ಮೂಡುಬಿದಿರೆ, ಎ.18: ಚಿತ್ರದುರ್ಗದಲ್ಲಿ ರವಿವಾರ ನಡೆದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಆತ್ಮಶ್ರೀ ಅವರು ಕೊಡಗು ಜಿಲ್ಲೆಯ ಹರ್ಷಿತಾ ಮತ್ತು ಮಂಡ್ಯದ ಲಕ್ಷ್ಮೀಯನ್ನು ಸೋಲಿಸುವುದರ ಮೂಲಕ 'ವೀರವನಿತೆ ಒನಕೆ ಓಬವ್ವ ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ.