Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಸ್ತೆ ಅಪಘಾತದ ಗಾಯಾಳುಗಳ ಆಪತ್ಭಾಂಧವ ಈ...

ರಸ್ತೆ ಅಪಘಾತದ ಗಾಯಾಳುಗಳ ಆಪತ್ಭಾಂಧವ ಈ ಬೈಕ್ ಅಂಬುಲೆನ್ಸ್ ನಡೆಸುವ ಕಾಲೇಜು ವಿದ್ಯಾರ್ಥಿ

ವಾರ್ತಾಭಾರತಿವಾರ್ತಾಭಾರತಿ18 April 2017 4:40 PM IST
share
ರಸ್ತೆ ಅಪಘಾತದ ಗಾಯಾಳುಗಳ ಆಪತ್ಭಾಂಧವ ಈ ಬೈಕ್ ಅಂಬುಲೆನ್ಸ್ ನಡೆಸುವ ಕಾಲೇಜು ವಿದ್ಯಾರ್ಥಿ

ವಾರಣಾಸಿ,ಎ.18 : ವಾರಣಾಸಿಯ ರಸ್ತೆಗಳಲ್ಲಿ ತನ್ನ ಬೈಕಿನಲ್ಲಿ ಅತ್ತಿತ್ತ ಸಾಗುವ ಈ ಕಾಲೇಜು ವಿದ್ಯಾರ್ಥಿ ನಿಜಾರ್ಥದಲ್ಲಿ ಒಬ್ಬ ಆಪತ್ಭಾಂಧವ. ಅಂದ ಹಾಗೆ ಈತನ ಬೈಕ್ ಇತರರ ಬೈಕಿನಂತಿಲ್ಲ. ಅದೊಂದು ಬೈಕ್ ಅಂಬುಲೆನ್ಸ್.

ರಸ್ತೆ ಅಪಘಾತದ ಗಾಯಾಳುಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡುವ ಅಂಬುಲೆನ್ಸ್. ಈತನ ಸೇವೆ ಪಡೆಯಲು ಯಾರೂ ಈತನಿಗೆ ಕರೆ ಮಾಡಬೇಕೆಂದಿಲ್ಲ. ತನ್ನ ಸ್ನೇಹಿತರಿಂದ ರಸ್ತೆ ಅಪಘಾತದ ಬಗ್ಗೆ ಮಾಹಿತಿ ಪಡೆಯುವ ಈತ ತಕ್ಷಣ ಅಲ್ಲಿಗೆ ತನ್ನ ಬೈಕಿನಲ್ಲಿ ಔಷಧಿ, ಬಿಸ್ಕತ್ತು, ನೀರಿನೊಂದಿಗೆ ಧಾವಿಸುತ್ತಾನೆ. ಈ ಆಪತ್ಭಾಂಧವನ ಹೆಸರು ಅಮನ್ ಯಾದವ್. ಈತ ಚೌಬೇಪುರದ ಸಂಕಟಮೋಚನ್ ಪದವಿ ಕಾಲೇಜಿನ ಎರಡನೇ ಬಿಎ ವಿದ್ಯಾರ್ಥಿ. ಅಗತ್ಯ ವಸ್ತುಗಳನ್ನು ಖರೀದಿಸಲು ಆತನಿಗೆ ಸ್ಥಳೀಯರು ಸಹಾಯ ಮಾಡುತ್ತಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಆತ ರಸ್ತೆಯಲ್ಲಿ ಸಾಗುವಾಗ ಬಸವಳಿದವರನ್ನು ಕಂಡರೆ ವಾಹನ ನಿಲ್ಲಿಸಿ ಅವರಿಗೆ ಬಿಸ್ಕತ್ತು ನೀರು ನೀಡುತ್ತಾನೆ.

ಪಾಂಡೇಪುರ ನಿವಾಸಿಯಾಗಿರುವ ಅಮನ್ ಕಳೆದ ಆರು ವರ್ಷಗಳಿಂದ ತನ್ನ ಸೈಕಲ್ಲಿನಲ್ಲಿ ಸಂಚರಿಸಿ ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡುತ್ತಿದ್ದರೂ ಆತನಿಗೆ ಈ ಬೈಕನ್ನು ಚಿನ್ನದ ವ್ಯಾಪಾರಿ ರಾಜೀವ್ ವರ್ಮ ಹದಿನೈದು ದಿನಗಳ ಹಿಂದೆಯಷ್ಡೇ ಒದಗಿಸಿದ್ದರು. ಅದನ್ನು ಅಮನ್ ಅಂಬುಲೆನ್ಸ್ ಆಗಿ ಪರಿವರ್ತಿಸಿದ್ದನು. ಕಳೆದೊಂದು ವಾರದಲ್ಲಿ ಆತ ಕನಿಷ್ಠ ಒಂದು ಡಜನ್ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಿದ್ದಾನೆ.

ಕಬಿರ್ ಚೌರಾದ ಆಸ್ಪತೆಯೆದುರು ರಸ್ತೆ ಅಪಘಾತದ ಗಾಯಾಳುವೊಬ್ಬ ನೋವಿನಿಂದ ನರಳುತ್ತಿರುವುದನ್ನು ಆರು ವರ್ಷಗಳ ಹಿಂದೆ ನೋಡಿದ ನಂತರ ಈ ಸೇವಾ ಕೈಂಕರ್ಯವನ್ನು ಕೈಗೆತ್ತಿಕೊಳ್ಳಲು ಅಮನ್ ನಿರ್ಧರಿಸಿದ್ದನು. ಈ ಹಿಂದೆ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡಿದ ಅನುಭವವೂ ಆತನಿಗಿರುವುದರಿಂದ ರೋಗಿಗಳಿಗೆ ಸಹಾಯ ಮಾಡುವ ಕಾರ್ಯ ಸುಲಭವಾಗಿದೆ.

ಅಮನ್ ಯಾದವ್ ಒಂದು ಫೇಸ್ ಬುಕ್ ಪೇಜ್ ಕೂಡ ನಡೆಸುತ್ತಿದ್ದು ಆತನಿಗೆ 4400 ಗೆಳೆಯರಿದ್ದಾರೆ. ದೀಪಾವಳಿ, ಹೋಳಿ ಹಬ್ಬಗಳನ್ನು ಬಡವರ ಜತೆಗೆ ಆಚರಿಸುವ ಈತ ಇಂದಿನ ಯುವಜನತೆಗೆ ನಿಜವಾಗಿಯೂ ಮಾದರಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X