Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಫೇಸ್ ಬುಕ್, ಜೈಲು, ಮದುವೆ ...

ಫೇಸ್ ಬುಕ್, ಜೈಲು, ಮದುವೆ ...

ಕೈಕೋಳ ತೊಟ್ಟ ವರ ಜೈಲಿಗೆ , ಕಂಕಣ ಭಾಗ್ಯದ ಬಳಿಕ ವಧು ಮನೆಗೆ

ವಾರ್ತಾಭಾರತಿವಾರ್ತಾಭಾರತಿ21 April 2017 4:20 PM IST
share
ಫೇಸ್ ಬುಕ್, ಜೈಲು, ಮದುವೆ ...

 ಧನಬಾದ್(ಜಾರ್ಖಂಡ್),ಎ.21: ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತವೆ ಎನ್ನುವುದು ಹಳೆಯ ನಾಣ್ಣುಡಿ.ಆದರೆ ಇಲ್ಲೊಂದು ಮದುವೆಗೆ ಪೀಠಿಕೆಯಾದ ಪ್ರೇಮ ಅಂತರ್ಜಾಲದಲ್ಲಿ ಹುಟ್ಟಿ ಜೈಲಿನಲ್ಲಿ ಅರಳಿದೆ.

 ವಿವಾಹ ನೋಂದಣಿ ಕಚೇರಿಗೆ ಮದುಮಗ ಕೈಕೋಳ ತೊಟ್ಟು ಪೊಲೀಸ್ ವ್ಯಾನಿನಲ್ಲಿ ಬಂದರೆ, ಮದುಮಗಳು ಹೆತ್ತವರ ಜೊತೆ ಕಾರಿನಲ್ಲಿ ಬಂದಿದ್ದಳು. ಅವರ ದಾಖಲೆ ಪತ್ರಗಳನ್ನು ಪರಿಶೀಲಿಸಿದ ವಿವಾಹ ನೋಂದಣಾಧಿಕಾರಿಗಳು ಅವರಿಬ್ಬರನ್ನೂ ಸತಿ-ಪತಿಗಳೆಂದು ಘೋಷಿಸಿದರು.
 ಅಂದ ಹಾಗೆ ಇದು ಸಾಮಾನ್ಯವಾಗಿ ನಡೆದ ಮದುವೆಯಲ್ಲ. ಅವರಿಬ್ಬರೂ ಫೇಸ್‌ಬುಕ್‌ನಲ್ಲಿ ಪರಸ್ಪರ ಪ್ರೇಮದಲ್ಲಿ ಬಿದ್ದಿದ್ದರು. ಹುಡುಗ ಮದುವೆಗೆ ನಿರಾಕರಿಸಿದಾಗ ಹುಡುಗಿ ಅವನನ್ನು ಜೈಲಿಗೆ ಕಳುಹಿಸಿದ್ದಳು. ಆದರೆ ಹುಡುಗನಲ್ಲಿ ಹೃದಯ ಪರಿವರ್ತನೆಯಾಗಿದ್ದು, ಗುರುವಾರ ಧನಬಾದ್‌ನಲ್ಲಿ ಮದುವೆಯಾಗಿದ್ದಾರೆ.

 ಸಾಮಾನ್ಯವಾಗಿ ಮದುವೆಯ ಬಳಿಕ ನವದಂಪತಿ ಪರಸ್ಪರ ಕೈಗಳನ್ನು ಹಿಡಿದುಕೊಂಡು ಜೊತೆಯಾಗಿ ಸಾಗುತ್ತಾರೆ. ಇಲ್ಲಿ ಮಾತ್ರ ಅವರಿಬ್ಬರ ದಾರಿಗಳು ಭಿನ್ನವಾಗಿದ್ದವು. ಬಿಹಾರ ಮೂಲದ ಇಂಜಿನಿಯರ್ ರಿತೇಶ್ ಕುಮಾರ್(28) ಜೈಲಿಗೆ ಮರಳಿದರೆ, ಸುದೀಪ್ತಿ ಕುಮಾರಿ (23) ಹೆತ್ತವರೊಂದಿಗೆ ಮನೆಗೆ ವಾಪಸಾಗಿದ್ದಾಳೆ.

 ತನ್ನ ಮಗಳ ಭಾವನೆಗಳನ್ನು ಮತ್ತು ರಿತೇಶ್‌ಗಾಗಿ ಅವಳ ಪ್ರೀತಿಯನ್ನು ತಾನು ಗೌರವಿಸುತ್ತೇನೆ ಎಂದು ವಧುವಿನ ತಂದೆ ಹರಧನ್ ಮಹಾಲಿ ಸುದ್ದಿಗಾರರಿಗೆ ತಿಳಿಸಿದರು.
ಮದುವೆ ಪ್ರಸ್ತಾವ ಬಂದಾಗ ಇಲ್ಲವೆನ್ನಲು ನನಗೆ ಸಾಧ್ಯವಾಗಲಿಲ್ಲ. ಅವರಿಬ್ಬರನ್ನೂ ಆದಷ್ಟು ಬೇಗ ಒಂದಾಗಿಸುವುದು ನನ್ನ ಈಗಿನ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

 ಸೋಮವಾರ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದ್ದು, ಅಂದು ಈ ನವದಂಪತಿ ಕೊನೆಗೂ ಒಂದಾಗಬಹುದು.
ಅವರಿಬ್ಬರದೂ ಪ್ರೇಮ-ದ್ವೇಷ-ಪ್ರೇಮದ ಸಂಬಂಧವಾಗಿದ್ದು, ಬಹಳಷ್ಟು ಏಳುಬೀಳುಗಳ ಬಳಿಕ ಮದುವೆಯಲ್ಲಿ ಸುಖಾಂತ್ಯಗೊಂಡಿದೆ ಎಂದು ಕುಟುಂಬದ ಸದಸ್ಯರು ಹೇಳಿದರು.

2012ರಲ್ಲಿ ಮೊದಲ ಬಾರಿಗೆ ಫೇಸ್‌ಬುಕ್‌ನಲ್ಲಿ ಭೇಟಿಯಾಗಿದ್ದ ಈ ಜೋಡಿ ಮುಖತಃ ಭೇಟಿಯಾಗುವವರೆಗೆ ಗಂಟೆಗಟ್ಟಲೆ ಕಾಲ ಚಾಟಿಂಗ್‌ನಲ್ಲಿ ತೊಡಗಿದ್ದರು. ತಾವಿಬ್ಬರೂ ಪರಸ್ಪರ ಪ್ರೇಮದ ಸುಳಿಗೆ ಸಿಲುಕಿದ್ದೇವೆ ಎನ್ನುವುದು ಅವರಿಗೆ ಶೀಘ್ರವೇ ಗೊತ್ತಾಗಿತ್ತು. ಬಿಹಾರದ ಕಹಲ್‌ಗಾಂವ್‌ನಲ್ಲಿಯ ನ್ಯಾಷನಲ್ ಥರ್ಮಲ್ ಪವರ್ ಸ್ಟೇಷನ್‌ನಲ್ಲಿ ಇಂಜಿನಿಯರ್ ಆಗಿರುವ ರಿತೇಶ್ ಅವಳನ್ನು ನೋಡಲೆಂದೇ ಆಗಾಗ್ಗೆ ಧನಬಾಗ್‌ಗೆ ಬರುತ್ತಿದ್ದ.
ದೇವಸ್ಥಾನವೊಂದರಲ್ಲಿ ಅವರು ಗುಟ್ಟಾಗಿ ಮದುವೆಯನ್ನೂ ಆಗಿದ್ದರು. ಆದರೆ ತನ್ನನ್ನು ವಿಧ್ಯುಕ್ತವಾಗಿ ಮದುವೆಯಾಗುವಂತೆ ದಲಿತ ವರ್ಗಕ್ಕೆ ಸೇರಿದ ಸುದೀಪ್ತಿ ಹೇಳಿದಾಗ ತಾನು ಈ ಈ ಮದುವೆಯಾದರೆ ತನ್ನ ತಾಯಿ ಅನಿತಾ ದೇವಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ನೆಪವೊಡ್ಡಿ ರಿತೇಶ ನಿರಾಕರಿಸಿದ್ದ.

ತನಗೆ ವಂಚನೆಯಾಯಿತು ಎಂದು ಭಾವಿಸಿದ ಸುದೀಪ್ತಿ 2017,ಫೆಬ್ರುವರಿಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಿತೇಶ್ ವಿರುದ್ಧ ಲೈಂಗಿಕ ಕಿರುಕುಳ ದೂರನ್ನು ದಾಖಲಿಸಿದ್ದಳು. ಕಹಲ್‌ಗಾಂವ್‌ಗೆ ತೆರಳಿದ್ದ ಪೊಲೀಸರು ರಿತೇಶ್‌ನನ್ನು ಬಂಧಿಸಿ ಕರೆತಂದು ಜೈಲಿಗೆ ತಳ್ಳಿದ್ದರು.

 ಆದರೆ ಕಥೆ ಅಲ್ಲಿಗೇ ಅಂತ್ಯವಾಗಲಿಲ್ಲ.ಸುದೀಪ್ತಿ ಮನಸ್ಸು ಬದಲಾಯಿಸಿಕೊಂಡಿದ್ದಳು ಮತ್ತು ಆಗಾಗ್ಗೆ ಜೈಲಿಗೆ ತೆರಳಿ ರಿತೇಶ್‌ನನ್ನು ಭೇಟಿಯಾಗುತ್ತಿದ್ದಳು.ವಾರಗಳ ಬಳಿಕ ರಿತೇಶ್ ಮದುವೆಯ ಪ್ರಸ್ತಾವವನ್ನು ಮುಂದಿರಿಸಿದ್ದು, ಅದನ್ನಾಕೆ ಒಪ್ಪಿಕೊಂಡಿದ್ದಳು.

 ರಿತೇಶ್ ಕಳೆದ ತಿಂಗಳು ಜೈಲಿನಿಂದಲೇ ನ್ಯಾಯಾಲಯದ ಮೂಲಕ ಮದುವೆಗೆ ಅರ್ಜಿಯನ್ನು ಸಲ್ಲಿಸಿದ್ದ.ಅಗತ್ಯ ಅನುಮತಿಗಳ ಬಳಿ ಎರಡೂ ಕುಟುಂಬಗಳು ಒಂದಾಗಿ ಗುರುವಾರ ರಿತೇಶ ಮತ್ತು ಸುದೀಪ್ತಿ ಮದುವೆಯನ್ನು ನೆರವೇರಿಸಿವೆ.
  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X