Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕನ್ನಡ ಶಾಲೆಯ ಸವಿನೆನಪುಗಳು

ಕನ್ನಡ ಶಾಲೆಯ ಸವಿನೆನಪುಗಳು

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ19 April 2017 12:03 AM IST
share
ಕನ್ನಡ ಶಾಲೆಯ ಸವಿನೆನಪುಗಳು

ಕನ್ನಡ ಶಾಲೆಗಳು ಮುಚ್ಚುತ್ತಿರುವ ಇಂದಿನ ದಿನಗಳಲ್ಲಿ, ಕನ್ನಡ ಶಾಲೆಯ ಹಿರಿಮೆ, ಗರಿಮೆಗಳನ್ನು ಎತ್ತಿ ಹಿಡಿಯುವ ‘ಕನ್ನಡ ಶಾಲೆಯ ಸವಿ ನೆನಪುಗಳು’ ಕೃತಿಯನ್ನು ಮಯೂರ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬೈ ಇವರು ಹೊರತಂದಿದ್ದಾರೆ. ಹೊರನಾಡು, ಒಳನಾಡಿನ ಹತ್ತು ಹಲವು ಲೇಖಕರು ಹಲವು ದಶಕಗಳ ಹಿಂದೆ ತಾವು ಕಳೆದ ಕನ್ನಡ ಶಾಲೆಗಳ ಸವಿ ದಿನಗಳನ್ನು ಈ ಕೃತಿಯಲ್ಲಿ ಹಂಚಿಕೊಂಡಿ ದ್ದಾರೆ. ವಿಶ್ವನಾಥ ದೊಡ್ಮನೆ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಸದ್ಯದ ಸಂದರ್ಭಕ್ಕೆ ನಮ್ಮೆಳಗಿನ ಕನ್ನಡತನಗಳನ್ನು ಮುಟ್ಟಿ ನೋಡುವ ಪ್ರಯತ್ನವಾಗಿ ಈ ಕೃತಿಯನ್ನು ಹೊರತರಲಾಗಿದೆ. ಇಂದು ಅಣಬೆಗಳಂತೆ ತಲೆಯೆತ್ತುತ್ತಿರುವ ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ವಿದ್ಯಾರ್ಥಿಗಳು ಯಂತ್ರಗಳಂತೆ ರೂಪುಗೊಳ್ಳುತ್ತಿರುವಾಗ, ಹಿಂದೆ ಕನ್ನಡ ಶಾಲೆಗಳಲ್ಲಿ ಮಕ್ಕಳು ಹೀಗೆ ಪ್ರಕೃತಿಯ ಜೊತೆಗೆ ಅವಿನಾಭಾವ ಸಂಬಂಧಗಳನ್ನಿಟ್ಟು ಸಹಜವಾಗಿ ಅರಳುತ್ತಿದ್ದರು ಎನ್ನುವುದನ್ನು ಇಲ್ಲಿರುವ ಪ್ರತೀ ಬರಹಗಳು ಹೇಳುತ್ತವೆ. ಕನ್ನಡ ಶಾಲೆಗಳೇ ಇಲ್ಲದ ಕರ್ನಾಟಕವೊಂದು ರೂಪು ಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಈ ಹಿರಿಯರ ಹಳೆ ನೆನಪುಗಳು ನಮ್ಮತನವನ್ನು ತಟ್ಟಿ ಎಚ್ಚರಿಸುತ್ತವೆ.
 ಕನ್ನಡ ಶಾಲೆಗಳ ಕುರಿತಂತೆ ಇಲ್ಲಿ ಸುಮಾರು 87 ಲೇಖನಗಳಿವೆ. ಹಲವು ಲೇಖಕರು ಕರ್ನಾಟಕದೊಳಗಿನ ಕನ್ನಡ ಶಾಲೆಗಳ ನೆನಪು ಗಳನ್ನು ಹಂಚಿಕೊಂಡರೆ, ಇನ್ನು ಹಲವರು ಮುಂಬೈಯ ಕನ್ನಡ ಶಾಲೆಗಳ ನೆನಪುಗಳನ್ನೂ, ಅದರ ಬೆಳಕಿನಲ್ಲಿ ಭವಿಷ್ಯ ಕಟ್ಟಿಕೊಂಡುದನ್ನು ಹಂಚಿಕೊಂಡಿದ್ದಾರೆ. ಸನತ್ ಕುಮಾರ್ ಜೈನ್ ಅವರು ಮುಂಬೈ ಕನ್ನಡ ಶಾಲೆಗಳು ಹಾಗೂ ರಾತ್ರಿ ಶಿಕ್ಷಣದ ಕುರಿತಂತೆ ಮುಖ್ಯ ಲೇಖನವೊಂದನ್ನು ಬರೆದಿದ್ದಾರೆ. ಮುಂಬೈಯ ಕನ್ನಡ ಶಾಲೆಗಳು ಮಿನುಗಿದ್ದು ರಾತ್ರಿಯಲ್ಲಿ. ಆದುದರಿಂದಲೇ ಮುಂಬೈಯ ಕವಿಯೊಬ್ಬ, ಈ ರಾತ್ರಿ ಶಾಲೆಯ ವಿದ್ಯಾರ್ಥಿಗಳನ್ನು ‘ನೆಲದ ನಕ್ಷತ್ರಗಳು’ ಎಂದು ಕರೆದಿದ್ದಾನೆ. 1908ರಲ್ಲಿ ಕೋಟೆ ಕ್ಷೇತ್ರದಲ್ಲಿ ಮೊಗವೀರ ಫ್ರೀ ನೈಟ್ ಹೈಸ್ಕೂಲ್ ಎಂಬ ಪ್ರಪ್ರಥಮ ಕನ್ನಡ ರಾತ್ರಿ ಶಾಲೆ ಆರಂಭವಾಗುವುದರಿಂದ, ಮುಂಬೈಯಲ್ಲಿ ಕನ್ನಡ ಶಾಲೆಯ ಹಣತೆ ಹಚ್ಚಲ್ಪಟ್ಟಿತು. ಕಾಡಿಪಟ್ಣ ಚಂದು ಮಾಸ್ತರ್ ಇದಕ್ಕೆ ಆರಂಭಿಕ ಹಜ್ಜೆಯಿ ಟ್ಟವರು. 1939ರಲ್ಲಿ ಈ ಶಾಲೆಗೆ ಮಾನ್ಯತೆ ದೊರಕಿತು. ಮುಂದೆ ಖಾರ್ ಕ್ಷೇತ್ರಕ್ಕೆ ಸ್ಥಳಾಂತರಗೊಂಡು ತನ್ನ 80ನೆ ವರ್ಷದಲ್ಲಿ ಮುಚ್ಚಲ್ಪಟ್ಟಿತು. ಮುಂದೆ ಬೇರೆ ಬೇರೆ ಸಂಘಟನೆಗಳ ಮೂಲಕ, ಸಮಾಜ ಸೇವಕರ ಮೂಲಕ ಮುಂಬೈಯಾದ್ಯಂತ ಕನ್ನಡ ಶಾಲೆಗಳು ವಿಸ್ತರಿಸಿದ್ದು, ನೂರಾರು ಹೊಟೇಲ್ ಕಾರ್ಮಿಕರು ಇಂತಹ ರಾತ್ರಿ, ಹಗಲು ಶಾಲೆಗಳಲ್ಲಿ ಕಲಿತು ಅತ್ಯುನ್ನತ ಸ್ಥಾನಗಳಿಗೇರಿದ್ದೂ ಅವರು ನೆನೆದು ಕೊಳ್ಳುತ್ತಾರೆ. ಮುಂಬೈ ಕನ್ನಡ ಶಾಲೆಗಳೂ ಸೇರಿದಂತೆ 70ರ ದಶಕದ ಕನ್ನಡ ಶಾಲೆಗಳ ಕುರಿತಂತೆ ಹಲವರು ಹೃದಯ ಸ್ಪರ್ಶಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
 ಇಲ್ಲಿರುವ ಬರಹಗಳು ತೀರಾ ಪಕ್ವತೆಯಿಂದ, ಭಾಷಾ ಸಮೃದ್ಧತೆಯಿಂದ ಕೂಡಿದೆ ಎಂದು ಹೇಳುವಂತಿಲ್ಲ. ಪುಸ್ತಕ ಒಂದು ಸ್ಮರಣ ಸಂಚಿಕೆಯ ರೂಪದಲ್ಲಿದೆಯಾದರೂ, ಒಟ್ಟು ಕೃತಿಯ ಉದ್ದೇಶ ಮಾತ್ರ ಶ್ರೇಷ್ಠವಾದುದು. ಕೃತಿಯ ಒಟ್ಟು ಪುಟಗಳು 325, ಮುಖಬೆಲೆ 250 ರೂ. ಆಸಕ್ತರು 092221 37634 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X