Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸ್ಮಾರ್ಟ್‌ಫೋನ್ ಖರೀದಿಯಿಂದಲೇ...

ಸ್ಮಾರ್ಟ್‌ಫೋನ್ ಖರೀದಿಯಿಂದಲೇ ಕೋಟ್ಯಾಧೀಶೆಯಾದಳು, ಆದರೂ ಅದರ ವಿರುದ್ಧ ಹೆತ್ತವರ ಕಿರಿಕಿರಿ ಮಾತ್ರ ನಿಂತಿಲ್ಲ........

ವಾರ್ತಾಭಾರತಿವಾರ್ತಾಭಾರತಿ21 April 2017 3:35 PM IST
share
ಸ್ಮಾರ್ಟ್‌ಫೋನ್ ಖರೀದಿಯಿಂದಲೇ ಕೋಟ್ಯಾಧೀಶೆಯಾದಳು, ಆದರೂ ಅದರ ವಿರುದ್ಧ ಹೆತ್ತವರ ಕಿರಿಕಿರಿ ಮಾತ್ರ ನಿಂತಿಲ್ಲ........

 ಪುಣೆ,ಎ.21: ಲಾತೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಶ್ರದ್ಧಾ ಮೆಂಗಶೆಟ್ಟಿ (20) ಕಳೆದ ಜನವರಿಯಲ್ಲಿ ಸ್ಮಾರ್ಟ್‌ಫೋನ್‌ಗಾಗಿ ಅಂತರ್ಜಾಲವನ್ನು ಜಾಲಾಡುತ್ತಿದ್ದಳು. ಸ್ಮಾರ್ಟ್‌ಫೋನ್ ಖರೀದಿಗೆ ತನ್ನ ತಂದೆ ಒಲವವು ಹೊಂದಿಲ್ಲ ಎನ್ನುವುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ನ್ನು 1,590 ರೂ.ಗಳ ಮಾಸಿಕ ಕಂತಿನಲ್ಲಿ ಖರೀದಿಸಿದ್ದಳು. ಈ ವಹಿವಾಟು ಕೆವೇ ದಿನಗಳಲ್ಲಿ ನೀತಿ ಆಯೋಗದ ‘ಲಕ್ಕಿ ಗ್ರಾಹಕ ಯೋಜನಾ ’ದ ಮೊದಲ ಬಹುಮಾನವಾಗಿ ಒಂದು ಕೋಟಿ ರೂ.ಗಳ ಜಾಕ್‌ಪಾಟ್‌ನ್ನು ಅವಳಿಗೆ ತಂದುಕೊಟ್ಟಿದೆ.

ಎ.14ರಂದು ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಒಂದು ಕೋಟಿ ರೂ.ಗಳ ಚೆಕ್‌ನ್ನು ಶ್ರದ್ಧಾಗೆ ಹಸ್ತಾಂತರಿಸಿದ್ದಾರೆ.

 ತನಗೊಲಿದಿರುವ ಭಾರೀ ಅದೃಷ್ಟದಿಂದಾಗಿ ಶ್ರದ್ಧಾ ಈಗ ತಾನು ಕಲಿಯುತ್ತಿರುವ ಪುಣೆಯ ಎಐಎಸ್‌ಎಸ್‌ಎಂಎಸ್ ಕಾಲೇಜು ಮತ್ತು ಹುಟ್ಟೂರು ಲಾತೂರಿನಲ್ಲಿ ಸೆಲೆಬ್ರಿಟಿಯಾಗಿಬಿಟ್ಟಿದ್ದಾಳೆ.

ಹಲವಾರು ಕಡೆ ಸನ್ಮಾನ ಸಮಾರಂಭಗಳಿಗೆ ತನ್ನನ್ನು ಆಹ್ವಾನಿಸಲಾಗುತ್ತಿದೆ. ಈ ಗೆಲುವನ್ನು ಇನ್ನೂ ಅರಗಿಸಿಕೊಳ್ಳಲಾಗಿಲ್ಲ ಎಂದು ಖುಷಿಯಿಂದ ಬೀಗುತ್ತಿದ್ದ ಶ್ರದ್ಧಾ ನುಡಿದಳು.

 ಶ್ರದ್ಧಾಳ ತಂದೆ ಮೋಹನ್ ಕಿರಾಣಿ ಅಂಗಡಿ ನಡೆಸುತ್ತಿದ್ದರೆ, ತಾಯಿ ಮೀರಾ ಮನೆವಾರ್ತೆ ನೋಡಿಕೊಳ್ಳುತ್ತಿದ್ದಾರೆ. ಶ್ರದ್ಧಾಳಿಗೆ ಬಂದಿರುವ ದುಡ್ಡನ್ನು ಸದ್ಯ ಅವರು ತಮ್ಮ ಉಳಿತಾಯ ಖಾತೆಯಲ್ಲಿ ಜಮಾ ಮಾಡಿದ್ದಾರೆ.

 ತನ್ನ ಅದೃಷ್ಟವನ್ನೇ ಬದಲಿಸಿರುವ,ಕಾರ್ಡ್ ಮೂಲಕ ಸ್ಮಾರ್ಟ್‌ಫೋನ್ ಖರೀದಿಗೆ ಹೆತ್ತವರನ್ನು ಒಪ್ಪಿಸಲು ತಾನು ಪಟ್ಟ ಕಷ್ಟ ತನಗೇ ಗೊತ್ತು ಎನ್ನುತ್ತಾಳೆ ಶ್ರದ್ಧಾ. ಮೊದಲಿಗೆ ಅವರು ಬೇಡವೇ ಬೇಡ ಎಂದಿದ್ದರು. ಅವರು ಬೈಯುತ್ತಿದ್ದರೆ ತಾನು ಬೇಡಿಕೊಳ್ಳುತ್ತಲೇ ಇದ್ದೆ. ಕೊನೆಗೂ ತನ್ನ ಬೇಡಿಕೆಗೆ ಅವರು ಒಪ್ಪಿಕೊಂಡಿದ್ದರು ಎಂದು ಅವಳು ಹೇಳಿದಳು.

ತಾನು ಮೆಚ್ಚಿದ್ದ ಸ್ಮಾರ್ಟ್‌ಫೋನ್ ಬೆಲೆ 7,500 ರೂ.ಆಗಿತ್ತು. ಅದು ತಮ್ಮ ಪಾಲಿಗೆ ದೊಡ್ಡ ಮೊತ್ತವೇ ಆಗಿತ್ತು. ಕಡಿಮೆ ದರದ ಇನ್ನೊಂದು ಫೋನ್ ನೋಡುವಂತೆ ತಂದೆ ಹೇಳಿದ್ದರು. ಆದರೂ ಆನ್‌ಲೈನ್‌ನಲ್ಲಿ ಅದನ್ನು ಮಾಸಿಕ ಕಂತಿನಲ್ಲಿ ಖರೀದಿಸಿದ್ದೆ ಎಂದು ಶ್ರದ್ಧಾ ನುಡಿದಳು.
  ಎ.11 ರಂದು ಸೆಂಟ್ರಲ್ ಬ್ಯಾಂಕಿನ ಮ್ಯಾನೇಜರ್ ಖುದ್ದಾಗಿ ಶ್ರದ್ಧಾಳ ಮನೆಗೆ ಬಂದು ಶುಭಸುದ್ದಿಯನ್ನು ತಿಳಿಸಿದ್ದರು. ಪ್ರಧಾನಿ ಮಂತ್ರಿಗಳು ಬಹುಮಾನದ ಹಣವನ್ನು ನೀಡಲಿದ್ದಾರೆ ಎಂದೂ ತಿಳಿಸಿದ್ದರು. ಆದರೆ ಶ್ರದ್ಧಾ ಹೆತ್ತವರೊಂದಿಗೆ ನಾಗ್ಪುಕ್ಕೆ ತೆರಳುವ ಬಸ್‌ನಲ್ಲಿ ಕುಳಿತ ನಂತರವೇ ಅವರು ಬಹುಮಾನದ ಮೊತ್ತವನ್ನು ತಿಳಿಸಿದ್ದರು.

 ಶ್ರದ್ಧಾ ಈಗ ಕೋಟಿ ರೂ.ಗಳ ಒಡತಿಯಾಗಿದ್ದರೂ ಸ್ಮಾರ್ಟ್‌ಫೋನ್ ಬಗ್ಗೆ ಹೆತ್ತವರ ಗೊಣಗಾಟ ಮಾತ್ರ ನಿಂತಿಲ್ಲ. ಅದೊಂದು ಪೀಡೆ ಎಂದು ಈಗಲೂ ಭಾವಿಸಿರುವ ಅವರು ಓದಿನ ಕಡೆ ಗಮನವನ್ನು ಕೊಡುವಂತೆ ಮಗಳನ್ನು ಆಗಾಗ್ಗೆ ಗದರುತ್ತಲೇ ಇರುತ್ತಾರೆ!

share
ವಾರ್ತಾಭಾರತಿ
ವಾರ್ತಾಭಾರತಿ
Next Story
X