ಬೈಕ್ ಅಪಘಾತ ಸವಾರ ಮೃತ್ಯು, ಸಹಸವಾರ ಗಂಭೀರ

ಪುತ್ತೂರು, ಎ.3: ಕಾಣಿಯೂರು ಗ್ರಾಮದ ಪುಣ್ಚತ್ತಾರು ಸಮೀಪ ಬೈಕ್ ಅಪಘಾತ ಗೊಂಡಿದ್ದು ಬೈಕ್ ಸವಾರ ಮೃತಪಟ್ಟಿದ್ದು, ಸಹಸವಾರ ಗಂಭೀರ ಗಾಯಗೊಂಡಿರುವ ಬಗ್ಗೆ ರವಿವಾರ ಸಂಜೆ ನಡೆದಿದೆ.
ದೋಳ್ಪಾಡಿ ಗ್ರಾಮದ ಕೂರೆಲು ಕುಕ್ಕನಾಜೆ ನಿವಾಸಿ ಚೋಮ ಎಂಬವರ ಪುತ್ರ ಲಾರಿ ಚಾಲಕ ಚಂದ್ರಹಾಸ(30) ಮೃತಪಟ್ಟವರು. ಸಹ ಸವಾರ ದೋಳ್ಪಾಡಿ ಗ್ರಾಮದ ಮರಕಡ ನಿವಾಸಿ ಅಂಬೋಡಿ ಅವರ ಪುತ್ರ ಆನಂದ್(35) ಮಂಗಳೂರು ಆಸ್ಪತ್ರಗೆ ದಾಖಲಿಸಲಾಗಿದೆ.
ಕೆಂಪು ಕಲ್ಲು ಸಾಗಾಟದ ಲಾರಿ ಚಾಲಕರಾಗಿದ್ದ ಚಂದ್ರಹಾಸ ಅವರು ತನ್ನ ಬೈಕ್ನ ಸ್ನೇಹಿತ ಆನಂದ್ ಅವರೊಂದಿಗೆ ಬೈಕ್ನಲ್ಲಿ ನಿಂತಿಕಲ್ಲಿಗೆ ತೆರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಬೈಕ್ ಪುಣ್ಚತ್ತಾರು ಸಮೀಪದ ಬೊಬ್ಬೆಕೇರಿಯಲ್ಲಿ ಅಪಘಾತಗೊಂಡಿದ್ದು, ಚಂದ್ರಹಾಸರ ತಲೆಗೆ, ಆನಂದ್ರವರ ಮುಖದ ಭಾಗಕ್ಕೆ ಗಾಯವಾಗಿದ್ದು, ಗಾಯಾಳುಗಳನ್ನು ತಕ್ಷಣ ಕಾಣಿಯೂರು ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಸರಕಾರಿ ತರುತ್ತಿದ್ದ ಸಂದರ್ಭದಲ್ಲಿ ಚಂದ್ರಹಾಸ ಅವರು ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡ ಆನಂದ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಚಂದ್ರಹಾಸ ಅವರು ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





