Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಪ್ರಜಾತಂತ್ರವಿಲ್ಲದ ಸಂಸತ್ತು

ಪ್ರಜಾತಂತ್ರವಿಲ್ಲದ ಸಂಸತ್ತು

ಕೃಪೆ: ಅನು: ಶಿವಸುಂದರ್ಕೃಪೆ: ಅನು: ಶಿವಸುಂದರ್8 April 2017 10:09 PM IST
share
ಪ್ರಜಾತಂತ್ರವಿಲ್ಲದ ಸಂಸತ್ತು

ಧನ ಮಸೂದೆಗೆ ಮಾಡಿರುವ ತಿದ್ದುಪಡಿಗಳ ಮತ್ತೊಂದು ಕಳವಳಕಾರಿ ಅಂಶವೆಂದರೆ ಆದಾಯ ತೆರಿಗೆ ಕಾಯ್ದೆ-1961ಕ್ಕೆ ತಿದ್ದುಪಡಿ ತಂದು ಆದಾಯ ತೆರಿಗೆ ಅಧಿಕಾರಿಗಳ ಅಧಿಕಾರವನ್ನು ಹಿಗ್ಗಿಸಿ ಅಪರಿಮಿತ ಅಧಿಕಾರವನ್ನು ನೀಡಿರುವುದು. ಕೇವಲ ‘‘ನಂಬಲರ್ಹ ಕಾರಣವಿದ್ದರೆ ಸಾಕು’’, ಅನುಮಾನಿತರ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿಯನ್ನು ವಶಪಡಿಸಿಕೊಳ್ಳಬಹುದಾದ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ಈ ತಿದ್ದುಪಡಿಯು ಕೊಡುತ್ತದೆ ಮತ್ತು ಈ ತಿದ್ದುಪಡಿಗಳು 1962ರಷ್ಟು ಹಿಂದಿನ ಪ್ರಕರಣಗಳಿಗೂ ಪೂರ್ವಾನ್ವಯವಾಗುತ್ತದೆ. ಇದನ್ನು ದಾಳಿಗೊಳಗಾದವರು ಪ್ರಶ್ನಿಸಬಹುದು. ಆದರೆ ದಾಳಿ ಮಾಡಿದ ಕಾರಣವನ್ನು ಅಧಿಕಾರಿಗಳು ಯಾವುದೇ ಪ್ರಾಧಿಕಾರಕ್ಕಾಗಲೀ, ನ್ಯಾಯಮಂಡಳಿಗಾಗಲೀ ಬಹಿರಂಗಪಡಿಸಬೇಕಿಲ್ಲ.

ಇತ್ತೀಚೆಗೆ ಮುಕ್ತಾಯವಾದ ಸಂಸತ್ ಅಧಿವೇಶನದ ಕೊನೆಯ ಕ್ಷಣಗಳಲ್ಲಿ ಕೇಂದ್ರ ಸರಕಾರವು ತಾನು ಮಂಡಿಸಿದ್ದ 2017ರ ಧನ ಮಸೂದೆ (ಫೈನಾನ್ಸ್ ಬಿಲ್‌ಗೆ) ಹಲವಾರು ತಿದ್ದುಪಡಿಗಳನ್ನು ಸೇರಿಸಿಬಿಟ್ಟಿತು. ಇದರಿಂದಾಗಿ ಕೇಂದ್ರದ 40 ಕಾನೂನುಗಳು ಯಾವುದೇ ಚರ್ಚೆ/ಸಮಾಲೋಚನೆ ಇಲ್ಲದೆ ಮಾರ್ಪಾಡಾಗಿಬಿಟ್ಟಿವೆ. ಈ ಕ್ರಮದ ಮೂಲಕ ಸರಕಾರವು ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ಸರಕಾರಕ್ಕೆ ರಾಜಕೀಯ ಎದುರಾಳಿಗಳ ಜೊತೆಗೆ ಸಮಾಲೋಚನೆ ಮಾಡುವ ಪದ್ಧತಿಯ ಬಗ್ಗೆ ವಿಶ್ವಾಸವಿಲ್ಲ. ಸರಕಾರದ ಕಾಯ್ದೆಗಳನ್ನು ನ್ಯಾಯಾಂಗವು ಸ್ವತಂತ್ರವಾಗಿ ಪರಿವೀಕ್ಷಣೆ ಮಾಡುವುದರ ಬಗ್ಗೆ ಸಮ್ಮತಿಯಿಲ್ಲ.

ಅಷ್ಟು ಮಾತ್ರವಲ್ಲ. ತನ್ನ ಹಿಂದಿನ ಸರಕಾರದ ಮೇಲೆ ‘‘ತೆರಿಗೆ ಭಯೋತ್ಪಾದನೆ’’ಯ ಆರೋಪ ಮಾಡಿದ್ದವರು ಇದೀಗ ತೆರಿಗೆ ಅಧಿಕಾರಿಗಳಿಗೆ ನೀಡುತ್ತಿರುವ ಅಪರಿಮಿತ ಅಧಿಕಾರಗಳ ಬಗ್ಗೆ ಚರ್ಚೆ ಕೂಡಾ ಮಾಡಲೂ ಸಿದ್ಧರಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳಿಗೆ ನೀಡಲ್ಪಡುವ ದೇಣಿಗೆಯ ಪದ್ಧತಿಯು ಪಾರದರ್ಶಕವಾಗಿರಬೇಕೆಂಬ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳ ಮಳೆಗೆರೆದ ಈ ಸರಕಾರ ಈಗ ಅದಕ್ಕೆ ತದ್ವಿರುದ್ಧ ವಾದುದನ್ನೇ ಮಾಡಿದೆಯಲ್ಲದೆ ಭಾರತದ ಪ್ರಜಾತಂತ್ರವನ್ನು ಕಾರ್ಪೊರೇ್ ಆಸಕ್ತಿಗಳಿಗೆ ಹೆಚ್ಚಿನ ಅಡಿಯಾಳಾಗಿಸಿದೆ.

2017ರ ಧನ ಮಸೂದೆಯನ್ನು ಲೋಕಸಭೆಯಲ್ಲಿ ಒಂದು ಹಣಕಾಸು ಮಸೂದೆ (ಮನಿ ಬಿಲ್) ಯಾಗಿ ಮಂಡಿಸ ಲಾಯಿತು. ನಮ್ಮ ಎರಡು ಸದನಗಳ ಆಡಳಿತ ಪದ್ಧತಿಯಲ್ಲಿ ಹಣಕಾಸು ಮಸೂದೆಯ ಮೇಲೆ ಕೆಳಮನೆಗೆ (ಲೋಕಸಭೆಗೆ) ಪರಮೋಚ್ಚ ಅಧಿಕಾರವಿರುತ್ತದೆ. ಹಾಗಿದ್ದರೂ ಹಲವಾರು ಕಾನೂನುಗಳಿಗೆ ತಾನು ತರಬಯಸಿದ್ದ ಸಾರರೂಪದ ಮತ್ತು ದೂರಗಾಮಿ ಪರಿಣಾಮ ಬೀರಬಲ್ಲ ಬದಲಾವಣೆಗಳನ್ನು ಸರಕಾರವು ಈ ಹಣಕಾಸು ಮಸೂದೆಯ ರೂಪದಲ್ಲಿ ತಂದುಬಿಟ್ಟಿದೆ.

ಅಷ್ಟು ಮಾತ್ರವಲ್ಲ. ಆಧಾರ್ ಮಸೂದೆ-2016 ಅನ್ನು (ಈಗ ಆಧಾರ್ ಕಾಯ್ದೆ-2016) ಲೋಕಸಭೆಯ ಸಭಾಧ್ಯಕ್ಷರು ಒಂದು ಹಣಕಾಸು ಮಸೂದೆಯೆಂದು ವರ್ಗೀಕರಿಸಿ ಮಂಡನೆಗೆ ಅವಕಾಶ ಕೊಟ್ಟಿರುವುದನ್ನು ಆಕ್ಷೇಪಿಸಿ ರಾಜ್ಯಸಭೆಯ ಸದಸ್ಯರಾದ ಜೈರಾಂ ರಮೇಶ್ ಅವರು ಸಲ್ಲಿಸಿರುವ ಅಹವಾಲೊಂದು ಸುಪ್ರಿಂಕೋರ್ಟಿನ ಮುಂದಿದೆ. ಹಾಗಿದ್ದರೂ ಸರಕಾರ ಅದನ್ನು ಹಣಕಾಸು ಮಸೂದೆಯಾಗಿಯೇ ಲೋಕಸಭೆಯೆಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡು ಬಿಟ್ಟಿದೆ.ಸಂವಿಧಾನದ 110 (3)ನೆ ಕಲವು ಯಾವೆಲ್ಲಾ ಮಸೂದೆಗಳು ಹಣಕಾಸು ಮಸೂದೆಗೆ ಸೇರುತ್ತವೆ ಎಂಬ ಬಗ್ಗೆ ಅಂತಿಮ ತೀರ್ಮಾನ ಮಾಡುವ ಅಧಿಕಾರವನ್ನು ಲೋಕಸಭೆಯ ಸಪತಿಗಳಿಗೆ ಬಿಟ್ಟುಕೊಟ್ಟಿದ್ದರೂ, ಸಂವಿಧಾನದ 2017ರ ಧನ ಮಸೂದೆಯನ್ನು ಒಂದು ಹಣಕಾಸು ಮಸೂದೆಯನ್ನಾಗಿ ವರ್ಗೀಕರಿಸಿರುವುದನ್ನು ಸಮರ್ಥಿಸಿಕೊಳ್ಳುವುದು ಕಷ್ಟದ ಕೆಲಸ.

ಸಂವಿಧಾನದ 110 (1) ನೆ ಕಲಮಿನ ಪ್ರಕಾರ ತೆರಿಗೆ ವ್ಯವಹಾರ, ಸರಕಾರದ ಸಾಗಳು ಮತ್ತು ಖಾತ್ರಿಗಳು (ಗ್ಯಾರಂಟಿಗಳು), ಸರಕಾರದ ವೆಚ್ಚ ಅಥವಾ ಅಂಥಾ ವಿಷಯಗಳನ್ನು ಮಾತ್ರ ಹಣಕಾಸು ಮಸೂದೆಯಲ್ಲಿ ಪರಿಗಣಿಸಬಹುದು. ಸಾಮಾನ್ಯವಾಗಿ, ಪ್ರತಿವರ್ಷವೂ ನಡೆಯುವ ಬಜೆಟ್ ಕಸರತ್ತುಗಳು ಹಣಕಾಸು ಮಸೂದೆಯಾಗಿ ಅನುಮೋದಿಸಲ್ಪಡುತ್ತವೆ. ಆದರೆ 2017ರ ಧನ ಮಸೂದೆಯು ಹಲವಾರು ರೀತಿಯಲ್ಲಿ ಆ ೌಕಟ್ಟನ್ನು ಮೀರಿದ ಮಸೂದೆಯಾಗಿದೆ.

ಮೊದಲನೆಯದಾಗಿ ಈ ಹಣಕಾಸು ಮಸೂದೆಯ ಭಾಗವಾಗಿ 2013ರ ಕಂಪೆನಿ ಕಾಯ್ದೆಯ ಸೆಕ್ಷನ್ 182ಕ್ಕೆ ತಿಡ್ಡುಪಡಿ ಮಾಡಲಾಗಿದೆ. ಈ ಮೊದಲು ಸರಕಾರೇತರ ಕಂಪೆನಿಗಳು ತಮ್ಮ ಮೂರುವರ್ಷಗಳ ಸರಾಸರಿ ಲಾಭದ ಶೇ.7.5ರಷ್ಟನ್ನು ಮಾತ್ರ ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ಕೊಡಬಹುದಿತ್ತು. ಈಗ ತಂದಿರುವ ಹೊಸ ತಿದ್ದುಪಡಿಯ ಪ್ರಕಾರ ಕಂಪೆನಿಗಳು ಎಷ್ಟು ಹಣವನ್ನು ಬೇಕಾದರೂ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಈ ಹಿಂದಿನ ಕಾನೂನಿನ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಲಾಗಿದೆಯೆಂಬುದನ್ನು ಸ್ಪಷ್ಟಪಡಿಸಬೇಕಿತ್ತು. ಈಗ ತಂದಿರುವ ತಿದ್ದುಪಡಿಗಳು ದೇಣಿಗೆಯ ಮೊತ್ತದ ಮೇಲಿದ್ದ ಮಿತಿಯನ್ನು ತೆಗೆದುಹಾಕಿರುವುದು ಮಾತ್ರವಲ್ಲದೆ ದೇಣಿಗೆಕೊಟ್ಟ ಪಕ್ಷದ ಹೆಸರನ್ನು ಬಹಿರಂಗಗೊಳಿಸಬೇಕಿಲ್ಲವೆಂದು ಹೇಳುತ್ತದೆ.

1985ರಲ್ಲಿ 1956ರ ಕಂಪೆನಿ ಕಾಯ್ದೆಗೆ ತಿದ್ದುಪಡಿ ತರುವ ತನಕ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನೇ ಕೊಡುವಂತಿರಲಿಲ್ಲ. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಯನ್ನು ಪಡೆಯಲು ಅವಕಾಶ ಕೊಟ್ಟರೆ ಕಾರ್ಪೊರೇಟ್ ಸಂಸ್ಥೆಗಳು ಅವನ್ನು ಭವಿಷ್ಯದಲ್ಲಿ ‘‘ಲಾಭವನ್ನು ತರುವ’’ ಒಂದು ‘‘ಹೂಡಿಕೆ’’ಯೆಂದು ಭಾವಿಸುತ್ತಾರೆಂದು ಚುನಾವಣಾ ಸುಧಾರಣೆಯ ಬಗ್ಗೆ ರಚಿಸಲಾದ ಹಲವಾರು ಸಮಿತಿಗಳು ಅಭಿಪ್ರಾಯ ಪಟ್ಟಿದ್ದವು. ಸರಕಾರದ ನೀತಿಗಳು ಅಂಥ ದೇಣಿಗೆಗಳನ್ನು ಕೊಟ್ಟ ಕಂಪೆನಿಗಳ ಪರವಾಗಿ ರೂಪಿತವಾಗುವಂತೆ ಪ್ರಭಾವ ಬೀರುತ್ತದೆಂಬುದು ಅವರ ಪ್ರತಿಪಾದನೆಯಾಗಿತ್ತು.

ಪ್ರಸ್ತುತ ಜಾರಿಯಾಗಿರುವ ತಿದ್ದುಪಡಿಗಳು ದೇಶವನ್ನು ತದ್ವಿರುದ್ಧ ದಿಕ್ಕಿಗೆ ಎಳೆದೊಯ್ಯುವುದಲ್ಲದೆ ರಾಜಕೀಯ ಮತ್ತು ಉದ್ಯಮಗಳ ನಡುವಿನ ಒಳಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ದೇಣಿಗೆಯನ್ನು ಕೊಟ್ಟವರು ಅನಾಮಧೇಯರಾಗಿ ಉಳಿಯಲು ಅವಕಾಶ ಕೊಡುವ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಸಂಸ್ಥೆಗಳು ನೀಡುವ ದೇಣಿಗೆಗಳು ಇನ್ನಷ್ಟು ಅಪಾರದರ್ಶಕವಾಗುತ್ತದೆ ಮತ್ತು ಯಾವುದೇ ಉತ್ತರದಾಯಿತ್ವ ಮತ್ತು ಲೆಕ್ಕಪರಿಶೀಲನೆಯಿಂದ ಮುಕ್ತವಾಗುತ್ತವೆ.

ಲೋಕಸಭೆಯು 2013ರ ಕಂಪೆನಿ ಕಾಯ್ದೆಗೆ ಮಾಡಿದ ಈ ತಿದ್ದುಪಡಿಗಳಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಗಟ್ಟಲು ರಾಜ್ಯಸಭೆಯು ಹಲವಾರು ತಿದ್ದುಪಡಿಗಳನ್ನು ಅನುಮೋದಿಸಿದರೂ ಅವನ್ನು ಲೋಕಸಭೆಯು ತಿರಸ್ಕರಿಸಿತು. ಈ ಹಿಂದೆಯೂ ಸರಕಾರವು ಕಾರ್ಪೊರೇಟ್ ದೇಣಿಗೆಯ ಕುರಿತು ಈ ಬಗೆಯ ಅಪ್ರಜಾತಾಂತ್ರಿಕ ದಾರಿಯನ್ನೇ ಹಿಡಿದಿತ್ತು. ಲಂಡನ್ ಮೂಲದ ವೇದಾಂತ ಕಂಪೆನಿಯಿಂದ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ದೇಣಿಗೆಯನ್ನು ಸ್ವೀಕರಿಸಿರುವುದು ಕಾನೂನುಬಾಹಿರವೆಂದು ಇತ್ತೀಚೆಗೆ ಸುಪ್ರೀಂ ಕೋರ್ಟು ಆದೇಶ ನೀಡಿತ್ತು. ಅದರಿಂದ ತಪ್ಪಿಸಿಕೊಳ್ಳಲು ಸರಕಾರವು ಯಾವುದು ವಿದೇಶಿ ಕಂಪೆನಿ ಎಂಬ ನಿರ್ವಚನವನ್ನೇ ಬದಲಾಯಿಸುವ ತಿದ್ದುಪಡಿಯನ್ನು ಧನ ಮಸೂದೆ 2016ರಲ್ಲಿ ಅಳವಡಿಸಿ ಅನುಮೋದನೆ ಪಡೆದುಕೊಂಡಿತ್ತು.

ಹಾಗೆಯೇ ಕೆಲವು ನ್ಯಾಯಮಂಡಳಿಗಳನ್ನು (ಟ್ರಿಬ್ಯುನಲ್) ಇತರ ನ್ಯಾಯಮಂಡಳಿಗಳೊಂದಿಗೆ ಸೇರ್ಪಡೆ ಮಾಡುವ ತಿದ್ದುಪಡಿಗಳು ಸಹ ಕಳವಳಕಾರಿಯಾಗಿದೆ. ಈ ತಿದ್ದುಪಡಿಗಳು ನಿರ್ದಿಷ್ಟ ವಿಷಯ ಪರಿಣಿತಿಯುಳ್ಳ ನ್ಯಾಯಮಂಡಳಿಗಳ ಪ್ರಸ್ತುತತೆಯನ್ನೇ ಅಲ್ಲಗಳೆಯುತ್ತಾ ಸಂಬಂಧವಿಲ್ಲದ ನ್ಯಾಯಮಂಡಳಿಗಳನ್ನು ಒಂದಾಗಿ ವಿಲೀನಗೊಳಿಸುವುದಲ್ಲದೆ ಈಗಾಗಲೇ ಅಸ್ತಿತ್ವದಲ್ಲಿರುವ ನ್ಯಾಯಮಂಡಳಿಗಳ ಹೊರೆಯನ್ನೂ ಹೆಚ್ಚಿಸುತ್ತವೆೆ. ಅತ್ಯಂತ ಮುಖ್ಯವಾಗಿ ಈಗ ನ್ಯಾಯಮಂಡಳಿಗಳ ಸದಸ್ಯರ ನೇಮಕಾತಿಯಲ್ಲಿ, ಸೇವಾ ನಿಯಮಗಳನ್ನು ರೂಪಿಸುವಲ್ಲಿ, ಮತ್ತು ಅವರನ್ನು ವಜಾಗೊಳಿಸುವಲ್ಲಿ ಸರಕಾರವು ತನಗೆ ಹೆಚ್ಚಿನ ಪಾತ್ರವನ್ನು ಕಲ್ಪಿಸಿಕೊಂಡಿದೆ.

ಒಂದು ಅರೆ-ನ್ಯಾಯಿಕ ಸಂಸ್ಥೆಗಳಾಗಿ ಉಚ್ಚನ್ಯಾಯಾಲಯಗಳಿಗೆ ಸರಿಸಮಾನದ ಕಾರ್ಯಭಾರ ಮತ್ತು ಅಧಿಕಾರವನ್ನು ಹೊಂದಿರುವ ನ್ಯಾಯಮಂಡಳಿಗಳ ಸ್ವಾಯತ್ತತೆಯನ್ನೇ ಈ ತಿದ್ದುಪಡಿಗಳು ಮಕ್ಕಾಗಿಸುತ್ತದೆ. 2014ರಲ್ಲಿ ಸುಪ್ರೀಂ ಕೋರ್ಟೇ ಸೂಚಿಸಿದದಂತೆ ಇಂತಹ ಮಂಡಳಿಗಳ ನೇಮಕಾತಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪವಿರಬಾರದು. ಸರಕಾರವೇ ಕೆಲವೊಮ್ಮೆ ಅಂತಹ ನ್ಯಾಯಮಂಡಳಿಗಳಲ್ಲಿ ದೂರುದಾರನಾಗಿರುತ್ತದೆ. ಹೀಗಾಗಿ ನೇಮಕಾತಿಗಳಲ್ಲಿ ಸರಕಾರದ ಹಸ್ತಕ್ಷೇಪದಿಂದಾಗಿ ಉಂಟಾಗುವ ‘‘ಹಿತಾಸಕ್ತಿಗಳ ನಡುವಿನ ಸಂಘರ್ಷ’’ವನ್ನು ಸರಕಾರವು ನಿರಾಕರಿಸುತ್ತಿರುವುದು ದಿಗ್ಭ್ರಾಂತಿ ಮೂಡಿಸುತ್ತದೆ. ಸರಕಾರವು ಈ ವಿಷಯಗಳಲ್ಲಿ ನ್ಯಾಯಾಂಗದ ಜೊತೆ ಸಮಾಲೋಚಿಸುವುದಾಗಿ ರಾಜ್ಯಸಭೆಯಲ್ಲಿ ಭರವಸೆ ನೀಡಿದೆ. ಆದರೆ ಅ್ಟು ಸಾಲುವುದಿಲ್ಲ.

ಧನ ಮಸೂದೆಗೆ ಮಾಡಿರುವ ತಿದ್ದುಪಡಿಗಳ ಮತ್ತೊಂದು ಕಳವಳಕಾರಿ ಅಂಶವೆಂದರೆ ಆದಾಯ ತೆರಿಗೆ ಕಾಯ್ದೆ-1961ಕ್ಕೆ ತಿದ್ದುಪಡಿ ತಂದು ಆದಾಯ ತೆರಿಗೆ ಅಧಿಕಾರಿಗಳ ಅಧಿಕಾರವನ್ನು ಹಿಗ್ಗಿಸಿ ಅಪರಿಮಿತ ಅಧಿಕಾರವನ್ನು ನೀಡಿರುವುದು. ಕೇವಲ ‘‘ನಂಬಲರ್ಹ ಕಾರಣವಿದ್ದರೆ ಸಾಕು’’, ಅನುಮಾನಿತರ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿಯನ್ನು ವಶಪಡಿಸಿಕೊಳ್ಳಬಹುದಾದ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ಈ ತಿದ್ದುಪಡಿಯು ಕೊಡುತ್ತದೆ ಮತ್ತು ಈ ತಿದ್ದುಪಡಿಗಳು 1962ರಷ್ಟು ಹಿಂದಿನ ಪ್ರಕರಣಗಳಿಗೂ ಪೂರ್ವಾನ್ವಯವಾಗುತ್ತದೆ.

ಇದನ್ನು ದಾಳಿಗೊಳಗಾದವರು ಪ್ರಶ್ನಿಸಬಹುದು. ಆದರೆ ದಾಳಿ ಮಾಡಿದ ಕಾರಣವನ್ನು ಅಧಿಕಾರಿಗಳು ಯಾವುದೇ ಪ್ರಾಧಿಕಾರಕ್ಕಾಗಲೀ, ನ್ಯಾಯಮಂಡಳಿಗಾಗಲೀ ಬಹಿರಂಗಪಡಿಸಬೇಕಿಲ್ಲ. ಸಾರಾಂಶದಲ್ಲಿ ಇದೊಂದು ಕರಾಳ ಕ್ರಮವಾಗಿದ್ದು ತಮಗೆ ಬೇಡವಾದವರಿಗೆ ಕಿರುಕುಳ ನೀಡುವಂಥ ಮತ್ತು ಬೆದರಿಸುವಂತಹ ಅಧಿಕಾರವನ್ನು ತೆರಿಗೆ ಅಧಿಕಾರಿಗಳಿಗೆ ನೀಡುತ್ತದೆ. ಇಂತಹ ಕ್ರಮಗಳನ್ನು ತಡೆಗಟ್ಟಬಹುದಾದ ತಿದ್ದುಪಡಿಗಳನ್ನು ರಾಜ್ಯಸಭೆಯು ಸೂಚಿಸಿದರೂ ಲೋಕಸಭೆಯು ಅದನ್ನು ಸಾರಸಗಟು ತಿರಸ್ಕರಿಸಿದೆ.

ಈ ತಿದ್ದುಪಡಿಗಳ ಇತರ ಸೂಕ್ಷ್ಮ ಅಂಶಗಳನ್ನೂ ಸಹ ಚರ್ಚಿಸಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾದ ವಿಚಾರ ವೆಂದರೆ ನಮ್ಮ ಉಭಯ ಸದನಗಳ ಆಡಳಿತ ಪದ್ಧತಿಯನ್ನು ಮತ್ತು ಸಂವಿಧಾನದಲ್ಲಿ ಮೇಲ್ಮನೆಗೆ (ರಾಜ್ಯಸಭೆ) ಕಲ್ಪಿಸಲಾದ ಪಾತ್ರವನ್ನೇ ಈ ತಿದ್ದುಪಡಿಗಳು ಬುಡಮೇಲು ಮಾಡಿದೆ. ರಾಜ್ಯಸಭೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಇನ್ನೂ ಬಹುಮತವಿಲ್ಲವಾದ್ದರಿಂದ ತಮಗೆ ಬೇಕಾದ ಕಾನೂನುಗಳನ್ನು ರಾಜ್ಯಸಭೆಯ ಒಪ್ಪಿಗೆಯ ಅಗತ್ಯವೇ ಇಲ್ಲದ ರೀತಿ ಹಣಕಾಸು ಮಸೂದೆಯ ರೂಪದಲ್ಲಿ ಜಾರಿಗೆ ತಂದುಬಿಡುವುದು ಈ ಸರಕಾರವು ಪದೇಪದೇ ಅನುಸರಿಸುತ್ತಿರುವ ಪದ್ಧತಿಯಾಗುತ್ತಿದೆ. ಸಾರಾಂಶದಲ್ಲಿ, ಇದು ಲೋಕಸಭೆಯಲ್ಲಿ ಪ್ರಚಂಡ ಬಹುಮತ ಉಳ್ಳ ಸರಕಾರಮೊಂದು ತನ್ನನ್ನು ನಿಯಂತ್ರಿಸಬಹುದಾದ ರಾಜ್ಯಸಭೆಯ ಅಧಿಕಾರವನ್ನೇ ಮೊಟಕುಗೊಳಿಬಿಡುವಂಥ ವ್ಯೆಹತಂತ್ರವಾಗಿದೆ. ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಎಂಥಾ ಮಾರ್ಗವನ್ನಾದರೂ ಅನುಸರಿಸುತ್ತಿರುವ ಈ ಸರಕಾರ ಪ್ರಜಾತಾಂತ್ರಿಕ ಪದ್ಧತಿಗಳನ್ನು ಮಾತ್ರವಲ್ಲದೆ ಸಂವಿಧಾನದ ಗುಣಲಕ್ಷಣಕ್ಕೇ ಭಂಗ ತರುತ್ತಿದೆ.


 

share
ಕೃಪೆ: ಅನು: ಶಿವಸುಂದರ್
ಕೃಪೆ: ಅನು: ಶಿವಸುಂದರ್
Next Story
X