Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಈ ‘ಪವಿತ್ರ’ ನಿಂಬೆ ಹಣ್ಣಿನ ಬೆಲೆ ರೂ....

ಈ ‘ಪವಿತ್ರ’ ನಿಂಬೆ ಹಣ್ಣಿನ ಬೆಲೆ ರೂ. 27,000!

ವಾರ್ತಾಭಾರತಿವಾರ್ತಾಭಾರತಿ15 April 2017 12:00 PM IST
share
ಈ ‘ಪವಿತ್ರ’ ನಿಂಬೆ ಹಣ್ಣಿನ ಬೆಲೆ ರೂ. 27,000!

ವಿಲ್ಲುಪುರಂ, ಎ.15: ಒಂದು ನಿಂಬೆ ಹಣ್ಣಿನ ಬೆಲೆ ಹೆಚ್ಚೆಂದರೆ ಐದಾರು ರೂಪಾಯಿ ಇರಬಹುದು. ಆದರೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರವನೈನಲ್ಲೂರಿನಲ್ಲಿರುವ ಬಲತಂಡಯುತ್ತಪನಿ ದೇವಸ್ಥಾನದಲ್ಲಿರುವ ಆರಾಧ್ಯ ದೇವರು ಮುರುಗನ ಮೂರ್ತಿಯ ಎದುರಿರುವ ಈಟಿಗೆ ಸಿಕ್ಕಿಸಲಾಗಿರುವ ನಿಂಬೆ ಹಣ್ಣುಗಳ ಬೆಲೆ ಮಾತ್ರ ನಂಬಲಸಾಧ್ಯ.

ಹೀಗೆ ಮೂರ್ತಿಯ ಎದುರಿಗಿರುವ ಈಟಿಗೆ ದೇವಳದ 11 ದಿನಗಳ ಪಂಗುನಿ ಉತ್ತಿರಂ ಜಾತ್ರೆಯ ಸಮಯ ಸಿಕ್ಕಿಸಲಾಗಿದ್ದ ನಿಂಬೆ ಹಣ್ಣುಗಳನ್ನು ಹರಾಜು ಹಾಕಿ ದೇವಳದ ಆಡಳಿತವು 68,000 ರೂ. ಆದಾಯ ಗಳಿಸಿದೆ. ಇದರಲ್ಲಿ ಒಂದು ನಿಂಬೆ ಹಣ್ಣು ಬರೋಬ್ಬರಿ ರೂ 27,000ಕ್ಕೆ ಮಾರಾಟವಾಗಿದೆ.

ಜಾತ್ರೆಯ ಸಂದರ್ಭ ಒಂಬತ್ತು ದಿನಗಳಲ್ಲಿ ಪ್ರತೀದಿನ ಒಂದು ನಿಂಬೆ ಹಣ್ಣನ್ನು ಈಟಿಗೆ ಸಿಕ್ಕಿಸಲಾಗುತ್ತದೆ. ಇಂತಹ ನಿಂಬೆ ಹಣ್ಣು ಜೀವನವನ್ನು ಸಂಪದ್ಭರಿತವಾಗಿಸುವ ಶಕ್ತಿ ಹೊಂದಿದೆ ಎಂದು ಆಸುಪಾಸಿನ ಪ್ರದೇಶಗಳ ಜನರು ನಂಬಿದ್ದಾರಲ್ಲದೆ ಸಂತಾನಭಾಗ್ಯವಿಲ್ಲದ ದಂಪಗೆ ಸಂತಾನವನ್ನು ಒದಗಿಸುವುದು ಎಂಬ ನಂಬಿಕೆಯೂ ಇದೆ.

ಜಾತ್ರೆಯ ಪ್ರಥಮ ದಿನದಿಂದ ಈಟಿಗೆ ಸಿಕ್ಕಿಸಲಾಗುವ ನಿಂಬೆ ಹಣ್ಣು ‘‘ಅತ್ಯಂತ ಪವಿತ್ರ ಹಾಗೂ ಶಕ್ತಿಶಾಲಿ’’ ಎಂದು ತಿಳಿಯಲಾಗುತ್ತದೆ. ಇದನ್ನು ಒತ್ತನಂತಲ್ ಎಂಬಲ್ಲಿನ ಮಹಾಲಿಂಗಂ, ಜಯಂತಿ ದಂಪತಿ ರೂ 27,000 ಕೊಟ್ಟು ಖರೀದಿಸಿದ್ದಾರೆ. ದಂಪತಿಗೆ ಮಕ್ಕಳಿದ್ದರೂ ಜೀವನದಲ್ಲಿ ಸುಖ ಸಂತೋಷ, ಆರೋಗ್ಯ ಭಾಗ್ಯಕ್ಕಾಗಿ ಅವರು ಇದನ್ನು ಖರೀದಿಸಿದ್ದಾರೆಂದು ಗ್ರಾಮದ ಹಿರಿಯರೊಬ್ಬರು ಹೇಳಿದ್ದಾರೆ. ಎರಡನೆ ಹಾಗೂ ಮೂರನೆ ದಿನದ ನಿಂಬೆಹಣ್ಣುಗಳು ತಲಾ ರೂ.6,000ಕ್ಕೆ ಮಾರಾಟವಾದರೆ, ನಾಲ್ಕನೆ ದಿನದ ನಿಂಬೆಹಣ್ಣು ರೂ.5,800ಕ್ಕೆ ಹರಾಜಾಗಿದೆ.

ಕಳೆದ ವರ್ಷ ಜಾತ್ರೆಯ ಮೊದಲ ದಿನದಂದು ಉಪಯೋಗಿಸಲಾದ ನಿಂಬೆಹಣ್ಣು ರೂ.39,000ಕ್ಕೆ ಮಾರಾಟವಾಗಿತ್ತಲ್ಲದೆ, ಎಲ್ಲಾ ನಿಂಬೆ ಹಣ್ಣುಗಳ ಮಾರಾಟದಿಂದ ರೂ.57,722 ಆದಾಯವನ್ನು ದೇವಳ ಗಳಿಸಿತ್ತು.

ನಲ್ವತ್ತು ವರ್ಷಗಳ ಹಿಂದೆ ಈ ನಿಂಬೆಹಣ್ಣುಗಳನ್ನು ದೇವಳದ ಆಡಳಿತ ಭಕ್ತರಿಗೆ ಉಚಿತವಾಗಿ ನೀಡುತ್ತಿದ್ದರೆ, ಇತ್ತೀಚಿಗಿನ ವರ್ಷಗಳಲ್ಲಿ ಅವುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಹರಾಜು ಮಾಡಲಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X