋಣ

-ಗಿರಿರಾಜ್ ಸಿಂಗ್, ಕೇಂದ್ರ ಸಚಿವ

ಜೊತೆ ಸೇರಿ ಮನಸ್ಸು ಕಟ್ಟುವ ಕೆಲಸವಾಗಲಿ ಮೊದಲು.

---------------------
  
ಅಕ್ರಮ ಕಸಾಯಿಖಾನೆ ಮುಚ್ಚುವ ಉ.ಪ.ಸರಕಾರದ ನಿರ್ಧಾರಕ್ಕೆ ಕೋಮು ಬಣ್ಣ ಸರಿಯಲ್ಲ

- ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
  ಚುನಾವಣೆಯೇ ಅಕ್ರಮವೆಂಬ ಆರೋಪವಿರುವಾಗ, ಕಸಾಯಿಖಾನೆಯ ಅಕ್ರಮದ ಕುರಿತು ಮಾತನಾಡುವುದೇನಿದೆ?
---------------------
  ನಾನು ಕೆಲಸದ ಹುಳ

-ಯೋಗಿ ಆದಿತ್ಯನಾಥ, ಉ.ಪ.ಮುಖ್ಯಮಂತ್ರಿ

ಹುಳ ಎನ್ನುವುದರಲ್ಲಿ ಎರಡು ಮಾತಿಲ್ಲ.

---------------------

ಆರೆಸ್ಸೆಸ್ ಸ್ವಯಂ ಸೇವಕರು ಅಂತರ್ಜಾತಿ ವಿವಾಹದ ಪರವಾಗಿ ನಿಲ್ಲಬೇಕು

- ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ ಮೊದಲು ಅವರು ವಿವಾಹವಾಗಲಿ.

---------------------
    ಬೆನ್ನಿಗೆ ಇರಿಯುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮ

- ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ

ದಲಿತರ ಬೆನ್ನಿಗೆ ಇರಿವ ಹಕ್ಕು ಇರುವುದು ನಿಮಗಷ್ಟೇ ಎನ್ನುವುದು ಅವರಿಗೇನು ಗೊತ್ತು?

  ನಾನಿನ್ನೂ ಗರ್ಭಿಣಿ ಆಗಿಲ್ಲ

- ಬಿಪಾಶಾ ಬಸು, ಬಾಲಿವುಡ್ ನಟಿ
  
ಮದುವೆಯಾಗಿದ್ದೀರಾ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಿ.

---------------------

ವೀರಪ್ಪನ್‌ನಂತಹ ಪಾತಕಿಗಳು ಹುಟ್ಟಿದರೆ ಮಟ್ಟಹಾಕಲು ಅಗತ್ಯವಾದ ತರಬೇತಿ ನಮ್ಮ ವ್ಯವಸ್ಥೆಯಲ್ಲಿಲ್ಲ

- ಡಾ.ಜಿ.ಪರಮೇಶ್ವರ್, ಸಚಿವ

ಮಟ್ಟ ಹಾಕಬಾರದು ಎನ್ನುವ ಕಾರಣಕ್ಕಾಗಿ ತರಬೇತಿ ನೀಡುತ್ತಿಲ್ಲ ಎಂಬ ಆರೋಪಗಳಿವೆ.

  ಯುಪಿಎ ಅಧಿಕಾರದ ಅವಧಿಯಲ್ಲಿ ಜಿಎಸ್‌ಟಿಗೆ ಭಾರೀ ವಿರೋಧ ವ್ಯಕ್ತಪಡಿಸಿದ ಕಾರಣ ಅದನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ
-ಎಂ.ವೀರಪ್ಪ ಮೊಯ್ಲಿ, ಸಂಸದ
  ಹಾಗಾದರೆ ಅದನ್ನು ಸಾಧಿಸಿದ ಎನ್‌ಡಿಎ ಸರಕಾರವನ್ನು ಅಭಿನಂದಿಸುತ್ತಿದ್ದೀರಿ ಎಂದಾಯಿತು.
---------------------
  ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ರಾಷ್ಟ್ರಪತಿಯಾಗಲಿ.
- ಜಾಫರ್ ಶರೀಫ್, ಮಾಜಿ ಸಚಿವ
ತಮ್ಮ ಕೈಯಲ್ಲಿರುವ ಊರುಗೋಲನ್ನು ಆರೆಸ್ಸೆಸ್ ಬೈಠಕ್ ಕವಾಯತಿಗೆ ಬಳಸಿಕೊಳ್ಳಬಹುದು.

---------------------
  ಗೆದ್ದರೆ ಒಳ್ಳೆಯ ಬೀಫ್ ಸಿಗುವಂತೆ ಮಾಡುತ್ತೇನೆ
-ಎನ್.ಶ್ರೀಪ್ರಕಾಶ್, ಮಲಪ್ಪುರಂ ಬಿಜೆಪಿ ಅಭ್ಯರ್ಥಿ
  ಸೋತರೆ ಬೀಫ್ ನಿಷೇಧ ಚಳವಳಿ ಆರಂಭಿಸುತ್ತೇನೆ ಎಂದರೆ ನೀವು ಗೆಲ್ಲುವುದು ಖಂಡಿತ.
---------------------
  ಗುಜರಾತ್‌ನ್ನು ಸಸ್ಯಾಹಾರಿ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ

 -ವಿಜಯ್ ರುಪಾನಿ, ಮುಖ್ಯಮಂತ್ರಿ

ನರಭಕ್ಷಕ ರಾಜ್ಯವೆನ್ನುವ ಕಳಂಕದಿಂದ ಯಾವಾಗ ಪಾರು ಮಾಡುತ್ತೀರಿ?
---------------------

share
ಪಿ.ಎ.ರೈ
ಪಿ.ಎ.ರೈ
Next Story
X