ಮಂಗಳೂರು: ಐಎಎಸ್, ಕೆಎಎಸ್ ಉಚಿತ ತರಬೇತಿ ಶಿಬಿರ
ಮಂಗಳೂರು,ಎ.3:ಪಂಜದ ಮಹಾತ್ಮ ಗಾಂಧಿ ವಿದ್ಯಾಪೀಠದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗೆ ಹಾಜರಾಗಲು ಉಚಿತ ತರಬೇತಿ ಶಿಬಿರಗಳನ್ನು ವಿವಿಧ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ತರಬೇತಿಯನ್ನು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜು ಹಂಪನಕಟ್ಟೆ , ಬಂಟ್ವಾಳದ ಸರಕಾರಿ ಪ.ಪೂ ಕಾಲೇಜು ಗೂಡಿನಬಳಿ,ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ಬೆಳ್ತಂಗಡಿ ಬಸ್ನಿಲ್ದಾಣದ ಬಳಿಯ ಮಾ.ಹಿ.ಪ್ರಾ.ಶಾಲೆಯಲ್ಲಿ ಅಪರಾಹ್ನ 2ರಿಂದ 4ರವೆಗೆ ತರಬೇತಿ ನಡೆಯಲಿದೆ.
ಉಳಿದಂತೆ ರವಿವಾರ ಸುಳ್ಯ ತಾಲೂಕಿನ ಪಂಜದ ಸ್ನೇಹ ಸದನ ಪಂಜ ಚರ್ಚ್ಬೆಳಗ್ಗೆ ಮತ್ತು ಅಪರಾಹ್ನದ ತರಗತಿಗಳು ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449451328,9986416811,7760841307 ಮೂಲಕ ಸಂಪರ್ಕಿಸಬಹುದು ಎಂದು ಪಂಜದ ಮಹಾತ್ಮ ಗಾಂಧಿ ವಿದ್ಯಾಪೀಠದ ಮುಖ್ಯಸ್ಥ ಪುರುಷೋತ್ತಮ ಮೂಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





