Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಿರಿಯ ರಾಸಾಯನಿಕ ದಾಳಿ : ಸಮಯಸ್ಫೂರ್ತಿ...

ಸಿರಿಯ ರಾಸಾಯನಿಕ ದಾಳಿ : ಸಮಯಸ್ಫೂರ್ತಿ ಮೆರೆದು ಬದುಕುಳಿದ ಸಾಹಸಿ

ವಾರ್ತಾಭಾರತಿವಾರ್ತಾಭಾರತಿ7 April 2017 7:31 PM IST
share
ಸಿರಿಯ ರಾಸಾಯನಿಕ ದಾಳಿ : ಸಮಯಸ್ಫೂರ್ತಿ ಮೆರೆದು ಬದುಕುಳಿದ ಸಾಹಸಿ

ಇದ್ಲಿಬ್ (ಸಿರಿಯ), ಎ. 7: ಸಿರಿಯದ ಇದ್ಲಿಬ್ ಪ್ರಾಂತದ ಖಾನ್ ಶೇಖೂನ್ ಪಟ್ಟಣದಲ್ಲಿ ಶಂಕಿತ ರಾಸಾಯನಿಕ ದಾಳಿ ನಡೆದ ಕ್ಷಣಗಳ ಬಳಿಕ ಅವರ ಕಾಲುಗಳಲ್ಲಿನ ಸ್ಪರ್ಶಜ್ಞಾನ ನಿಧಾನವಾಗಿ ಕಡಿಮೆಯಾಗುತ್ತಿತ್ತು. ಆ ಕ್ಷಣಗಳಲ್ಲಿ ಹಸನ್ ಯೂಸುಫ್ ತೋರಿದ ಸಮಯಸ್ಫೂರ್ತಿ ಅವರ ಜೀವವನ್ನು ಉಳಿಸಿತು, ಕಾಲುಗಳನ್ನಲ್ಲ.

‘‘ರಾಸಾಯನಿಕ ದಾಳಿಗಳು ನಡೆದಾಗ ಯಾರೂ ಬಾಂಬ್ ಆಶ್ರಯತಾಣಗಳಿಗೆ ಹೋಗಬಾರದು ಎಂದು ಟಿವಿಯಲ್ಲಿ ಹಾಗೂ ಇತರರು ಹೇಳುವುದನ್ನು ಕೇಳಿದ್ದೆ’’ ಎಂದು ಮಧ್ಯವಯಸ್ಕ ವ್ಯಕ್ತಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.‘‘ರಾಸಾಯನಿಕ ದಾಳಿ ನಡೆದಾಗ ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಹೋಗಬೇಕು’’ ಎಂದು ಅವರು ಹೇಳುತ್ತಾರೆ.

ಬಂಡುಕೋರರ ನಿಯಂತ್ರಣದಲ್ಲಿರುವ ಇದ್ಲಿಬ್ ಪ್ರಾಂತದ ಆಸ್ಪತ್ರೆಯೊಂದರಲ್ಲಿ ಅವರು ಮಲಗಿದ್ದಾರೆ. ಅವರ ನಿಶ್ಚಲ ಕಾಲುಗಳಿಗೆ ಬಿಳಿ ಬಟ್ಟೆಯನ್ನು ಸುತ್ತಲಾಗಿದೆ.ರಾಸಾಯನಿಕ ದಾಳಿಯಲ್ಲಿ ಕನಿಷ್ಠ 86 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.‘‘ಅದು ಸಾಮಾನ್ಯ ವಾಯು ದಾಳಿಯೆಂದು ನಾನು ಭಾವಿಸಿದ್ದೆ. ಆದರೆ, ಶೀಘ್ರವೇ ನನಗೆ ತಲೆ ಸುತ್ತಲು ಆರಂಭವಾಯಿತು.

ನನ್ನ ಎದುರಿನಲ್ಲೇ ಇಬ್ಬರು ಕುಸಿದು ಬಿದ್ದರು. ಆಗ ನನಗೆ ಗೊತ್ತಾಯಿತು ರಾಸಾಯನಿಕ ಅಸ್ತ್ರ ಪ್ರಯೋಗವಾಗಿದೆ ಎಂದು’’ ಎಂದರು.ಬಳಿಕ ಅವರು ತಡ ಮಾಡಲಿಲ್ಲ. ಸಮೀಪದ ಕಟ್ಟಡದತ್ತ ಧಾವಿಸಿದರು. ಇನ್ನಷ್ಟು ರಾಸಾಯನಿಕವನ್ನು ಸೇವಿಸುವ ಮೊದಲು ಎಷ್ಟು ಸಾಧ್ಯವೋ ಅಷ್ಟು ಎತ್ತರಕ್ಕೆ ಹೋಗುವುದು ಅವರ ಗುರಿಯಾಗಿತ್ತು.‘‘ಕಟ್ಟಡದ ತುದಿಗೆ ಹೋಗುವುದರ ಹೊರತು ಬೇರೆ ಯಾವುದನ್ನೂ ನಾನು ಆ ಕ್ಷಣದಲ್ಲಿ ಯೋಚಿಸಲಿಲ್ಲ’’ ಎಂದರು.

ಕೆಲವು ಹೆಜ್ಜೆಗಳನ್ನು ಹತ್ತುವುದರಲ್ಲಿಯೇ ಅವರು ಕುಸಿದರು. ಬಳಿಕ ಕೈಗಳು ಮತ್ತು ಮೊಣಗಾಲುಗಳ ಮೂಲಕವೇ ಉಳಿದ ಮೆಟ್ಟಿಲುಗಳನ್ನು ಹತ್ತಿದರು.

 ‘‘ನನ್ನ ಇಡೀ ದೇಹ ಸ್ತಬ್ಧವಾಗಿತ್ತು. ಸ್ಪರ್ಶಜ್ಞಾನ ಕಡಿಮೆಯಾಗುತ್ತಿತ್ತು ಹಾಗೂ ಪ್ರಜ್ಞೆ ನಿಧಾನವಾಗಿ ತಪ್ಪುತ್ತಿತ್ತು. ನನ್ನ ಇಡೀ ದೇಹ ಸಂಪೂರ್ಣ ನಿಶ್ಚಲವಾದದ್ದು ನನ್ನ ಕೊನೆಯ ನೆನಪು. ನನ್ನ ಕೈಗಳನ್ನು ಹೊರತುಪಡಿಸಿ ಬೇರೇನೂ ಚಲಿಸುತ್ತಿರಲಿಲ್ಲ’’ ಎಂಬುದನ್ನು ಯೂಸುಫ್ ನೆನೆಸಿಕೊಂಡರು.
ಪ್ರಜ್ಞೆ ಬಂದಾಗ ನೆರೆಕರೆಯವರು ಅವರ ಸುತ್ತ ಸೇರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X