ಆತ್ಮ ಬೇರ್ಪಡುವುದನ್ನು ನೋಡುವ ಸಿದ್ಧಿ ತನಗಿದೆ ಎಂದು ತಂದೆ, ತಾಯಿ ಸಹಿತ ನಾಲ್ವರನ್ನು ಕೊಂದು ಹಾಕಿದ !

ತಿರುವನಂತಪುರಂ, ಎ.11: ಕೇರಳದ ರಾಜಧಾನಿ ತಿರುವನಂತಪುರಂ ಸಮೀಪದ ನಂದಕ್ಕೋಡ್ ಎನ್ನುವಲ್ಲಿ ಒಂದೇ ಕುಟುಂಬದ ನಾಲ್ವರ ಸಾಮೂಹಿಕ ಹತ್ಯೆ ಪ್ರಕರಣದ ಆರೋಪಿ ಕಾಡಲ್ ಜಿನ್ಸ್ನ್ರಾಜ(30) ಪೊಲೀಸರಿಗೆ ತಾನೇಕೆ ಈ ಕೃತ್ಯವೆಸಗಿದೆ ಎಂದು ವಿಚಿತ್ರವಾದ ಕಾರಣಗಳನ್ನು ವಿವರಿಸಿದ್ದಾನೆ. ಆತ ಹೇಳುವ ಪ್ರಕಾರ" ಮನುಷ್ಯ ಶರೀರದಿಂದ ಆತ್ಮ ಬೇರ್ಪಡುವುದನ್ನು ನೋಡುವ ಶಕ್ತಿ ತನಗಿದೆ. ಇದಕ್ಕಾಗಿ ನಾಲ್ಕು ಮಂದಿ ಸಂಬಂಧಿಕರನ್ನು ತಾನೊಬ್ಬನೆ ಕೊಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾನೆ. ಬಹುದಿನಗಳಿಂದ ಕೊಲೆಗೆ ಯೋಜನೆ ಹಾಕಿದ್ದೇನೆ, ಕೊಲೆಗೆ ಬಳಸಿದ ವಿಶೇಷ ರೀತಿಯ ಮಚ್ಚನ್ನು ಆನ್ಲೈನ್ ಮೂಲಕ ಖರೀದಿಸಿದ್ದೆ. ಮನೆಯವರು ಇದುಯಾಕೆ ನಿನಗೆ ಎಂದು ಕೇಳಿದ್ದರು. ಕೋಳಿಯನ್ನು ಹಿಡಿಯಲು ಬರುವ ನಾಯಿಗೆ ಗತಿತೋರಿಸಲಿಕ್ಕೆ ಎಂದು ಹೇಳಿದ್ದೇನೆ ಎಂದು" ನಿರ್ವಿಕಾರವಾಗಿ ಜಿನ್ಸನ್ ರಾಜು ಪೊಲೀಸರ ಮುಂದೆ ಹೇಳಿದ್ದಾನೆ.
ಮೊದಲು ತನ್ನ ಅಮ್ಮ ಡೋಜಿನ್ ಪದ್ಮಾರನ್ನು ಕಳೆದ ಬುಧವಾರದಂದು ಉಪಾಯವಾಗಿ ತಾನು ಹೊಸದಾಗಿ ಗೇಮ್ ಸಿದ್ಧಪಡಿಸಿದ್ದೇನೆ ಎಂದು ಉಪಾಯವಾಗಿ ಕರೆದು ಅವರು ಬಂದಾಗ ಹಿಂಬದಿಯಿಂದ ಮಚ್ಚಿನಿಂದ ದಾಳಿ ಮಾಡಿ ಅವರನ್ನು ಕೊಂದು ಹಾಕಿದ್ದಾನೆ. ಆ ನಂತರ ಅವರ ಮೃತದೇಹವನ್ನು ಅಡಗಿಸಿಟ್ಟಿದ್ದಾನೆ. ಮಧ್ಯಾಹ್ನ ತನ್ನ ತಂದೆ ರಾಜ ತಂಗಂರನ್ನು ಕೊಂದುಹಾಕಿದ ಬಳಿಕ ಮೃತದೇಹವವನ್ನು ಅಡಗಿಸಿಟ್ಟ ಈತ, ಸಂಜೆ ಸಹೋದರಿಯನ್ನುಮತ್ತು ಶುಕ್ರವಾರ ರಾತ್ರಿ ತಾಯಿಯ ಸಂಬಂಧಿಕರಾದ ಲಲಿತಾ ಎನ್ನುವವರನ್ನು ಮಹಡಿಗೆ ಕರೆಸಿಕೊಂಡು ನಿರ್ದಯವಾಗಿ ಕೊಂದು ಹಾಕಿದ್ದಾನೆ. ಈ ವೇಳೆ ಈತ ಯಾರೂ ಪ್ರಜ್ಞೆತಪ್ಪುವಂತೆಮಾಡಿಲ್ಲ ಎಂದು ಜಿನ್ಸನ್ ರಾಜ ಹೇಳಿದ್ದಾನೆ. ಮಾನವ ದೇಹದಿಂದ ಆತ್ಮ ಬೇರ್ಪಡುವುದನ್ನುನೋಡಲಿಕ್ಕಾಗಿ ಈ ಎಲ್ಲ ಕೃತ್ಯಗಳನ್ನೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅದೇವೇಳೆ, ಕೊಲೆಗೆ ಸರಿಯಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆರೋಪಿ ಕೊಲೆಯ ಕಾರಣವನ್ನು ತದ್ವಿರುದ್ಧ ರೀತಿಯಲ್ಲಿ ಹೇಳುತ್ತಿದ್ದಾನೆ. ಶನಿವಾರ ರಾತ್ರಿ ತಂಜಾವೂರಿನಿಂದ ಬಸ್ ದಾರಿಯಾಗಿ ನಾಗರಕೋವಿಲ್ಗೆ ಹೋಗಿ ಅಲ್ಲಿಂದ ರೈಲಿನಲ್ಲಿ ಚೆನ್ನೈಗೆ ತಪ್ಪಿಸಿಕೊಂಡಿದ್ದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಪಿಶಾಚಿಯ ಸೇವೆಗೆ ಹೆತ್ತವರು ಮತ್ತು ಒಡಹುಟ್ಟುವಿನ ಕೊಲೆಯನ್ನು ಈತ ನಡೆಸಿದನೇ ಎನ್ನುವ ಪ್ರತ್ರಕರ್ತರ ಪ್ರಶ್ನೆಗೆ ಈ ಎಲ್ಲ ವಿಷಯಗಳ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.