Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ನವ್ಯ-ನವ್ಯೋತ್ತರ ಸಂಧಿಯಲ್ಲಿ ಹುಟ್ಟಿಕೊಂಡ...

ನವ್ಯ-ನವ್ಯೋತ್ತರ ಸಂಧಿಯಲ್ಲಿ ಹುಟ್ಟಿಕೊಂಡ - ಆ ದಿನ

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ6 April 2017 12:10 AM IST
share
ನವ್ಯ-ನವ್ಯೋತ್ತರ ಸಂಧಿಯಲ್ಲಿ ಹುಟ್ಟಿಕೊಂಡ - ಆ ದಿನ

ಶೂದ್ರ ಅವರು ನವ್ಯ ಮತ್ತು ನವ್ಯೋತ್ತರಗಳೆರಡರಲ್ಲೂ ಹರಡಿ ಕೊಂಡವರು. ಲಂಕೇಶರ ಬಿರುಕು, ತೇಜಸ್ವಿಯ ಸ್ವರೂಪ, ಅನಂತಮೂರ್ತಿ, ಚಿತ್ತಾಲ, ಶಾಂತಿನಾಥ ಮೊದಲಾದವರ ನವ್ಯ ಕಾದಂಬರಿಗಳು ಅಭಿವ್ಯಕ್ತಿಯ ಹೊಸ ಬಾಗಿಲನ್ನು ತೆರೆಯಿತು. ಸಾಹಿತ್ಯವೆನ್ನುವುದು ಹೊರಗಿನ ಚಟುವಟಿಕೆಗಳನ್ನು ಹೇಳುವುದಕ್ಕಿಂತ ಹೆಚ್ಚಾಗಿ ಮನುಷ್ಯನೊಳಗಿನ ಚಟುವಟಿಕೆಗಳನ್ನು ವ್ಯಕ್ತವಾಗಿಸುವುದನ್ನು ಪ್ರಧಾನವಾಗಿಸಿದ್ದು ನವ್ಯ ಬರಹಗಳು. ಕಾಮವನ್ನು ಕೇಂದ್ರವಾಗಿಟ್ಟುಕೊಂಡೂ ಬಹಳಷ್ಟು ಬರಹಗಳು ಬಂದವು. ಶೂದ್ರ ಅವರ ಹೊಸ ಕಾದಂಬರಿ ‘ಆ ದಿನ’ ಕುತೂಹಲವನ್ನು ಸೃಷ್ಟಿಸುವುದು ಈ ಕಾರಣಕ್ಕೆ. ಸದ್ಯದ ಸಂದರ್ಭದಲ್ಲಿ ಬರುವ ನವ್ಯೋತ್ತರ ಕಾದಂಬರಿಗಳು ಚರ್ಚಿಸುತ್ತಿರುವ ವಿಷಯಗಳಿಗೆ ಭಿನ್ನವಾಗಿ ನವ್ಯದ ಅಂತರ್ಮುಖೀ ಭಾವವನ್ನು ಉಳಿಸಿಕೊಂಡು ಬರೆದಿರುವ ಕಾದಂಬರಿ ಇದು. ಕಾಮ ಮನುಷ್ಯನ ವ್ಯಕ್ತಿತ್ವವನ್ನು ಅರಳಿಸುವಲ್ಲಿ, ರೂಪಿಸುವಲ್ಲಿ ಹಾಗೆಯೇ ಕೆಲವೊಮ್ಮೆ ಛೇದಿಸುವಲ್ಲೂ ಬಹಳಷ್ಟು ಪರಿಣಾಮಗಳನ್ನು ಬೀರುತ್ತದೆ. ‘ಆ ದಿನ’ ಹೇಗೆ ಒಬ್ಬ ಹೆಣ್ಣಿನ ಬದುಕನ್ನು ಕೊನೆಯವರೆಗೂ ನಿಯಂತ್ರಿಸುವುದಕ್ಕೆ ಹವಣಿಸುತ್ತದೆ ಮತ್ತು ಆಕೆ ಅದರಿಂದ ಪಾರಾಗಲು ಹವಣಿಸುತ್ತಾ ತನ್ನನ್ನು ತಾನು ಉಳಿಸಿಕೊಳ್ಳಲು ಹೇಗೆ ಯತ್ನಿಸುತ್ತಾಳೆ ಎನ್ನುವುದನ್ನು ಈ ಕಾದಂಬರಿ ತೆರೆದಿಡುತ್ತದೆ.

ಕಾದಂಬರಿ ಒಬ್ಬ ಸಾಹಿತ್ಯ ಅಧ್ಯಾಪಕಿಯ ಅಂತರಂಗದ ನಿರೂಪಣೆಯಾಗಿದೆ. ಜಗತ್ತಿನ ಹಲವು ಕ್ಲಾಸಿಕ್ ಕೃತಿಗಳ ಹಿನ್ನೆಲೆಯನ್ನು ಬಳಸಿಕೊಳ್ಳುತ್ತಾ, ಅವುಗಳೊಂದಿಗೆ ಕಥಾನಾಯಕಿ ಮುಖಾಮುಖಿಯಾಗುತ್ತಾಳೆ, ಒಂದು ಕನ್ನಡಿಯನ್ನು ಎದುರುಗೊಳ್ಳುವಂತೆ. ಆಕೆಯ ಏಕಾಂಗಿತನ, ಅನಾಥ ಪ್ರಜ್ಞೆಗಳಿಗೆ ಕಾರಣವಾಗುವ ‘ಆ ದಿನ’ದ ಘಟನೆ, ಪ್ರತಿಯೊಬ್ಬ ಅಂತರ್ಮುಖಿ ಒಂದಲ್ಲ ಒಂದು ಸಂದರ್ಭದಲ್ಲಿ ಎದುರುಗೊಂಡ ಘಟನೆಯೇ ಆಗಿರುತ್ತದೆ. ಓ. ಎಲ್. ನಾಗಭೂಷಣ ಸ್ವಾಮಿ ಹೇಳುವಂತೆ, ಬದುಕಿನ ಕೆಡುಕನ್ನು ಒಪ್ಪಿಕೊಂಡೂ ಇರುವ ಒಳಿತನ್ನು ಮರೆಯದೆ ಮನುಷ್ಯ ಸಂಬಂಧ, ಸಂಪರ್ಕ, ಸಹವಾಸಗಳ ವೌಲ್ಯವನ್ನು ಎತ್ತಿ ಹಿಡಿಯುವ ಉದ್ದೇಶವನ್ನು ಈ ಕಾದಂಬರಿ ಹೊಂದಿದೆ. ಶೂದ್ರ ಹೆಣ್ಣು ಮನಸ್ಸಿನ ಬರಹಗಾರರು. ಆದುದರಿಂದ ಹೆಣ್ಣೊಬ್ಬಳ ಒಳಸಂಘರ್ಷವನ್ನು ತನ್ನದಾಗಿಸಿಕೊಂಡು ಸರಾಗವಾಗಿ ನಿರೂಪಿಸಲು ಅವರಿಗೆ ಈ ಕಾದಂಬರಿಯಲ್ಲಿ ಸಾಧ್ಯವಾಗಿದೆ. ಬಹುಸಮಯದ ಬಳಿಕ ನವ್ಯ-ನವ್ಯೋತ್ತರ ಸಂಧಿಯಲ್ಲಿ ನಿಂತು ಶೂದ್ರ ಅವರು ಈ ಕಾದಂಬರಿಯನ್ನು ಓದುಗರಿಗೆ ನೀಡಿದ್ದಾರೆ. ಕಾದಂಬರಿ ಒಂದು ವಿಭಿನ್ನ ಅನುಭೂತಿಯನ್ನು ನೀಡುವಲ್ಲಿ ಖಂಡಿತ ಯಶಸ್ವಿ ಯಾಗಿದೆ.

ಅಭಿನವ ಪ್ರಕಾಶನ ಬೆಂಗಳೂರು ಹೊರತಂದಿರುವ ಈ ಕೃತಿಯ ಪುಟಗಳು 156. ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 94488 04905 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X