Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಿಂದಿಗೆ ಅಪಸ್ವರ: ಬಿಹು ವೇದಿಕೆಯಿಂದ...

ಹಿಂದಿಗೆ ಅಪಸ್ವರ: ಬಿಹು ವೇದಿಕೆಯಿಂದ ಹೊರನಡೆದ ಟಾಪ್ ಸಿಂಗರ್

ವಾರ್ತಾಭಾರತಿವಾರ್ತಾಭಾರತಿ16 April 2017 9:13 AM IST
share
ಹಿಂದಿಗೆ ಅಪಸ್ವರ: ಬಿಹು ವೇದಿಕೆಯಿಂದ ಹೊರನಡೆದ ಟಾಪ್ ಸಿಂಗರ್

ಗುವಾಹತಿ, ಎ.16: ಹಿಂದಿ ಹಾಡು ಹಾಡಲು ಅವಕಾಶ ನೀಡದ ಕಾರಣಕ್ಕೆ ಅಸ್ಸಾಂನ ಅತ್ಯುತ್ತಮ ಗಾಯಕ ಝುಬೀನ್ ಗರ್ಗ್ ಮುನಿಸಿಕೊಂಡು ಅರ್ಧದಿಂದಲೇ ವೇದಿಕೆಯಿಂದ ನಿರ್ಗಮಿಸಿದ ಕ್ಷಣಕ್ಕೆ ನೂನ್‌ಮತಿ ಬಿಹು ಸನ್ಮಿಲನ ವೇದಿಕೆ ಸಾಕ್ಷಿಯಾಯಿತು. ಶುಕ್ರವಾರ ತಡರಾತ್ರಿಯ ಈ ಕಾರ್ಯಕ್ರಮ ಸಂಘಟಕರು ಹಾಗೂ ಗಾಯಕನ ನಡುವೆ ಬೀದಿ ಜಗಳಕ್ಕೂ ಕಾರಣವಾಯಿತು. 

ನಡೆದದ್ದಿಷ್ಟು: ಬಿಹು ಹಾಗೂ ಅಸ್ಸಾಮಿ ಭಾಷೆಯ ಹಲವು ಹಾಡುಗಳನ್ನು ಪ್ರಸ್ತುತಪಡಿಸಿದ ಬಳಿಕ ಗರ್ಗ್, ಹಿಂದಿ ಹಾಡು ಹೇಳಲು ಆರಂಭಿಸಿದರು. ಆಗ ಸಂಘಟಕರು ವೇದಿಕೆಗೆ ಆಗಮಿಸಿ, ಹಿಂದಿ ಹಾಡು ನಿಲ್ಲಿಸುವಂತೆ ಸೂಚಿಸಿದರು. ಇದು ಗಾಯಕ ಹಾಗೂ ಸಂಘಟಕರ ನಡುವಿನ ವಾಗ್ವಾದ, ಮೈಕ್ರೋಫೋನ್ ಕಿತ್ತುಕೊಳ್ಳುವವರೆಗೂ ಸಾಗಿತು. ಗಾಯಕನಿಗೆ ತನ್ನ ಆಯ್ಕೆಯ ಹಾಡು ಹೇಳಲು ಅವಕಾಶ ಇರಬೇಕು ಎಂದು ಅಸಮಾಧಾನ ಸೂಚಿಸುತ್ತಲೇ ಗರ್ಗ್ ವೇದಿಕೆಯಿಂದ ಹೊರ ನಡೆದರು.

"ನಾವು ಯಾವ ಭಾಷೆಗೂ ವಿರೋಧವಲ್ಲ. ಆದರೆ ಬಿಹು ವೇದಿಕೆಯಲ್ಲಿ ಹಿಂದಿ ಹಾಡು ಹೇಳದಂತೆ ಮೊದಲೇ ಒಪ್ಪಂದವಾಗಿತ್ತು" ಎಂದು ನೂನ್‌ಮತಿ ಬಿಹು ಸನ್ಮಿಲನದ ಅಧ್ಯಕ್ಷ ಮಧುರಂಜನ್ ನಾಥ್ ಹೇಳಿದ್ದಾರೆ.  ಅಸ್ಸಾಂನ ಅತಿಹೆಚ್ಚು ಸಂಭಾವನೆ ಪಡೆಯುವ ಗಾಯಕ ಝುಬೀನ್ ಗರ್ಗ್ ಈ ಬಗ್ಗೆ ಪ್ರತಿಕ್ರಿಯಿಸಿ, "ನಾನು ಇದುವರೆಗೆ 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು 25 ವರ್ಷಗಳಲ್ಲಿ ಹಾಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದಿ ರಾಷ್ಟ್ರಭಾಷೆ. ಬಿಹೂ ಒಂದು ಸಂಗೀತ ಸಮ್ಮೇಳನ. ಅಸ್ಸಾಮಿ, ಹಿಂದಿ, ಬಂಗಾಳಿ ಎಲ್ಲವೂ ಸಂಸ್ಕೃತ ಮೂಲದಿಂದ ಹುಟ್ಟಿಕೊಂಡ ಭಾಷೆಗಳು. ಯಾಕೆ ಹಿಂದಿಯನ್ನು ವಿರೋಧಿಸಿದರು ಎನ್ನುವುದು ಅರ್ಥವಾಗುತ್ತಿಲ್ಲ" ಎಂದು ಹೇಳಿದ್ದಾರೆ.

"ಬಿಹು ಜನಪ್ರಿಯಗೊಳಿಸುವ ಸಲುವಾಗಿ ಆಯೋಜಿಸಿದ ಈ ಸನ್ಮಿಲನದಲ್ಲಿ 53 ವರ್ಷಗಳಲ್ಲಿ ಯಾರೂ ಹಿಂದಿ ಹಾಡು ಹಾಡಿಲ್ಲ" ಎಂದು ಸಂಘಟಕರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕ್ರಿಶ್-3 ಚಿತ್ರದ "ದಿಲ್ ತೂ ಹೈ ಬೇಟಾ" ಹಾಡು ಗುನುಗುತ್ತಲೇ ಗರ್ಗ್ ವೇದಿಕೆಯಿಂದ ನಿರ್ಗಮಿಸಿದರು. ಬರಾಲುಮುಖದಲ್ಲಿ ನಡೆದ ಮತ್ತೊಂದು ಬಿಹು ಪೆಂಡಾಲ್‌ನಲ್ಲಿ ಹಲವು ಹಿಂದಿ ಗೀತೆಗಳೊಂದಿಗೆ ಗರ್ಗ್ ಜನಮನ ಸೂರೆಗೊಂಡರು.

ಈ ವಿವಾದ ವ್ಯಾಪಕ ಪರ- ವಿರೋಧಿ ಚರ್ಚೆಯನ್ನು ಹುಟ್ಟುಹಾಕಿದ್ದು, ಕಲಾವಿದನ ಸ್ವಾತಂತ್ರ್ಯದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಎಂದು ಹಲವರು ಘಟನೆಯನ್ನು ಖಂಡಿಸಿದ್ದಾರೆ. ಹಿರಿಯ ಅಸ್ಸಾಮಿ ಕಲಾವಿದ ಬಿಜು ಫುಕಾನ್, "ಪ್ರತಿ ಕಲಾವಿದರಿಗೂ ಮುಕ್ತವಾಗಿ ಅಭಿವ್ಯಕ್ತಪಡಿಸುವ ಹಕ್ಕು ಇದೆ" ಎಂದು ಪ್ರತಿಪಾದಿಸಿದ್ದಾರೆ. ಆದರೆ ಹಿರಿಯ ಪತ್ರಕರ್ತ ಹೈದರ್ ಹುಸೇನ್, "ಹಿಂದಿ ಹಾಡು ಹಾಡಲು ಬಿಹು ವೇದಿಕೆಯಲ್ಲ" ಎಂದು ಸಂಘಟಕರನ್ನು ಸಮರ್ಥಿಸಿಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X