Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಷ್ಟು ಹಿಂದೂಗಳಿಗೆ ಮುಸ್ಲಿಂ ಆಪ್ತ...

ಎಷ್ಟು ಹಿಂದೂಗಳಿಗೆ ಮುಸ್ಲಿಂ ಆಪ್ತ ಮಿತ್ರರಿದ್ದಾರೆ ? ಎಷ್ಟು ಮುಸ್ಲಿಮರಿಗೆ ಹಿಂದೂ ಆಪ್ತ ಮಿತ್ರರಿದ್ದಾರೆ ?

ಅತ್ಯಂತ ಕುತೂಹಲಕಾರಿ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ5 April 2017 1:21 PM IST
share
ಎಷ್ಟು ಹಿಂದೂಗಳಿಗೆ ಮುಸ್ಲಿಂ ಆಪ್ತ ಮಿತ್ರರಿದ್ದಾರೆ ?  ಎಷ್ಟು ಮುಸ್ಲಿಮರಿಗೆ  ಹಿಂದೂ ಆಪ್ತ ಮಿತ್ರರಿದ್ದಾರೆ ?

ಹೊಸದಿಲ್ಲಿ,ಎ.5 : ಶೇ. 91ರಷ್ಟು ಹಿಂದುಗಳಿಗೆ ತಮ್ಮ ಧರ್ಮದವರೇ ಆದ ಆತ್ಮೀಯ ಗೆಳೆಯರಿದ್ದರೆ, ಕೇವಲ ಶೇ. 33ರಷ್ಟು ಹಿಂದೂಗಳು ಮುಸ್ಲಿಮನೊಬ್ಬನನ್ನು ಆತ್ಮೀಯ ಗೆಳೆಯನಾಗಿ ಹೊಂದಿದ್ದಾರೆಂದು ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲೆಪಿಂಗ್ ಸೊಸೈಟೀಸ್ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಆದರೆ ಶೇ.74ರಷ್ಟು ಮುಸ್ಲಿಮರ ಆತ್ಮೀಯ ಸ್ನೇಹಿತನೊಬ್ಬ ಹಿಂದೂ ಆಗಿದ್ದರೆ, ಶೇ. 95 ರಷ್ಟು ಮಂದಿಗೆ ತಮ್ಮದೇ ಸಮುದಾಯದ ಆತ್ಮೀಯ ಸ್ನೇಹಿತರಿದ್ದಾರೆಂದೂ ಈ ಅಧ್ಯಯನ ತಿಳಿಸಿದೆ.

ಸ್ನೇಹ ಸಂಬಂಧಗಳನ್ನು ಬೆಳೆಸುವಲ್ಲಿಯೂ ಜನರು ಧರ್ಮವನ್ನು ಪರಿಗಣಿಸುತ್ತಾರೆಂಬುದು ಇದರಿಂದ ತಿಳಿಯುತ್ತದೆಯಲ್ಲದೆ ಜನರು ತಾವು ನಂಬಿಕೆಯಿರಿಸಬಹುದಾದವರ ಧರ್ಮವನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಾರೆಂಬುದು ಸ್ಪಷ್ಟ.

‘ಸೊಸೈಟಿ ಎಂಡ್ ಪೊಲಿಟಿಕ್ಸ್ ಬಿಟ್ವೀನ್ ಇಲೆಕ್ಷನ್ಸ್’ ಎಂಬ ವಿಷಯದ ಮೇಲೆ ನಡೆಸಲಾದ ಈ ಅಧ್ಯಯನದಲ್ಲಿ ಗುಜರಾತ್, ಹರ್ಯಾಣ, ಕರ್ನಾಟಕ ಹಾಗೂ ಒಡಿಶಾಗಳಲ್ಲಿ ಮುಸ್ಲಿಮರನ್ನು ಪ್ರತ್ಯೇಕಿಸಲಾಗಿರುವುದನ್ನೂ ಬೊಟ್ಟು ಮಾಡಿ ತೋರಿಸಲಾಗಿದೆ.

ಮುಸ್ಲಿಮರು ಅತಿಯಾದ ದೇಶಭಕ್ತರು ಎಂದು ಕೇವಲ ಶೇ.13ರಷ್ಟು ಹಿಂದೂಗಳು ತಿಳಿದಿದ್ದರೆ ಶೇ.20ರಷ್ಟು ಹಿಂದೂಗಳು ಕ್ರೈಸ್ತರನ್ನು ಹಾಗೂ ಶೇ.47ರಷ್ಟು ಹಿಂದೂಗಳು ಸಿಕ್ಖರನ್ನು ದೇಶಭಕ್ತರೆಂದು ತಿಳಿದಿದ್ದಾರೆ.

ಕನಿಷ್ಠ ಶೇ. 77ರಷ್ಟು ಮುಸ್ಲಿಮರು ತಮ್ಮ ಸಮುದಾಯ ಅತಿಯಾದ ದೇಶಭಕ್ತಿ ಹೊಂದಿದೆ ಎಂದು ನಂಬಿದ್ದರೆ ಶೇ.26ರಷ್ಟು ಕ್ರೈಸ್ತರು ಮುಸ್ಲಿಮರು ದೇಶಭಕ್ತರೆಂದು ತಿಳಿಯುತ್ತಾರೆಂದು ಅಧ್ಯಯನ ತಿಳಿಸಿದೆ.

ಕುತೂಹಲಕಾರಿ ವಿಚಾರವೆಂದರೆ ಕೇವಲ ಶೇ. 66ರಷ್ಟು ಸಿಕ್ಖರು ಹಿಂದುಗಳನ್ನು ಅತಿಯಾಧ ದೇಶಭಕ್ತರೆಂದು ತಿಳಿಯುತ್ತಾರೆ.

ಗೋವುಗಳಿಗೆ ಗೌರವ ತೋರದವರನ್ನು ಶಿಕ್ಷಿಸಬೇಕೇ ? ಸಾರ್ವಜನಿಕ ಸಮಾರಂಭಗಳಲ್ಲಿ ಭಾರತ್ ಮಾತಾ ಕಿ ಜೈ ಹೇಳಬೇಡಿ, ರಾಷ್ಟ್ರಗೀತೆಯನ್ನು ನುಡಿಸುವಾಗ ನಿಲ್ಲಬೇಡಿ ಅಥವಾ ಮತಾಂತರಗಳಲ್ಲಿ ತೊಡಗಿ ಮುಂತಾದ ವಿಚಾರಗಳಿಗೆ ನೀಡಿದ ಉತ್ತರದ ಅನುಸಾರವಾಗಿ ಜನರನ್ನು ಉದಾರವಾದಿಗಳು ಅಥವಾ ಬಹುಸಂಖ್ಯಾವಾದಿಗಳು ಎಂದು ಗುರುತಿಸಲಾಯಿತಲ್ಲದೆ ಶೇ. 72ರಷ್ಟು ಮಂದಿ ಕೊನೆಯ ವಿಭಾಗಕ್ಕೆ ಸೇರಿದರೆ, ಶೇ. 17ರಷ್ಟು ಮಂದಿ ದುರ್ಬಲ ವಿಚಾರವಾದಿಗಳಾಗಿದ್ದರೆ, ಶೇ. 6ರಷ್ಟು ಮಂದಿ ಉದಾರವಾದಿಗಳಾಗಿದ್ದರು ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಅದೇ ಸಮಯ ಸೇನೆಯು ಜನರ ಅತ್ಯಂತ ಹೆಚ್ಚು ವಿಶ್ವಾಸ ಸಂಪಾದಿಸಿದ್ದರೆ, ಪೊಲೀಸರು, ರಾಜಕೀಯ ಪಕ್ಷಗಳು ಮತ್ತು ಸರಕಾರಿ ಅಧಿಕಾರಿಗಳು ಕನಿಷ್ಠ ವಿಶ್ವಾಸ ಸಂಪಾದಿಸಿದವರಾಗಿದ್ದಾರೆಂದು ಈ ಅಧ್ಯಯನ ಕಂಡುಕೊಂಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X