Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಣಿವರಿಯದ ಹೋರಾಟಗಾರನಿಗೆ ಡಾ. ಬಿ.ಆರ್....

ದಣಿವರಿಯದ ಹೋರಾಟಗಾರನಿಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯ ಗರಿ

ಕುಂಟನಹಳ್ಳಿ ಮಲ್ಲೇಶಕುಂಟನಹಳ್ಳಿ ಮಲ್ಲೇಶ14 April 2017 12:19 AM IST
share
ದಣಿವರಿಯದ ಹೋರಾಟಗಾರನಿಗೆ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯ ಗರಿ

ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯ ಗರಿ ಪ್ರಶಸ್ತಿ ಬಂದಿರುವುದು ಸಂತೋಷ. ಇದು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ದಲಿತ, ಪ್ರಗತಿಪರ ಚಳವಳಿಯನ್ನು ಮತ್ತಷ್ಟು ಸಶಕ್ತಗೊಳಿಸುವುದಕ್ಕೆ ಪ್ರಯತ್ನವನ್ನು ಮಾಡಬೇಕಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯ ಮತ್ತು ವಿಚಾರಕ್ಕನುಗುಣವಾಗಿ ಚಳವಳಿಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ವಾಸ್ತವವಾಗಿ ದಲಿತ ಚಳವಳಿಯೂ ಸೇರಿದಂತೆ ಎಲ್ಲಾ ಪ್ರಗತಿಪರ ಚಳವಳಿಗಳು ಒಂದು ರೀತಿಯಲ್ಲಿ ಜಾಗತಿಕ ವಿದ್ಯಮಾನಗಳಿಂದಾಗಿ ಕುಂಟುತ್ತಾ ಸಾಗುತ್ತಿರುವಂತಹ ಸಂದರ್ಭ ಇದು. ಈ ಸಂದರ್ಭದಲ್ಲಿ ನನಗೆ ಅಂಬೇಡ್ಕರ್ ಪ್ರಶಸ್ತಿ ಸಂದಿರುವುದು ಚಳವಳಿಯನ್ನು ನಿಜದ ಅರ್ಥದಲ್ಲಿ ಚಳವಳಿಯ ದಿಕ್ಕಿನೆಡೆಗೆ ಕೊಂಡೊಯ್ಯಬೇಕಾದಂತಹ ಜವಾಬ್ದಾರಿಯನ್ನು ವಹಿಸಿದಂತಾಗಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯಡೆಗೆ ಸಾಗಬೇಕಾಗಿದೆ.

-ಗುರುಪ್ರಸಾದ್ ಕೆರಗೋಡು, ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು.


ನೋವಿನಲ್ಲೂ ಅರಳಿದ ಹೂವು ಗುರುಪ್ರಸಾದ್ ಕೆರಗೋಡು. ಹತ್ತಾರು ಕೌಟುಂಬಿಕ ಸಂಕಷ್ಟ ಮತ್ತು ದೈನಂದಿನ ತಾಪತ್ರಯಗಳನ್ನು ಒಡಲೊಳಗೆ ಕರಗಿಸಿಕೊಂಡು ದೀನದಲಿತರಿಗೆ ದನಿಯಾದ ವ್ಯಕ್ತಿತ್ವ ಅವರದು.

ಚಳವಳಿಗಾರರು, ಸಿದ್ಧಾಂತಿಗಳು ಆಯಾ ಸಮಕಾಲೀನ ಸಮಾಜದೊಂದಿಗೆ ಸಮೀಕರಿಸಿಕೊಳ್ಳಲಾಗದೆ ಅಥವಾ ಅದರೊಂದಿಗೆ ಸಂಘಟನೆಯನ್ನು ಮುನ್ನಡೆಸಲಾಗದೆ ಹಿಂದೆ ಸರಿದಿದ್ದು ಅಥವಾ ಕಳೆದೇ ಹೋಗಿದ್ದು ಗೊತ್ತಿರುವ ವಿಚಾರ.

ಕೆಲವರು ಮಾತ್ರ ಗಟ್ಟಿತನ, ನಂಬಿದ ತತ್ವ, ಸಿದ್ಧಾಂತಗಳ ನಡುವೆ ಉಳಿಯಬಲ್ಲರು. ಅಂತಹ ವ್ಯಕ್ತಿತ್ವಗಳ ನಡುವೆ ಗುರುಪ್ರಸಾದ್ ಕೆರಗೋಡು ಭರವಸೆ ಹುಟ್ಟಿಸಬಲ್ಲರು. ಎಂದೋ ಸಲ್ಲಬಹುದಾಗಿದ್ದ ಪ್ರಶಸ್ತಿ ಇಂದು ಸಂದಿತು ಎಂಬ ವಿಷಯ ಬಿಟ್ಟರೆ, ಇಂತಹ ಪ್ರಶಸ್ತಿಗಳನ್ನು ಮೀರಿ ಬರಬಹುದಾದ ಸನ್ಮಾನ-ಪುರಸ್ಕಾರಗಳಿಗೆ ಅವರು ಅರ್ಹರು. ಅಸ್ಪಷ್ಟತೆಗೆ ಅವಕಾಶವಿಲ್ಲದಂತೆ ಸಕಲ ಜನಾಂಗವನ್ನೂ ನಿಸ್ಪಹ ಭಾವದೊಂದಿಗೆ ಚಳವಳಿಗಳನ್ನು ಸಂಘಟಿಸಿದವರು. ಜಾತಿ ಸಮಸ್ಯೆಯನ್ನು ಮಾನವೀಯ ಭಾವದಲ್ಲಿ ತೊಡೆದು ಹಾಕಬೇಕೆಂಬ ಹಂಬಲ ಹೊಂದಿರುವವರು. ರಾಜ್ಯ ಸರಕಾರ ಇಂದು ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸುವ ಮೂಲಕ ಸ್ತುತ್ಯರ್ಹ ಕಾರ್ಯ ಮಾಡುತ್ತಿದೆ.

ಕಳೆದ ಮೂವತ್ತೈದು ನಲವತ್ತು ವರ್ಷಗಳಿಂದ ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಸಂಭಾವಿತ ಗುರುಪ್ರಸಾದ್, ದಲಿತ, ರೈತ, ಜನಪರ ಹೋರಾಟಗಳಲ್ಲದೆ, ಸಾಂಸ್ಕೃತಿಕ, ನಾಡುನುಡಿ ರಕ್ಷಣೆ ಹಾಗೂ ಜೀವಪರವಾದ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಾ ಅಂಬೇಡ್ಕರ್ ಅವರ ಆಶಯಗಳ ಸಾಕಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದಾರೆ.

ಪ್ರೊ. ಬಿ. ಕೃಷ್ಣಪ್ಪಪ್ರೇರಿತ ದಲಿತ ಸಂಘರ್ಷ ಸಮಿತಿ ಆಶಯಗಳಿಗೆ ಚ್ಯುತಿಬಾರದಂತೆ ಇಂದಿಗೂ ನಡವಳಿಕೆ ರೂಪಿಸಿಕೊಂಡಿರುವ ಗುರುಪ್ರಸಾದ್, ದೇವನೂರ ಮಹಾದೇವ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪ್ರೊ.ಕೆ.ರಾಮದಾಸ್ ಸೇರಿದಂತೆ ಸಾಹಿತಿಗಳು, ಪ್ರಗತಿಪರ ಸಂಘಟನೆಗಳ ನೇತಾರರ ಆತ್ಮೀಯ ಒಡನಾಟ ಹೊಂದಿ, ತಮ್ಮ ತವರು ಮಂಡ್ಯ ಜಿಲ್ಲೆಯ ಪ್ರಸಿದ್ಧ ಸಾಹಿತಿ, ಚಿಂತಕರಾದ ಪ್ರೊ.ಎಚ್.ಎಲ್.ಕೇಶವಮೂರ್ತಿ, ಡಾ.ಬೆಸಗರಹಳ್ಳಿ ರಾಮಣ್ಣ, ಪ್ರೊ.ಡಿ.ಕೃಷ್ಣಪ್ಪಗೌಡ ಅರಕೆರೆ, ಶಿವಳ್ಳಿ ಕೆಂಪೇಗೌಡ, ಪ್ರೊ.ಹುಲ್ಕೆರೆ ಮಹದೇವು ಮುಂತಾದವರ ಸಂಪರ್ಕದಿಂದ ಚಳವಳಿಗೆ ಬೇಕಾದ ವೈಚಾರಿಕ ನೆಲೆಗಟ್ಟನ್ನು ಮೈಗೂಡಿಸಿಕೊಂಡಿದ್ದಾರೆ.

ಅಂಬೇಡ್ಕರ್ ಅವರ ಹೋರಾಟದ ಪ್ರೇರಣೆಯೊಂದಿಗೆ ಸಾಮಾಜಿಕ ಸಂಘರ್ಷಕ್ಕೆ ಐತಿಹಾಸಿಕ ನಾಂದಿ ಹಾಡಿದ ದಲಿತ ಚಳವಳಿಗೆ 1978-79ರಲ್ಲಿ ಪಾದಾರ್ಪಣೆ ಮಾಡಿದ ಗುರುಪ್ರಸಾದ್, ಇಂದು ದಸಂಸ ರಾಜ್ಯ ಸಂಚಾಲಕರಾಗಿ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಬಿಡುವಿಲ್ಲದ ಹೋರಾಟದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೋಬಳಿಗೊಂದು ವಸತಿಶಾಲೆ, ಬಡವರಿಗೆ ಭೂಮಿಯ ಹಕ್ಕು, ಹೆಂಡ-ಸಾರಾಯಿ ನಿಷೇಧ, ವಿದ್ಯಾರ್ಥಿನಿಲಯಗಳ ಮೂಲ ಸೌಕರ್ಯ, ಹಿಂದಿ ಹೇರಿಕೆ ವಿರೋಧಿ ಹೋರಾಟ, ಪ್ಲಾಂಟೇಷನ್ ಒತ್ತುವರಿ ಭೂಮಿ ಸಕ್ರಮದ ವಿರುದ್ಧದ ಹೋರಾಟ, ದೇವದಾಸಿ, ಬೆತ್ತಲೆ ಸೇವೆ ನಿಷೇಧ, ಇನ್ನೂ ಮುಂತಾದ ಹೋರಾಟಗಳಲ್ಲಿ ಪ್ರಸಾದ್ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ವಿಶೇಷವಾಗಿ 1989-90ರ ವರ್ಷದಲ್ಲಿ ಮಂಡ್ಯ ಜಿಲ್ಲೆಯ ಸಾಕ್ಷರತಾ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿಲ್ಲೆಯ ಪ್ರತಿಹಳ್ಳಿಗೂ ಸಾಕ್ಷರತಾ ಆಂದೋಲನವನ್ನು ಕೊಂಡೊಯ್ದು ಯಶಸ್ವಿಗೊಳಿಸಿದ ಹೆಗ್ಗಳಿಕೆ ಗುರುಪ್ರಸಾದ್ ಅವರಿಗೆ ಸಲ್ಲುತ್ತದೆ.

ಬೆಂಡಿಗೇರಿ ಮಲ ಪ್ರಕರಣ, ಬದನವಾಳು, ಕಂಬಾಲಪಲ್ಲಿ, ಮೈಸೂರಿನ ಸರಗೂರು-ಹಂಚಿಪುರ ದಲಿತರ ಕಗ್ಗೊಲೆ, ಮಂಡ್ಯ ಜಿಲ್ಲೆ ನಾಗತಿಹಳ್ಳಿಯ ಒಕ್ಕಲಿಗ ಸಮುದಾಯದ ಮೀನಾಕ್ಷಮ್ಮಳ ಬಹಿಷ್ಕಾರ ಪ್ರಕರಣ, ಹಿಂದುಳಿದ ವರ್ಗಕ್ಕೆ ಸೇರಿದ ವಕೀಲ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ವಿರುದ್ಧ ಹೋರಾಟ, ಮದ್ದೂರಿನ ಆಬಲವಾಡಿ ಮರ್ಯಾದಾ ಹತ್ಯೆ ಪ್ರಕರಣಗಳು ಸೇರಿದಂತೆ ರಾಜ್ಯದ ವಿವಿಧೆಡೆ ದಲಿತರು, ಮಹಿಳೆಯರು ಮತ್ತು ಶೋಷಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದೀಗ 58 ವರ್ಷಗಳನ್ನು ಪೂರೈಸಿರುವ ಗುರುಪ್ರಸಾದ್ ಕೆರಗೋಡು ಬಿ.ಕಾಂ. ಪದವಿ ಪಡೆದಿದ್ದರೂ ಸರಕಾರಿ ಉದ್ಯೋಗದ ಕಡೆಗೆ ಗಮನಕೊಡದೆ ಪೂರ್ಣಪ್ರಮಾಣದಲ್ಲಿ ಪ್ರಗತಿಪರ ಚಳವಳಿಗಳಲ್ಲಿ ತೊಡಗಿಸಿಕೊಂಡು ಅಂಬೇಡ್ಕರ್ ಅವರು ಆಶಿಸಿದ ಸಾಮಾಜಿಕ ನ್ಯಾಯದ ಪರವಾಗಿ ದಣಿವರಿಯದೆ ಹೋರಾಟ ಮುಂದುವರಿಸಿದ್ದಾರೆ.

share
ಕುಂಟನಹಳ್ಳಿ ಮಲ್ಲೇಶ
ಕುಂಟನಹಳ್ಳಿ ಮಲ್ಲೇಶ
Next Story
X