ನಾಯಿಗಳ ದಾಳಿಗೊಳಗಾಗಿ ಜಿಂಕೆ ಸಾವು

ಚಿಕ್ಕಮಗಳೂರು, ಎ.10: ಕುಡಿಯುವ ನೀರು ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದಿದ್ದ ವೇಳೆ ನಾಯಿಗಳು ದಾಳಿ ಮಾಡಿದ ಪರಿಣಾಮ ಒಂದು ವರ್ಷದ ಜಿಂಕೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ನೀರನ್ನು ಅರಸಿಕೊಂಡು ಎನ್.ಆರ್.ಪುರದ ಇಂಡಸ್ಟ್ರಿಯಲ್ ಏರಿಯಾಕ್ಕೆ ಜಿಂಕೆ ಬಂದಿತ್ತು. ಈ ಸಂದರ್ಭ ಅಲ್ಲಿದ್ದ ನಾಯಿಗಳು ದಾಳಿ ನಡೆಸಿವೆ. ಘಟನೆ ನಡೆದ ತಕ್ಷಣ ಪಶು ಇಲಾಖೆಯ ಅಧಿಕಾರಿಗಳು ಜಿಂಕೆಗೆ ಚಿಕಿತ್ಸೆ ನೀಡಿದರೂ ಸಾವನ್ನಪ್ಪಿದೆ.
Next Story





