ಅನಾರೋಗ್ಯ ಪೀಡಿತ ದಂಪತಿಗೆ ಬಿರುವೆರ್ ಕುಡ್ಲದಿಂದ ಧನಸಹಾಯ

ಮಂಗಳೂರು, ಎ.9: ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಅಬುಧಾಬಿ ಬಿರುವೆರ್ ಕುಡ್ಲ ಘಟಕದ ವತಿಯಿಂದ ಉಪ್ಪಳದ ಪೆರ್ಮುದೆ ಎಂಬಲ್ಲಿ ವಾಸಿಸುತ್ತಿರುವ ಅನಾರೋಗ್ಯ ಪೀಡಿತ ದಂಪತಿಗೆ ಧನಸಹಾಯ ನೀಡಲಾಯಿತು.
ಫ್ರೆಂಡ್ಸ್ ಬಳ್ಲಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ ಸ್ಥಾಪನೆಯಾಗಿ ಒಂದೂವರೆ ವರ್ಷಗಳಲ್ಲಿಯೇ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿವೆ. ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ಬಾಗ್ ಮಾರ್ಗದರ್ಶನದಲ್ಲಿ ಸಂಘದ ಯುವಕರು ಜನಪರ ಕಾರ್ಯಗಳನ್ನು ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ದಕ್ಷಿಣ ಕನ್ನಡ ಮಾತ್ರವಲ್ಲದೆ ನೆರೆರಾಜ್ಯ ಕೇರಳ ಕಾಸರಗೋಡಿನಲ್ಲಿಯೂ ಅಶಕ್ತರಿಗೆ ಸಹಾಯ ಮಾಡಿದೆ.
ಉಪ್ಪಳದ ಪೆರ್ಮುದೆ ಎಂಬಲ್ಲಿ ಅನಾರೋಗ್ಯ ಪೀಡಿತರಾಗಿರುವ ಲಕ್ಷ್ಮಿ ಮತ್ತು ಪುರುಷೋತ್ತಮ ದಂಪತಿಯ ಮನೆಗೆ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ನೇತೃತ್ವದಲ್ಲಿ ತೆರಳಿದ ಅಬುಧಾಬಿ ಬಿರುವೆರ್ ಕುಡ್ಲ ಘಟಕದ ಸದಸ್ಯರು ಧನಸಹಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಸುರೇಶ್ ಪೂಜಾರಿ, ಅಬುಧಾಬಿ ಬಿರುವೆರ್ ಕುಡ್ಲ ಘಟಕದ ರಾಕೇಶ್, ನರೇಶ್ ಪೂಜಾರಿ, ಉದಯ ಕುಮಾರ್, ಹರ್ಷ, ಪುನೀತ್, ಯತೀಶ್ ಪೂಜಾರಿ, ಅಭಿಜಿತ್ ಅಭಿ ಬಿರ್ಕನಕಟ್ಟೆ ಉಪಸ್ಥಿರಿದ್ದರು. ಇದೇ ಸಂದರ್ಭದಲ್ಲಿ ಉಪ್ಪಳ ಪ್ರದೇಶದ ಬಡ ಕುಟುಂಬದ ಮಕ್ಕಳ ಶಿಕ್ಷಣಕ್ಕಾಗಿಯೂ ಸಂಘಟನೆ ವತಿಯಿಂದ ಧನಸಹಾಯ ಮಾಡಲಾಯಿತು.







