Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಮ್ಮುಟ್ಟಿ ಹಾಗು ಕಂಪೆನಿಯ ಬೆವರಿಳಿಸಿದ...

ಮಮ್ಮುಟ್ಟಿ ಹಾಗು ಕಂಪೆನಿಯ ಬೆವರಿಳಿಸಿದ 67 ವರ್ಷದ ವೃದ್ಧ

' ಚರ್ಮ ಬಿಳಿ ಮಾಡುವ ' ಸೋಪಿನ ಜಾಹೀರಾತು

ವಾರ್ತಾಭಾರತಿವಾರ್ತಾಭಾರತಿ15 April 2017 2:12 PM IST
share
ಮಮ್ಮುಟ್ಟಿ ಹಾಗು ಕಂಪೆನಿಯ ಬೆವರಿಳಿಸಿದ 67 ವರ್ಷದ ವೃದ್ಧ

ಖ್ಯಾತ ನಟ-ನಟಿಯರು ದುಡ್ಡಿನ ಆಸೆಗೆ ಬಿದ್ದು ಸೋಪ್, ಶಾಂಪೂ, ತಂಪುಪಾನೀಯ ಇತ್ಯಾದಿಗಳ ಜಾಹೀರಾತುಗಳಲ್ಲಿ ನಟಿಸುತ್ತಿದ್ದರೆ, ಈ ಜಾಹೀರಾತುಗಳಿಗೆ ಮರುಳಾಗುವ ಜನಸಾಮಾನ್ಯರು ಅವುಗಳನ್ನು ಖರೀದಿಸುವ ಮೂಲಕ ಕಂಪನಿಗಳು ಎರಡೂ ಕೈಗಳಿಂದ ಲಾಭ ಬಾಚಿಕೊಳ್ಳುತ್ತಿವೆ. ಆದರೆ ಕೇರಳದಲ್ಲಿ 67ರ ಪ್ರಾಯದ ವೃದ್ಧರೋರ್ವರು ಇಂತಹ ಜಾಹೀರಾತುಗಳ ವಿರುದ್ಧ ಯುದ್ಧಕ್ಕೆ ಇಳಿದಿದ್ದಲ್ಲದೆ, ಖ್ಯಾತ ಮಲಯಾಳಂ ನಟ ಮಮ್ಮುಟ್ಟಿಯನ್ನು ನ್ಯಾಯಾಲಯಕ್ಕೆ ಎಳೆದಿದ್ದಾರೆ. ಕೆ.ಚಾತು ಎಂಬ ಹೆಸರಿನ ವೃದ್ಧ ನ್ಯಾಯಾಲಯದ ಹೊರಗೆ ರಾಜಿಗೆ ಅಸ್ತು ಎನ್ನುವ ಮೂಲಕ ಕಂಪನಿಯಿಂದ 30,000 ರೂ.ವಸೂಲು ಮಾಡಿರುವ ಕಥೆ ಇಲ್ಲಿದೆ.

ಚಾತು ಅವರದು ಸರಳ ಪ್ರಶ್ನೆ. ಯಾವುದೇ ವ್ಯಕ್ತಿ ನಿರಂತರವಾಗಿ ಹೇಗೆ ಸುಳ್ಳು ಹೇಳಬಲ್ಲ? ಇದೇ ಪ್ರಶ್ನೆ ದಾರಿ ತಪ್ಪಿಸುವ ಜಾಹೀರಾತುಗಳ ಕುರಿತಂತೆ ಸೌಂದರ್ಯ ಸಾಧನಗಳ ತಯಾರಿಕೆ ಕಂಪನಿ ಇಂದುಲೇಖಾ ಮತ್ತು ಅದರ ಬ್ರಾಂಡ್ ಅಂಬಾಸಡರ್ ಮಮ್ಮುಟ್ಟಿಯನ್ನು ಅವರು ನ್ಯಾಯಾಲಯಕ್ಕೆಳೆಯುವಂತೆ ಮಾಡಿದ್ದು. ಕೇರಳದ ವಯನಾಡ ಜಿಲ್ಲೆಯ ಮಾನಂತವಾಡಿಯ ಕೆ.ಚಾತು ಅವರು 2015, ಆಗಸ್ಟ್‌ನಲ್ಲಿ ಇಂದುಲೇಖಾ ಕಂಪನಿ ಮತ್ತು ಮಮ್ಮುಟ್ಟಿ ವಿರುದ್ಧ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದರು.

  ಇಂದುಲೇಖಾ ಕಂಪನಿಯ ಸೋಪಿನ ಜಾಹೀರಾತು ಮಮ್ಮುಟ್ಟಿಯ ‘ಸೌಂದರ್ಯಂ ನಿಂಞಲೆ ಥೇಡಿ ವರುಂ(ಸೌಂದರ್ಯ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ)’ಎಂಬ ಟ್ಯಾಗ್‌ಲೈನ್ ಹೊಂದಿತ್ತು ಮತ್ತು ಅದನ್ನು ನೋಡಿ ತಾನು ಸೋಪನ್ನು ಖರೀದಿಸಿದ್ದೆ. ಆದರೆ ಆ ಸೋಪನ್ನು ಎಷ್ಟು ಬಳಸಿದರೂ ತಾನು ಸುಂದರನೂ ಆಗಿಲ್ಲ, ತನ್ನ ಚರ್ಮವು ಬಿಳಿಯೂ ಆಗಿಲ್ಲ ಎಂದು ಚಾತು ದೂರಿನಲ್ಲಿ ತಿಳಿಸಿದ್ದರು.

67ರ ಹರೆಯದ ವೃದ್ಧ ಕಂಪನಿಯ ವಿರುದ್ಧ ದಾವೆ ಹೂಡಿದ್ದು ಆಗ ಹಲವರಿಗೆ ತಮಾಷೆ ಎನ್ನಿಸಿರಬೇಕು. ಆದರೆ ಕೊನೆಗೂ ಕಂಪನಿಯು ಅವರಿಗೆ ಪರಿಹಾರವನ್ನು ಪಾವತಿಸಿದೆ.

ಚಾತು 50,000 ರೂ.ಗಳ ಪರಿಹಾರ ಕೇಳಿದ್ದರಾದರೂ, ಈ ವರ್ಷದ ಜನವರಿಯಲ್ಲಿ ನ್ಯಾಯಾಲಯದ ಹೊರಗೆ 30,000 ರೂ.ಗೆ ರಾಜಿ ಸಂಧಾನವನ್ನು ಮಾಡಿಕೊಳ್ಳುವಲ್ಲಿ ಇಂದುಲೇಖಾ ಸಫಲವಾಗಿದೆ.

ತಾನು ದುಡ್ಡಿಗಾಗಿ ಕಾನೂನು ಸಮರ ನಡೆಸಿರಲಿಲ್ಲ. ಆದರೆ ಗ್ರಾಹಕರು ಕಂಪನಿಯೊಂದರಲ್ಲಿ ಹೊಂದಿರುವ ವಿಶ್ವಾಸ ಮತ್ತು ಮಮ್ಮುಟ್ಟಿಯಂತಹ ಗಣ್ಯರ ಸಾಮಾಜಿಕ ಜವಾಬ್ದಾರಿಯ ಕುರಿತಾಗಿತ್ತು ಎನ್ನುತ್ತಾರೆ ಚಾತು. ಮೈಬಣ್ಣವನ್ನು ಬಿಳಿಯಾಗಿಸುವ ಸೋಪಿನ ಕುರಿತ ಇಂದುಲೇಖಾ ಕಂಪನಿಯ ಜಾಹೀರಾತನ್ನು ಎಲ್ಲರೂ ನೋಡಿದ್ದಾರೆ,ಅವರ ಹೇಳಿಕೆ ನಿಜ ಎಂಬ ವಿಶ್ವಾಸ ಹುಟ್ಟಿತ್ತು ಹಾಗೂ ಮಮ್ಮುಟ್ಟಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಸೋಪಿನ ಕುರಿತು ಆ ವಿಶ್ವಾಸವನು ಹೆಚ್ಚಿಸಿತ್ತು. ಆದರೆ ಅವರ ಹೇಳಿಕೆಯಲ್ಲಿ ಏನೇನೂ ಸತ್ಯಾಂಶವಿಲ್ಲ. ಇದು ನನ್ನ ಅನುಭವ ಎಂದು ಚಾತು ಹೇಳಿದರು.

ಅಂದ ಹಾಗೆ 75 ಗ್ರಾಂ ತೂಕದ ಈ ಸೋಪನ್ನು ಇಂದುಲೇಖಾ 35 ರೂ.ಗೆ ಮಾರಾಟ ಮಾಡುತ್ತಿತ್ತು.

ಈ ಸೋಪಿನಲ್ಲಿ ವಿಶೇಷವೇನೂ ಇಲ್ಲ. ಮಾರುಕಟ್ಟೆಯಲ್ಲಿರುವ, ಗ್ರಾಹಕರನ್ನು ವಂಚಿಸುವ ಇಂತಹ ಎಲ್ಲ ಉತ್ಪನ್ನಗಳಿಗೂ ಇದು ಎಚ್ಚರಿಕೆಯ ಗಂಟೆಯಾಗಬೇಕು. ಗಣ್ಯವ್ಯಕ್ತಿಗಳು ಇಂತಹ ವಂಚಕ ಕಂಪನಿಗಳನ್ನೇಕೆ ಬೆಂಬಲಿಸುತ್ತಾರೋ ಅರ್ಥವಾಗುತ್ತಿಲ್ಲ ಎಂದರು ಚಾತು.

ಇಂತಹ ಸುಳ್ಳು ಜಾಹೀರಾತುಗಳ ವಿರುದ್ಧ ಹೋರಾಡಲು ಹೆಚ್ಚೆಚ್ಚು ಜನರು ಮುಂದೆ ಬರಬೇಕು. ಇಂದುಲೇಖಾ ಒಂದು ಉದಾದಹರಣೆಯಷ್ಟೇ. ಇಂತಹ ನೂರಾರು ಬೋಗಸ್ ಉತ್ಪನ್ನಗಳಿವೆ. ಜನರು ಎಚ್ಚೆತ್ತುಕೊಳ್ಳಬೇಕು ಎಂದು ಚಾತು ಕಿವಿಮಾತು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X