Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಿರಿಯಾ ರಾಸಾಯನಿಕ ದಾಳಿಗೆ ಬಲಿಯಾದ ಅವಳಿ...

ಸಿರಿಯಾ ರಾಸಾಯನಿಕ ದಾಳಿಗೆ ಬಲಿಯಾದ ಅವಳಿ ಮಕ್ಕಳಿಗೆ ವಿದಾಯ ಹೇಳುತ್ತಿರುವ ತಂದೆ

ಮನುಕುಲದ ಮನಕಲಕುವ ಚಿತ್ರ

ವಾರ್ತಾಭಾರತಿವಾರ್ತಾಭಾರತಿ6 April 2017 1:55 PM IST
share
ಸಿರಿಯಾ ರಾಸಾಯನಿಕ ದಾಳಿಗೆ ಬಲಿಯಾದ ಅವಳಿ ಮಕ್ಕಳಿಗೆ ವಿದಾಯ ಹೇಳುತ್ತಿರುವ ತಂದೆ

ಬೇರೂತ್,ಎ.6 : ಈ ಚಿತ್ರವನ್ನು ನೋಡಿದರೆ ಎಂಥವರ ಮನಕಲುಕದೆ ಇರದು. ಸಿರಿಯಾ ರಾಸಾಯನಿಕ ದಾಳಿಗೆ ಬಲಿಯಾದ ತನ್ನ ಒಂಬತ್ತು ತಿಂಗಳು ಪ್ರಾಯದ ಅವಳಿ ಮಕ್ಕಳನ್ನು ಪ್ರೀತಿಯಿಂದ ಎದೆಗವಚಿಕೊಂಡಿರುವ ಈ ಚಿತ್ರ ಸಾವಿರ ಮಾತುಗಳನ್ನು ಹೇಳುತ್ತದೆ. ‘‘ಗುಡ್ ಬೈ ಹೇಳು ಮಗುವೇ, ಗುಡ್ ಬೈ ಹೇಳು,’’ ಎಂದು ಆ ದುಃಖತಪ್ತ ತಂದೆ ತನ್ನ ಶಿಶುಗಳಿಗೆ ವಿದಾಯ ಹೇಳುತ್ತಿರುವ ವೀಡಿಯೋ ನೋಡಿದರೆ ಕಣ್ಣಲ್ಲಿ ನೀರು ಬಾರದೇ ಇರದು.

ತನ್ನ ಈ ಮುದ್ದು ನಿರ್ಜೀವ ಕಂದಮ್ಮಗಳನ್ನು ಅಬ್ದುಲ್ ಹಮೀದ್ ಅಲ್ ಯೂಸೆಫ್ ಎಂಬ ಆ ತಂದೆ ಈ ದಾಳಿಗೆ ಬಲಿಯಾದ ತನ್ನ ಕುಟುಂಬದ ಇತರ 22 ಮಂದಿಗಳನ್ನು ಸಮಾಧಿ ಮಾಡಿದ ಸ್ಥಳದಲ್ಲಿಯೇ ಸಮಾಧಿ ಮಾಡಿ ಬಿಟ್ಟಿದ್ದಾನೆ.

ಸಿರಿಯಾದ ಸಣ್ಣ ಪಟ್ಟಣವಾದ ಖಾನ್ ಶೇಖೌನ್ ಎಂಬಲ್ಲಿ ನಡೆದ ಈ ದಾಳಿಯಲ್ಲಿ ಕನಿಷ್ಠ 30 ಮಕ್ಕಳು ಹಾಗೂ 20 ಮಹಿಳೆಯರು ಸೇರಿದಂತೆ 80ಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದಾರೆ. ಈ ಪಟ್ಟಣದ ಪ್ರಮುಖ ಕುಟುಂಬವಾದ ಅಲ್ ಯೂಸೆಫ್ ಕುಟುಂಬದಲ್ಲಿ ಅತೀ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ದುರಂತ ಇಡೀ ಪಟ್ಟಣವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಈ ಭೀಕರ ರಾಸಾಯನಿಕ ದಾಳಿ ನಡೆದಾಗ ಅಬ್ದುಲ್ ಹಮೀದ್ ಅಲ್ ಯೂಸೆಫ್ ತನ್ನಿಬ್ಬರು ಅವಳಿ ಮಕ್ಕಳೊಂದಿಗಿದ್ದ. ‘‘ನನ್ನ ಹೆಂಡತಿ ಹಾಗೂ ಪುಟ್ಟ ಕಂದಮ್ಮಗಳನ್ನು ಮನೆಯ ಹೊರಗೆ ಕರೆದುಕೊಂಡು ಹೋದೆ,’’ ಎಂದು ಸ್ಥಳೀಯವಾಗಿ ಒಂದು ಅಂಗಡಿಯನ್ನು ನಡೆಸುವ ಯೂಸೆಫ್ ಹೇಳುತ್ತಾನೆ. ‘‘ಆಗ ಇಬ್ಬರು ಮಕ್ಕಳು ಹಾಗೂ ಪತ್ನಿ ಚೆನ್ನಾಗಿಯೇ ಇದ್ದರು. ಆದರೆ ಹತ್ತು ನಿಮಿಷಗಳಾಗುವಷ್ಟರಲ್ಲಿ ಅವರು ಅಸ್ವಸ್ಥರಾದರು. ಕೂಡಲೇ ಸ್ಥಳೀಯ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಬೇರೆ ಸಂಬಂಧಿಗಳೆಲ್ಲಿದ್ದಾರೆಂದು ತಿಳಿಯ ಹೊರಟಾಗ ಇಬ್ಬರು ಸಹೋದರರು ಇಬ್ಬರು ಸೋದರಳಿಯಂದಿರು, ಸೋದರ ಸೊಸೆ ಹಾಗೂ ಹಲವಾರು ನೆರೆಹೊರೆಯವರ ಹಾಗೂ ಸ್ನೇಹಿತರ ದೇಹಗಳು ಪತ್ತೆಯಾದವು,’’ ಎಂದು ಆತ ಹೇಳುತ್ತಾನೆ. ಕೊನೆಗೆ ತನ್ನ ಪತ್ನಿ ಹಾಗೂ ಅವಳಿ ಮಕ್ಕಳೂ ಸತ್ತಿದ್ದಾರೆಂದು ತಿಳಿದಾಗ ಆತನಿಗಾದ ಆಘಾತ ಅಷ್ಟಿಷ್ಟಲ್ಲ.

ಹಮೀದ್ ಕೂಡ ಈಗ ಚಿಕಿತ್ಸೆ ಪಡೆಯುತ್ತಿದ್ದರೂ ತನ್ನವರನ್ನು ಕಳೆದುಕೊಂಡ ದುಃಖವೇ ಆತನಿಗೆ ಸಹಿಸಲಸಾಧ್ಯವಾಗಿ ಬಿಟ್ಟಿದೆ, ಎನ್ನುತ್ತಾರೆ ಬದುಕುಳಿದಿರುವ ಆತನ ಕೆಲ ಸಂಬಂಧಿಕರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X