Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 11ರ ಹರೆಯದಲ್ಲೇ ಪಿಯುಸಿ ತೇರ್ಗಡೆ, 17ರ...

11ರ ಹರೆಯದಲ್ಲೇ ಪಿಯುಸಿ ತೇರ್ಗಡೆ, 17ರ ಹರೆಯದಲ್ಲಿ ಪಿಎಚ್‌ಡಿಗೆ ನೋಂದಣಿ

ತೆಲಂಗಾಣದ ಸೋದರ-ಸೋದರಿಯರ ಸಾಧನೆ

ವಾರ್ತಾಭಾರತಿವಾರ್ತಾಭಾರತಿ16 April 2017 7:06 PM IST
share
11ರ ಹರೆಯದಲ್ಲೇ ಪಿಯುಸಿ ತೇರ್ಗಡೆ, 17ರ ಹರೆಯದಲ್ಲಿ ಪಿಎಚ್‌ಡಿಗೆ ನೋಂದಣಿ

ಹೈದರಾಬಾದ್, ಎ.16: ಹನ್ನೊಂದರ ಹರೆಯದಲ್ಲೇ ಪಿಯುಸಿ ತೇರ್ಗಡೆಯಾಗುವ ಮೂಲಕ ಹೈದರಾಬಾದ್‌ನ ಆಗಸ್ತ್ಯ ಜೈಸ್ವಾಲ್ ಹೊಸ ದಾಖಲೆಯೊಂದನ್ನು ಬರೆದಿದ್ದಾನೆ. ಪಿಯುಸಿ ತೇರ್ಗಡೆಯಾದ ತೆಲಂಗಾಣದ ಅತ್ಯಂತ ಕಿರಿಯ ಬಾಲಕ ಎಂಬ ಹೆಗ್ಗಳಿಕೆ ಈತನದ್ದಾಗಿದೆ. ಈತನ ಸೋದರಿ ಈತನಿಗಿಂತಲೂ ಒಂದು ಕೈ ಮೇಲೆನಿಸಿದ್ದಾಳೆ. 10ರ ಹರೆಯದಲ್ಲೇ ಪಿಯುಸಿ ಮುಗಿಸಿ, ಇದೀಗ 17ರ ಹರೆಯದಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ನೋಂದಾಯಿಸಿಕೊಂಡಿದ್ದಾಳೆ.

ಯೂಸುಫ್‌ಗುಡದಲ್ಲಿರುವ ಸೈಂಟ್ ಮೇರೀಸ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಆಗಸ್ತ್ಯ ವಾಣಿಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಪೌರನೀತಿ - ಇವನ್ನು ಪ್ರಧಾನ ವಿಷಯವಾಗಿ ಆರಿಸಿಕೊಂಡು ಶೇ.63ರಷ್ಟು ಅಂಕಗಳೊಂದಿಗೆ ಪಿಯುಸಿ ತೇರ್ಗಡೆಯಾಗಿದ್ದಾನೆ. ವಾಣಿಜ್ಯಶಾಸ್ತ್ರ(ಕಾಮರ್ಸ್)ನಲ್ಲಿ ಪದವಿ ಪಡೆಯುವುದು ನನ್ನ ಇಚ್ಚೆ. ಆದರೆ ಡಾಕ್ಟರ್ ಆಗುವುದು ನನ್ನ ಪ್ರಧಾನ ಗುರಿಯಾಗಿದೆ ಎಂದು ಪಿಯುಸಿ ಫಲಿತಾಂಶ ಹೊರಬಿದ್ದ ಬಳಿಕ ಆಗಸ್ತ್ಯ ಹೇಳಿದ್ದಾನೆ.

ಕಾಮರ್ಸ್ ಪದವೀಧರ ಮತ್ತು ಡಾಕ್ಟರ್..! ಒಂದಕ್ಕೊಂದು ಸಂಬಂಧವೆಲ್ಲಿ ಎಂದು ಆಶ್ಚರ್ಯ ಪಡುವವರಿಗೆ ಆಗಸ್ತ್ಯ ತನ್ನ ಗುರಿ ಸಾಧನೆಯ ಮಾರ್ಗವನ್ನು ಹೀಗೆ ವಿವರಿಸುತ್ತಾನೆ. ಬಿ.ಕಾಂ ಮುಗಿಸಿದ ಬಳಿಕ ಮತ್ತೆ ಇಂಟರ್‌ಮೀಡಿಯೇಟ್ ಪರೀಕ್ಷೆ ಬರೆಯುವುದು. ಬಯಾಲಜಿ, ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಷಯಗಳೊಂದಿಗೆ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಪದವಿಯ ಪ್ರವೇಶ ಪರೀಕ್ಷೆ ಬರೆಯುವುದು. ಇದರಲ್ಲಿ ತೇರ್ಗಡೆಯಾಗಿ ಎಂಬಿಬಿಎಸ್ ಕೋರ್ಸ್‌ಗೆ ಅರ್ಹತೆ ಪಡೆಯುವುದು..

ಅಲ್ಲದೆ, ಮೆಡಿಕಲ್ ಕಾಲೇಜಿಗೆ ಪ್ರವೇಶ ದೊರಕಬೇಕಾದರೆ ವಿದ್ಯಾರ್ಥಿಗೆ ಕನಿಷ್ಟ 17 ವರ್ಷ ಆಗಿರಬೇಕು ಎಂಬ ನಿಯಮವೂ ಇದೆ. ಆದ್ದರಿಂದ ಸಮಯ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಆಗಸ್ತ್ಯ ಪದವಿ ಪೂರೈಸಲು ನಿರ್ಧರಿಸಿದ್ದಾನೆ. ತನ್ನ ಎಂಟನೇ ವರ್ಷಕ್ಕೆ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿದ್ದ ಈತ ಒಂದು ವರ್ಷದ ಬಳಿಕ ಪಿಯುಸಿಗೆ ಸೇರ್ಪಡೆಗೊಂಡಿದ್ದ.

ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ ಕಲಿಯಲು ಕಷ್ಟವಾಗುವುದಿಲ್ಲವೇ ಎಂದು ಕೇಳಿದರೆ, ನನಗೆ ಯಾವುದೇ ವಿಷಯವನ್ನೂ ಬಾಯಿಪಾಠ ಮಾಡುವ ಅಭ್ಯಾಸವಿಲ್ಲ. ವಿಷಯವನ್ನು ತಿಳಿದುಕೊಂಡು ಉತ್ತರಿಸುವುದು ನನ್ನ ವಿಧಾನ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ.

ಈ ಬಾಲಕನ ಕುಟುಂಬದ ವೈಶಿಷ್ಟವೆಂದರೆ, ಈತನ ಸೋದರಿ ನೈನಾ ಕೂಡಾ 17ರ ಹರೆಯದಲ್ಲೇ ಪಿಎಚ್‌ಡಿ ಅಧ್ಯಯನ ಮಾಡಲು ನೋಂದಾಯಿಸಿಕೊಂಡಿದ್ದಳು. ಸಬ್-ಜ್ಯೂನಿಯರ್ ಹಂತದಲ್ಲಿ ಅಂತರಾಷ್ಟ್ರೀಯ ಮಟ್ಟದ ಟೇಬಲ್ ಟೆನಿಸ್ ಆಟಗಾರ್ತಿಯಾಗಿರುವ ನೈನಾ, ಎಂಟರ ಹರೆಯದಲ್ಲೇ ಎಸ್‌ಎಸ್‌ಎಲ್‌ಸಿ ಮತ್ತು ಹತ್ತರ ಹರೆಯದಲ್ಲೇ ಇಂಟರ್‌ಮೀಡಿಯೇಟ್ ಪರೀಕ್ಷೆ ಪಾಸಾಗುವ ಮೂಲಕ ಇಂತಹ ಸಾಧನೆ ಮಾಡಿರುವ ಏಶ್ಯಾದ ಪ್ರಥಮ ಬಾಲಕಿ ಎಂಬ ದಾಖಲೆಗೆ ಪಾತ್ರಳಾಗಿದ್ದಾಳೆ.

13ರ ಹರೆಯದಲ್ಲೇ ಪತ್ರಿಕೋದ್ಯಮದಲ್ಲಿ ಪದವಿ ಪಡೆಯುವ ಮೂಲಕ , ಪತ್ರಿಕೋದ್ಯಮ ಪದವಿ ಪಡೆದ ದೇಶದ ಅತೀ ಕಿರಿಯ ಸಾಧಕಿ ಎಂಬ ಹಿರಿಮೆ ಇವಳದ್ದು. ಬಳಿಕ ನೈನಾ ಒಸ್ಮಾನಿಯಾ ವಿವಿಯಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಳು.

ತನ್ನ ಪಿಎಚ್‌ಡಿ ಅಧ್ಯಯನಕ್ಕಾಗಿ ಆಂಧ್ರಪ್ರದೇಶದ ರಾಜಾಮಂಡ್ರಿಯಲ್ಲಿರುವ ಆದಿಕವಿ ನನ್ನಯ್ಯ ವಿಶ್ವವಿದ್ಯಾನಿಲಯವನ್ನು ಆಯ್ಕೆ ಮಾಡಿಕೊಂಡಿರುವ ನೈನಾ, ಕ್ರೀಡಾ ನಿರ್ವಹಣೆ ಎಂಬ ವಿಷಯವನ್ನು ಪಿಎಚ್‌ಡಿ ಅಧ್ಯಯನಕ್ಕೆ ಆರಿಸಿಕೊಂಡಿದ್ದಾಳೆ. ವಿವಿಯ ಉಪಕುಲಪತಿ ಎಂ.ಮುತ್ಯಾಲ ನಾಯ್ಡು ಈಕೆಗೆ ಮಾರ್ಗದರ್ಶಕರಾಗಿರುತ್ತಾರೆ.

ಈಕೆಯ ತಂದೆ ಅಶ್ವನಿ ಕುಮಾರ್ ವಕೀಲರಾಗಿದ್ದಾರೆ. ಇಬ್ಬರೂ ಮಕ್ಕಳು ಹುಟ್ಟು ಪ್ರತಿಭಾವಂತರು. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದೇನೆ ಎಂದವರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X