Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಾವು ನೆನಪಿಟ್ಟುಕೊಳ್ಳುವುದು ಹೇಗೆ?

ನಾವು ನೆನಪಿಟ್ಟುಕೊಳ್ಳುವುದು ಹೇಗೆ?

ಇಲ್ಲಿದೆ ಬಹಳ ಕುತೂಹಲಕಾರಿ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ8 April 2017 3:37 PM IST
share
ನಾವು ನೆನಪಿಟ್ಟುಕೊಳ್ಳುವುದು ಹೇಗೆ?

ನಮ್ಮ ಮಿದುಳಿನಲ್ಲಿ ನೆನಪುಗಳು ರೂಪುಗೊಳ್ಳುವಾಗ ಮತ್ತು ಅವು ಶೇಖರಗೊಳ್ಳುವಾಗ ನಿಜಕ್ಕೂ ನಡೆಯುವ ವಿದ್ಯಮಾನಗಳು ಸಂಶೋಧನೆಯೊಂದರಲ್ಲಿ ಬೆಳಕಿಗೆ ಬಂದಿವೆ ಮತ್ತು ಇವು ಸಂಶೋಧಕರಿಗೇ ಅಚ್ಚರಿಯನ್ನುಂಟು ಮಾಡಿವೆ.

 ಯಾವುದೇ ಘಟನೆಯಿರಲಿ, ಏಕಕಾಲದಲ್ಲಿ ಅದರ ಎರಡು ನೆನಪುಗಳನ್ನು ರೂಪಿಸಿಕೊಳ್ಳುವ ಮೂಲಕ ಮಿದುಳು ದುಪ್ಪಟ್ಟು ಕೆಲಸವನ್ನು ನಿರ್ವಹಿಸುತ್ತದೆ ಎನ್ನುವುದನ್ನು ನ್ಯೂರಲ್ ಸರ್ಕ್ಯೂಟ್ ಜೆನೆಟಿಕ್ಸ್‌ನ ರಿಕೆನ್-ಎಂಐಟಿ ಸೆಂಟರ್‌ನ ಅಮೆರಿಕ ಮತ್ತು ಜಪಾನಿ ವಿಜ್ಞಾನಿಗಳನ್ನೊಳಗೊಂಡ ತಂಡವು ಪತ್ತೆ ಹಚ್ಚಿದ್ದು, ‘ಸಾಯನ್ಸ್ ’ಜರ್ನಲ್ ಈ ಸಂಶೋಧನಾ ವರದಿಯನ್ನು ಪ್ರಕಟಿಸಿದೆ.

ಮಿದುಳು ಎರಡು ಬಾರಿ ನೆನಪುಗಳನ್ನು ದಾಖಲಿಸಿಕೊಳ್ಳುತ್ತದೆ. ಒಂದು ಯಾವಾಗಲಾದರೂ ನೆನಪಿಸಿಕೊಳ್ಳಲು ಮತ್ತು ಇನ್ನೊಂದು ಜೀವಿತಾವಧಿಯವರೆಗೆ.

ಎಲ್ಲ ನೆನಪುಗಳು ಅಲ್ಪಾವಧಿಯ ನೆನಪುಗಳಾಗಿ ಆರಂಭಗೊಳ್ಳುತ್ತವೆ ಮತ್ತು ನಿಧಾನವಾಗಿ ದೀರ್ಘಾವಧಿಯ ನೆನಪುಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಈವರೆಗೆ ಭಾವಿಸಲಾಗಿತ್ತು.

ನಮ್ಮ ವೈಯಕ್ತಿಕ ಅನುಭವಗಳನ್ನು ನೆನಪಿರಿಸಿಕೊಳ್ಳುವಲ್ಲಿ ಮಿದುಳಿನ ಎರಡು ಭಾಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಿಪ್ಪೋಕ್ಯಾಂಪಸ್ ಅಲ್ಪಾವಧಿ ನೆನಪುಗಳಿಗೆ ತಾಣವಾಗಿದ್ದರೆ, ಕಾರ್ಟೆಕ್ಸ್ ದೀರ್ಘಾವಧಿಯ ನೆನಪುಗಳ ಗೋದಾಮು ಆಗಿದೆ. 1950ರ ದಶಕದ ಹೆನ್ರಿ ಮೋಲಾಯಿಸನ್ ಪ್ರಕರಣದ ಬಳಿಕ ಈ ಪರಿಕಲ್ಪನೆ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು

ಮೂರ್ಛೆರೋಗಕ್ಕೆ ಸಂಬಂಧಿತ ಶಸ್ತ್ರಚಿಕಿತ್ಸೆ ಸಂದರ್ಭ ಹೆನ್ರಿಯ ಹಿಪ್ಪೋಕ್ಯಾಂಪಸ್‌ಗೆ ಹಾನಿಯುಂಟಾಗಿತ್ತು ಮತ್ತು ಇತ್ತೀಚಿನ ಯಾವುದೇ ವಿಷಯವನ್ನು ನೆನಪಿಸಿಕೊಳ್ಳಲು ಆತನಿಗೆ ಸಾಧ್ಯವಿರಲಿಲ್ಲ, ಆದರೆ ಶಸ್ತ್ರಚಿಕಿತ್ಸೆಗೂ ಮೊದಲಿನ ನೆನಪುಗಳು ಮಾತ್ರ ಹಸಿರಾಗಿದ್ದವು. ಹೀಗಾಗಿ ನೆನಪುಗಳು ಹಿಪ್ಪೋಕ್ಯಾಂಪಸ್‌ನಲ್ಲಿ ರೂಪುಗೊಳ್ಳುತ್ತವೆ ಮತ್ತು ಬಳಿಕ ಕಾರ್ಟೆಕ್ಸ್‌ಗೆ ಸ್ಥಳಾಂತರಗೊಂಡು ಅಲ್ಲಿ ಶೇಖರಣೆಯಾಗುತ್ತವೆ ಎನ್ನುವುದು ಈ ವರೆಗಿನ ಪರಿಕಲ್ಪನೆಯಾಗಿತ್ತು.

ಆದರೆ ವಸ್ತುಸ್ಥಿತಿ ಹೀಗಿಲ್ಲ ಎನ್ನುವ ಬೆರಗು ಬೀಳಿಸುವ ಅಂಶವನ್ನು ಸಂಶೋಧನಾ ವರದಿಯು ಹೊರಗೆಡವಿದೆ.

ಪ್ರಯೋಗಗಳನ್ನು ಇಲಿಗಳ ಮೇಲೆ ನಡೆಸಲಾಗಿತ್ತಾದರೂ ಅವು ಮಾನವನ ಮಿದುಳಿಗೂ ಅನ್ವಯಿಸುತ್ತವೆ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.

ಆಘಾತಕ್ಕೆ ಪ್ರತಿಕ್ರಿಯೆಯಾಗಿ ನಿರ್ದಿಷ್ಟ ನೆನಪುಗಳು ಪರಸ್ಪರ ಸಂಬಂಧಿತ ಮಿದುಳು ಕೋಶಗಳ ಗೊಂಚಲಾಗಿ ರೂಪುಗೊಳ್ಳುವುದನ್ನು ವೀಕ್ಷಿಸುವುದು ಈ ಪ್ರಯೋಗಗಳಲ್ಲಿ ಸೇರಿತ್ತು. ಬಳಿಕ ಪ್ರತ್ಯೇಕ ನರತಂತುಗಳ ಚಟುವಟಿಕೆಯನ್ನು ನಿಯಂತ್ರಿಸಲು ಮಿದುಳಿನೊಳಗೆ ಬೆಳಕಿನ ಕಿರಣಗಳನ್ನು ಹಾಯಿಸಲಾಗಿತ್ತು ಮತ್ತು ತನ್ಮೂಲಕ ನೆನಪುಗಳನ್ನು ಹಸಿರಾಗಿಸಲು ಅಥವಾ ಇಲ್ಲವಾಗಿಸಲು ಅವರಿಗೆ ಸಾಧ್ಯವಾಗಿತ್ತು. ಅಂತಿಮವಾಗಿ ಸಂಶೋಧಕರು ನೆನಪುಗಳು ಏಕಕಾಕದಲ್ಲಿ ಹಿಪ್ಪೋಕ್ಯಾಂಪಸ್ ಮತ್ತು ಕಾರ್ಟೆಕ್ಸ್‌ನಲ್ಲಿ ರೂಪುಗೊಳ್ಳುತ್ತವೆ ಎನ್ನುವುದನ್ನು ದೃಢಪಡಿಸಿದ್ದಾರೆ.

ಈ ಫಲಿತಾಂಶದ ಬಗ್ಗೆ ಸ್ವತಃ ಅಚ್ಚರಿ ವ್ಯಕ್ತಪಡಿಸಿರುವ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸುಸುಮು ಟೊನೆಗಾವಾ ಅವರು, ಇದು ದಶಕಗಳ ಕಾಲ ನಂಬಿ ಕೊಂಡಿದ್ದ ಕಲ್ಪಿತ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿದೆ ಎಂದು ತಿಳಿಸಿದ್ದಾರೆ.

ಹಿಪ್ಪೋಕ್ಯಾಂಪಸ್ ಮತ್ತು ಕಾರ್ಟೆಕ್ಸ್ ನಡುವಿನ ಸಂಪರ್ಕಕ್ಕೆ ದೀರ್ಘ ಕಾಲ ತಡೆಯುಂಟಾಗಿದ್ದರೆ ದೀರ್ಘಾವಧಿಯ ನೆನಪು ಎಂದಿಗೂ ಪಕ್ವಗೊಳ್ಳುವುದಿಲ್ಲ ಎನ್ನುವದನ್ನೂ ಸಂಶೋಧಕರು ಬೆಳಕಿಗೆ ತಂದಿದ್ದಾರೆ.

ಕ್ಯಾಂಬ್ರಿಜ್ ವಿವಿಯಲ್ಲಿ ನೆನಪಿನ ಮೇಲೆ ಸಂಶೋಧನೆ ನಡೆಸುತ್ತಿರುವ ಡಾ.ಎಮಿ ಮಿಲ್ಟನ್ ಅವರು ಟೊನೆಗಾವಾ ತಂಡದ ಸಂಶೋಧನೆಯನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ.

ತಮ್ಮ ಸಂಶೋಧನೆಯು ಮುಂದುವರಿದಿದ್ದು, ಬುದ್ಧಿಮಾಂದ್ಯತೆ ಸೇರಿದಂತೆ ಕೆಲವು ನೆನಪುಗಳ ಕಾಯಿಲೆಗಳಲ್ಲಿ ಏನಾಗುತ್ತದೆ ಎನ್ನುವುದರ ಮೇಲೆ ಬೆಳಕು ಚೆಲ್ಲಬಹುದು ಎಂದು ಟೊನೆಗಾವಾ ಹೇಳಿದ್ದಾರೆ.

ಅಲ್ಝೀಮರ್ಸ್ ರೋಗಿಗಳಲ್ಲಿ ಇನ್ನೂ ನೆನಪುಗಳು ರೂಪುಗೊಳ್ಳುತ್ತಿರುತ್ತವೆ, ಆದರೆ ಅವುಗಳನ್ನು ತಮ್ಮ ಸ್ಮತಿ ಪಟಲದಲ್ಲಿ ತಂದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಅವರ ಹಿಂದಿನ ಅಧ್ಯಯನವೊಂದು ತೋರಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X