Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಂದು ವಿರೋಧಿಸುತ್ತಿದ್ದವರು ಇಂದು...

ಅಂದು ವಿರೋಧಿಸುತ್ತಿದ್ದವರು ಇಂದು ಮಾಡುತ್ತಿರುವುದೇನು?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು6 April 2017 4:05 PM IST
share
ಅಂದು ವಿರೋಧಿಸುತ್ತಿದ್ದವರು ಇಂದು ಮಾಡುತ್ತಿರುವುದೇನು?

1993ರ ವೇಳೆಗೆ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಮತ್ತು ಅಂದಿನ ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್‌ರವರು ಜನರಲ್ ಅಗ್ರಿಮೆಂಟ್ಸ್ ಆನ್ ಟ್ಯಾರಿಫ್ಸ್ ಆ್ಯಂಡ್ ಟ್ರೇಡ್ (GATT) ಎಂಬ ಅಂತಾರಾಷ್ಟ್ರೀಯ ವ್ಯವಹಾರ ಒಪ್ಪಂದಕ್ಕೆ ಭಾರತದ ಒಪ್ಪಿಗೆ ನೀಡುವ ಹಂತದಲ್ಲಿದ್ದರು.

ಜಸ್ವಂತ್ ಸಿಂಗ್ ಎಂಬ ಸೇನಾನಿ ಹಾಗೂ ವೀರೇನ್ ಷಾ ಎಂಬ ವ್ಯವಹಾರಸ್ಥ ಬಿಟ್ಟರೆ ಅಂದಿನ ಬಿಜೆಪಿಯಲ್ಲಿ ಬೇರಾರಿಗೂ ಈ ಒಪ್ಪಂದದ ಬಗ್ಗೆ ಸುತರಾಂ ಮನಸ್ಸಿರಲಿಲ್ಲ. ಅಡ್ವಾಣಿ, ವಾಜಪೇಯಿ ಆದಿಯಾಗಿ ಎಲ್ಲರೂ ಗ್ಯಾಟ್ ವಿರುದ್ಧ ಇದ್ದರು.

ಸ್ವತಃ ವಾಜಪೇಯಿಯವರು ‘‘ಭಾರತ ಡಂಕಲ್ ಪ್ರಸ್ತಾಪದ ಕರಡು ಪ್ರತಿಗೆ ಒಪ್ಪಿಗೆ ನೀಡಲು ಐಎಂಎಫ್ ಮತ್ತು ವಿಶ್ವಬ್ಯಾಂಕಿನ ಚಿತಾವಣೆಗಳೇ ಕಾರಣ’’ ಎಂದು ನೇರವಾಗಿ ಹರಿಹಾಯ್ದಿದ್ದರು. ಮುಂದೆ ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಈ ಕೆಳಗಿನ ನಿರ್ಣಯವನ್ನೂ ಸ್ವೀಕರಿಸಿತ್ತು:

‘‘ನಾವು ಕೇಳಿದ್ದು fair trade free trade ಹೊರತು ಅಲ್ಲ, ಆದರೆ ನಮಗೆ ಸಿಕ್ಕಿರುವುದು ಅತ್ಯಂತ ಅನ್ಯಾಯದ ಟ್ರೇಡಿಂಗ್ ವ್ಯವಸ್ಥೆಯಾಗಿದ್ದು, ಇಲ್ಲಿ ಸಿರಿವಂತ ದೇಶಗಳು ತಮ್ಮ ಆರ್ಥಿಕ ಮತ್ತು ರಾಜಕೀಯ ಬಲಗಳನ್ನು ಬಳಸಿ ಬಡ ದೇಶಗಳ ಮೇಲೆ ಸವಾರಿ ಮಾಡಿವೆ. ಇದರಿಂದಾಗಿ ಭಾರತದ ಗ್ರಾಹಕರು ಮತ್ತು ಉತ್ಪಾದಕರು ಬಲವಾದ ವಿದೇಶೀ ಕಾರ್ಪೊರೇಟ್‌ಗಳ ಎದುರು ಕೈಯೊಡ್ಡಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ತೃತೀಯ ಜಗತ್ತು ಈಗ ಮತ್ತೆ ಹೊಸ ವಿಧದ ಕೊಲೋನಿಯಲ್ ಆಕ್ರಮಣದ ಅಪಾಯ ಎದುರಿಸುತ್ತಿದೆ’’ (ಇದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯು 1993ರಲ್ಲಿ ಗ್ಯಾಟ್ ಒಪ್ಪಂದದ ಮೇಲೆ ಸ್ವೀಕರಿಸಿದ ನಿರ್ಣಯದ ಕನ್ನಡ ರೂಪ.)

ಇಂದು ‘ಡಬ್ಲೂಟಿಒ’ನದ್ದೇ ಮರ್ಜಿ

ಇವತ್ತಿನ ಸ್ಥಿತಿಯಲ್ಲಿ ಗ್ಯಾಟ್ ಒಪ್ಪಂದದ ಪರವಾಗಿ ನಿಲ್ಲದೆ ಬೇರೆ ಹಾದಿ ಇಲ್ಲ ಎಂಬುದು ಸತ್ಯ; ಅದರ ಒಳಿತು-ಕೆಡಕುಗಳ ವಿಶ್ಲೇಷಣೆ ಬೇರೆಯದೇ ಚರ್ಚೆ. ಆದರೆ, ಹಿಂದೆ ವಿರೋಧ ಪಕ್ಷವಾಗಿದ್ದಾಗ ಕೇವಲ ರಾಜಕೀಯ ಕಾರಣಗಳಿಗಾಗಿ ಈ ನಿರ್ಧಾರವನ್ನು ವಿರೋಧಿಸಿ ಒಂದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಪಕ್ಷವೊಂದು ಈಗ ತಾನು ಅಧಿಕಾರಕ್ಕೆ ಬಂದಮೇಲೆ ಅದೇ ನಿರ್ಧಾರವನ್ನು ಬಿರುಸಿನಿಂದ ತೆಗೆದುಕೊಳ್ಳುತ್ತಾ, ಅದು ತನ್ನದೇ ಸಾಧನೆ ಎಂದು ಕ್ರೆಡಿಟ್ ತೆಗೆದುಕೊಳ್ಳುತ್ತಿರುವುದು ‘‘ಸಾರ್ವಜನಿಕ ನೆನಪು ಎಷ್ಟು ಅಲ್ಪಾಯು’’ ಎಂಬುದನ್ನಲ್ಲದೇ ಬೇರೇನನ್ನೂ ಸೂಚಿಸುವುದಿಲ್ಲ.

2010ರ ಹೊತ್ತಿಗೇ ಭಾರತ ದೇಶದ ಒಳಗಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸರಕು ಮತ್ತು ಸೇವಾ ತೆರಿಗೆ (GST) ಮತ್ತು ಅಂತಾರಾಷ್ಟ್ರೀಯ ಸೀಮಾ ಸುಂಕವನ್ನೊಳಗೊಂಡ ವ್ಯವಹಾರಗಳಿಗಾಗಿ ವಾಣಿಜ್ಯ ಸೌಲಭ್ಯ ಒಪ್ಪಂದ (Trade Facilitation Agreement – TFA ) ಮಾಡಿ ಮುಗಿಸಿಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ದೇಶವನ್ನು ವಿದೇಶಿ ಕಾರ್ಪೊರೇಟ್‌ಗಳಿಗೆ ಮಾರುತ್ತಿದೆ ಎಂಬ ವಿಪಕ್ಷಗಳ ವಿರೋಧಕ್ಕೆ ಮಣಿದ ಅಂದಿನ ಕಾಂಗ್ರೆಸ್ ಸರಕಾರ ರೂಪಾಯಿಯ ಪರಿವರ್ತನೀಯತೆ ಸೇರಿದಂತೆ ಉದಾರೀಕರಣದ ಎಲ್ಲ ರಂಗಗಳಲ್ಲೂ ವಿನಾಕಾರಣ ಬ್ರೇಕ್ ಹಾಕಿಸಿಕೊಳ್ಳಬೇಕಾಯಿತು.

ಡಾ. ಮನಮೋಹನ್ ಸಿಂಗ್ ಅವರಿಗೆ ತಾನು ನಂಬಿದ್ದ ಹಾದಿಯಲ್ಲಿ ನಡೆಯಲು ವ್ಯವಸ್ಥೆ ಬಿಡದಿದ್ದುದರಿಂದ ಅಂತಿಮವಾಗಿ ಡಾ. ಸಿಂಗ್ ಮತ್ತವರ ಉದಾರೀಕರಣ ನೀತಿ ಎಡಬಿಡಂಗಿಯಂತೆ ಕಾಣಿಸಿಕೊಳ್ಳುವಂತಾಯಿತು.

  ಆವತ್ತಿಗೆ ಯಾರೇ ಅಧಿಕಾರದಲ್ಲಿದ್ದರೂ, ಈ ಜಿಎಸ್ಟಿ ಮತ್ತು ಟಿಎಫ್‌ಎಗಳಿಗೆ ಒಪ್ಪಿಗೆ ನೀಡುವುದು ಅನಿವಾರ್ಯವಾಗಿತ್ತು. ಯಾಕೆಂದರೆ, ದೇಶಕ್ಕೆ ಸಾಲ ಕೊಟ್ಟಿರುವ ವಿಶ್ವಬ್ಯಾಂಕ್, ಎಬಿಡಿಯಂತಹ ಸಂಸ್ಥೆಗಳು ಇದನ್ನು ಅನಿವಾರ್ಯಗೊಳಿಸಿ, ದೇಶದ ಮೇಲೆ ಒತ್ತಡ ಹಾಕಿ ಕುಳಿತಿದ್ದವು. ಆದರೆ ಹಾಲಿ ಕೇಂದ್ರದಲ್ಲಿರುವ ಸರಕಾರ ಮಾತ್ರ ಬಹಳ ಚಾಣಾಕ್ಷತನದಿಂದ ಇದು ತನ್ನದೇ ಸಾಧನೆ ಎಂದು ತನ್ನ ತುತ್ತೂರಿ ಮಾಧ್ಯಮಗಳ ಮೂಲಕ ಊದಿಸಿಕೊಳ್ಳುತ್ತಾ ಡಬ್ಲೂಟಿಒ ಶರತ್ತುಗಳಿಗೆಲ್ಲ ಒಪ್ಪಿಗೆ ಕೊಡುತ್ತಿದೆ. ಜಿಎಸ್ಟಿಗೆ ಸಂಸತ್ತಿನ ಅನುಮೋದನೆ ಸಿಕ್ಕಿದ್ದು, 2017 ಜುಲೈನಿಂದ ಜಾರಿಗೆ ಬರಲಿದೆ.

ಟಿಎಫ್‌ಎ ಅನುಷ್ಠಾನ ಅಂತಿಮ ಹಂತ ತಲುಪಿದ್ದು, ಕೇಂದ್ರ ಸರಕಾರ ಈಗಾಗಲೇ ಡಬ್ಲೂಟಿಒ ಒಪ್ಪಂದದ ವಿಧಿ 23.2ರನ್ವಯ ಕ್ಯಾಬಿನೆಟ್ ಸೆಕ್ರೆಟರಿ ಪಿ. ಕೆ. ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ಎನ್‌ಸಿಟಿಎಫ್ (National Committee on Trade Facilitation)ನ್ನು ರಚಿಸಿದೆ. ಆದರೆ ಈಗ ಅಮೆರಿಕದಲ್ಲಿ ಬದಲಾಗಿರುವ ಸನ್ನಿವೇಶದಲ್ಲಿ ಅಲ್ಲಿನ ಆಡಳಿತ ತನ್ನ ವೀಸಾ ನೀತಿಯಲ್ಲಿ ಬದಲಾವಣೆಗಳನ್ನು ಘೋಷಿಸಿದೆ.

ಹಾಗಾಗಿ ಡಬ್ಲೂಟಿಒ ಸವಲತ್ತು ‘ಟ್ರೇಡ್’ ಜೊತೆ ‘ಸೇವೆ’ಗಳಿಗೂ ಅಗತ್ಯ ಎಂಬ ಹೊಸ ವರಾತವನ್ನು ಭಾರತ ತೆಗೆದಿದ್ದು, 2017ರ ಡಿಸೆಂಬರ್‌ನಲ್ಲಿ ಅರ್ಜಂಟೀನಾದ ಬ್ಯುನೊಸ್ ಐರಿಸ್‌ನಲ್ಲಿ ಜರಗಲಿರುವ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಈ ವಿಚಾರ ಚರ್ಚೆ ಆಗಲಿದೆ. ಅಮೆರಿಕ, ಐರೋಪ್ಯ ದೇಶಗಳು ಭಾರತದ ಈ ನಿಲುವನ್ನು ವಿರೋಧಿಸುವ ನಿರೀಕ್ಷೆಯಿದ್ದು, ಈ ಬಗ್ಗೆ ಏನು ತೀರ್ಮಾನ ಆಗಲಿದೆ ಎಂಬುದು ಸದ್ಯಕ್ಕೆ ಕುತೂಹಲಕರ ಸಂಗತಿಯಾಗಿದೆ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X