Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕ್ಷಾಮ ಡಂಗುರ

ಕ್ಷಾಮ ಡಂಗುರ

ಮಾನವ ನಿರ್ಮಿತ ಬರದ ಬೇಗೆಯನ್ನು ಬಿಚ್ಚಿಡುವ ಮನೋಜ್ಞ ಕೃತಿ

ಡಾ. ಜಗದೀಶ್ ಕೊಪ್ಪಡಾ. ಜಗದೀಶ್ ಕೊಪ್ಪ21 April 2017 9:51 PM IST
share
ಕ್ಷಾಮ ಡಂಗುರ

ಕಳೆದ ಮೂರು ವರ್ಷಗಳಿಂದ ಸತತವಾಗಿ ಕರ್ನಾಟಕವನ್ನು ಆವರಿಸಿಕೊಂಡಿರುವ ಬರಗಾಲ ಎಲ್ಲ ಜೀವಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಾಜ್ಯದ ನೂರ ಅರವತ್ತೆರೆಡಕ್ಕೂ ಹೆಚ್ಚು ತಾಲೂಕುಗಳು ಬರದ ಬೇಗೆಯಲ್ಲಿ ಬೇಯುತ್ತಿವೆ. ಪ್ರಕೃತಿಯ ಸೃಷ್ಟಿಯ ಒಂದು ಭಾಗವಾಗಿರುವ ಬರವು ಈ ದೇಶಕ್ಕಾಗಲಿ ಅಥವಾ ರಾಜ್ಯಕ್ಕಾಗಲಿ ಹೊಸತಲ್ಲ. 1943 ರಲ್ಲಿ ಭಾರತದಲ್ಲಿ ಸಂಭವಿಸಿದ ಭೀಕರ ಬರಗಾಲಕ್ಕೆ ಬಿಹಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜನತೆ ಹಸಿನಿಂದ ಕಂಗಾಲಾಗಿ ತರಗಲೆಗಳಂತೆ ಭೂಮಿಗೆ ಉದುರಿ ಹೋದ ದುರಂತದ ಇತಿಹಾಸವು ಚರಿತ್ರೆಯ ಪುಟಗಳಲ್ಲಿ ಚಿತ್ರಗಳ ಸಮೇತ ದಾಖಲಾಗಿದೆ. ಈ ಘಟನೆಯ ಬಳಿಕ 1970 ರ ದಶಕದಲ್ಲಿ ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಮತ್ತೊಮ್ಮೆ ಭೀಕರವಾದ ಕ್ಷಾಮ ಆವರಿಸಿಕೊಂಡಿತ್ತು. ನಲವತ್ತು ವರ್ಷಗಳ ಹಿಂದೆ ಬರದ ಲಕ್ಷಣಗಳಲ್ಲಿ ಪ್ರಮುಖವಾಗಿ ಆಹಾರದ ಕೊರತೆ ಎದ್ದು ಕಾಣುತ್ತಿತ್ತು. ನಂತರದ ದಿನಗಳಲ್ಲಿ ಕುಡಿಯುವ ನೀರಿನ ಕೊರತೆಯಿಂದಾಗಿ ಜನ ಮತ್ತು ಜಾನುವಾರುಗಳಿಗೆ ತೊಂದರೆಯಾಗಿ ಜನತೆ ನೀರು ಮತ್ತು ಆಹಾರ ಅರಸಿಕೊಂಡು ಗುಳೆ ಹೋಗುವುದು ಸಾಮಾನ್ಯ ಸಂಗತಿಯಾಗಿತ್ತು.

ಇತ್ತೀಚೆಗಿನ ಅಂದರೆ ಕಳೆದ ಮೂವತ್ತು ವರ್ಷಗಳಲ್ಲಿ ಬರದ ಚಿತ್ರಣವೇ ಬದಲಾಗಿ ಹೋಗಿದೆ. ಬರ ಎನ್ನುವುದು ಪ್ರಕೃತಿಯ ಸೃಷ್ಟಿಗಿಂತ ಹೆಚ್ಚಾಗಿ ಮಾನವ ನಿರ್ಮಿತ ಬರ ಪದೇ ಪದೇ ಈ ದೇಶದ ಹಲವಾರು ರಾಜ್ಯಗಳಲ್ಲಿ ತಲೆದೋರತೊಡಗಿದೆ. ಮನುಷ್ಯರು ಮತ್ತು ಪ್ರಾಣಿಗಳ ಕುಡಿಯುವ ನೀರಿಗಾಗಿ ಬಳಕೆಗೆ ತರಲಾದ ಕೊಳವೆ ಬಾವಿ ತಂತ್ರಜ್ಞಾನವು ಇಡೀ ಭೂಮಿಯ ಅಂತರ್ಜಲವನ್ನು ಹೀರಿ ಹಾಕುವುದರ ಮೂಲಕ ನಮ್ಮ ಪ್ರಾಚೀನ ದೇಶೀ ಸಂಸ್ಕೃತಿಯ ಜಲಮೂಲಗಳ ತಾಣಗಳಾಗಿದ್ದ ಕೆರೆ ಕಟ್ಟೆ, ಬಾವಿಗಳನ್ನು ನುಂಗಿ ಹಾಕಿದೆ. ಈಗಿನ ಬರದಲ್ಲಿ ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿನದು ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಕರ್ನಾಟಕದ ಯಾವುದೇ ಪ್ರದೇಶಕ್ಕೆ ಹೋದರೂ ಕೇವಲ ನಲವತ್ತು, ಐವತ್ತು ಅಡಿಗಳ ಆಳದಲ್ಲಿ ತೆರೆದ ಬಾವಿಯ ಮೂಲಕ ದೊರೆಯುತ್ತಿದ್ದ ನೀರು ಈಗ ಎರಡು ಸಾವಿರ ಅಡಿಗಳ ಆಳಕ್ಕೆ ಇಳಿದರೂ ದೊರೆಯುತ್ತಿಲ್ಲ. ಭೂಮಿಯ ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತಿದ್ದ ಕೆರೆಗಳು, ಕಟ್ಟೆಗಳು, ಒಡ್ಡುಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಕೆಲವು ಕೆರೆ ಕಟ್ಟೆಗಳು ಹೂಳು ಮತ್ತು ಕಸ ಹಾಗೂ ಕಳೆಗಳಿಂದ ತುಂಬಿಕೊಂಡಿದ್ದರೆ, ಇನ್ನರ್ಧ ಕೆರೆಗಳು ಕೃಷಿಭೂಮಿಯಾಗಿ ಇಲ್ಲವೇ ನಿವೇಶನಗಳಾಗಿ ಮಾರ್ಪಾಡಾಗಿವೆ. ಕೆರೆಗಳ ಮತ್ತು ಕಟ್ಟೆಗಳ ಹೂಳೆತ್ತೆವುದು ಒಂದು ಕಾಲದಲ್ಲಿ ಪ್ರತೀ ಊರಿನ ಸಮುದಾಯದ ಚಟುವಟಿಕೆಯಾಗಿತ್ತು. ಈಗ ಅದು ಸರಕಾರ ಕೆಲಸ ಎಂಬ ಉದಾಸೀನ ಭಾವನೆ ಜನರಲ್ಲಿ ಮನೆ ಮಾಡಿದೆ. ಯಾವುದೇ ಗ್ರಾಮಗಳಿಗೆ ಹೋದರೂ ದೇವಸ್ಥಾನಗಳ ಮುಂದೆ ಅಥವಾ ಅಕ್ಕ ಪಕ್ಕದಲ್ಲಿ ಇರುತ್ತಿದ್ದ ಕಲ್ಯಾಣಿಗಳಲ್ಲಿ ಶುದ್ಧ ತಿಳಿಯಾದ ನೀರು ಸಿಗುತ್ತಿತ್ತು. ಈಗ ಪಾಚಿಗಟ್ಟಿದ ನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳು ಭಕ್ತರನ್ನು ಸ್ವಾಗತಿಸುತ್ತಿವೆ.

ನಿಸರ್ಗದ ಕೊಡುಗೆಗಳನ್ನು ಮನಸ್ಸೋ ಇಚ್ಛೆ ಬಳಸಿ, ಹಾಳು ಮಾಡುವುದು ನಮ್ಮ ಪಾರಂಪರಿಕ ಪರಮ ಹಕ್ಕು ಎಂಬ ಅಹಂಕಾರದಲ್ಲಿ ಬದುಕುತ್ತಿರುವ ಆಧುನಿಕ ಜಗತ್ತಿಗೆ ಭವಿಷ್ಯದಲ್ಲಿ ಕಾಡಬಹುದಾದ ಅತ್ಯಂತ ಭೀಕರ ಸಮಸ್ಯೆಗಳೆಂದರೆ ಒಂದು ಕುಡಿಯುವ ನೀರು, ಮತ್ತೊಂದು ಸೃಷ್ಟಿಯಾಗುತ್ತಿರುವ ಕಸದ ಸಮಸ್ಯೆ. ಈಗಾಗಲೇ ಇದರ ಲಕ್ಷಣಗಳು ಎಲ್ಲೆಡೆ ಕಾಣಿಸಿಕೊಂಡಿವೆ. ಮನುಷ್ಯನ ಇಂತಹ ಸ್ವಯಂ ಕೃತ ಅಪರಾಧದಿಂದಾಗಿ ಮೂಕ ಪ್ರಾಣಿಗಳು ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಪರಿತಪಿಸುತ್ತಿವೆ. ಅರಣ್ಯದಲ್ಲಿ ಜಲಮೂಲಗಳು ಬತ್ತಿ ಹೋಗಿ, ಹಸಿರು ಮಾಯವಾಗಿದೆ. ಪ್ರಾಣಿಗಳು ನಾಡಿನತ್ತ ಮುಖಮಾಡಿ ಪ್ರಾಣ ಕಳೆದುಕೊಳ್ಳುತ್ತಿವೆ. ಮನುಷ್ಯ ನಾಗರಿಕತೆ ಹುಟ್ಟಿದಾಗಿನಿಂದ ಅವನ ಜೊತೆಯಲ್ಲಿ ಪಳಗಿದ ಮುಖ್ಯ ಪ್ರಾಣಿಗಳಲ್ಲಿ ನಾಯಿ, ಕುದುರೆ ಮತ್ತು ಹಸು ಅಥವಾ ದನ ಇವುಗಳು ಮುಖ್ಯವಾದವುಗಳು. ಜಾನುವಾರುಗಳು ಕೃಷಿಯ ಚಟುವಟಿಕೆಯಲ್ಲಿ ಮುಖ್ಯವಾದ ಪಾತ್ರವಹಿಸತೊಡಗಿದ ಮೇಲೆ ಅವು ಮನುಷ್ಯನ ಸಂಗಾತಿಗಳಾಗಿ ಈವರೆಗೆ ಬದುಕಿದ್ದವು. ಆದರೆ, ಕೃಷಿ ಚಟುವಟಿಕೆಗೆ ಅಧುನಿಕ ತಂತ್ರಜ್ಞಾನ ಕಾಲಿರಿಸಿದ ನಂತರ ರೈತರಿಗೆ ಅವುಗಳ ಮೇಲಿದ್ದ ಕಾಳಜಿ ಮತ್ತು ಕರಳು ಬಳ್ಳಿಯ ಸಂಬಂಧ ಕಡಿದು ಹೋಯಿತು. ಟ್ರಾಕ್ಟರ್ ಮತ್ತು ಟಿಲ್ಲರ್ ಬಳಕೆ ಬಂದ ಮೇಲೆ ಜಾನುವಾರುಗಳೆಂದರೆ, ಮಾಂಸದ ಪ್ರಾಣಿಗಳು ಎಂಬ ಭಾವನೆ ಬೆಳೆಯತೊಡಗಿತು. ಇದಕ್ಕೆ ಉದಾಹರಣೆ ಎಂಬಂತೆ ನಾಡಿನೆಲ್ಲಡೆ ರಸ್ತೆಗಳಲ್ಲಿ ನಾವು ಬೀಡಾಡಿ ದನಕರುಗಳನ್ನು ಕಾಣುತ್ತಿದ್ದೇವೆ.

ನಗರಗಳಲ್ಲಿ ಕುಡಿಯಲು ಒಂದು ಹನಿ ನೀರಿಲ್ಲದೆ, ಅಂಬಾ ಎಂದು ಆರ್ತನಾದದಲ್ಲಿ ಕೂಗುತ್ತಾ ಓಡಾಡುವ ದನಕರುಗಳನ್ನು ನೋಡಿದಾಗ ಕರುಳು ಕಿತ್ತು ಬಂದ ಅನುಭವವಾಗುತ್ತದೆ. ಇಂತಹ ಮೂಕ ಪ್ರಾಣಿಗಳಿಗೆ ಒಂದು ಹಿಡಿ ಮೇವು, ಒಂದು ಕೊಡ ನೀರು ಕೊಡಲಾಗದ ದೇಶ ಭಕ್ತರು ‘‘ ಗೋ ಸಂರಕ್ಷಣೆಯ’’ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಮಿಂಚುತ್ತಿದ್ದಾರೆ. ಹಲವರಿಗೆ ಇದು ಕೇಂದ್ರ ಸರಕಾರದ ಹಣ ದೋಚುವ ದಂಧೆಯಾಗಿದೆ ಎಂದರೆ ಅತಿಶಯದ ಮಾತಲ್ಲ.

ಇಂತಹ ಸಂಕಟದ ಕ್ಷಣಗಳಲ್ಲಿ ನಮ್ಮ ನಡುವಿನ ಬಲು ಸೂಕ್ಷ್ಮತೆಯ ಬರಹಗಾರ ಹಾಗೂ ನಾಡಿನ ಜಲತಜ್ಞ ಎಂದು ಕರೆಯಬಹುದಾದ ಶಿರಸಿ ಬಳಿಯ ಕಳವೆ ಗ್ರಾಮದ ಶಿವಾನಂದ ಕಳವೆ ಅವರು ಇತ್ತೀಚೆಗೆ ಹೊರ ತಂದಿರುವ ‘‘ಕ್ಷಾಮ ಡಂಗುರ’’ ಎಂಬ ಕೃತಿ ನಮ್ಮೆಲ್ಲರ ಅವಿವೇಕತನಕ್ಕೆ ಮತ್ತು ಮನುಷ್ಯನ ವಿಕಾರಗಳಿಗೆ ಕನ್ನಡಿ ಹಿಡಿದಂತಿದೆ. ತನ್ನೂರಿನಲ್ಲಿ ನಿರ್ಮಿಸಿಕೊಂಡಿರುವ ಕಾನ್ಮನೆ ಎಂಬ ಕುಟಿರದಲ್ಲಿ ಪರಿಸರ ಪ್ರಜ್ಞೆಯನ್ನು ನಾಡಿನ ಮಕ್ಕಳ ಎದೆಯಲ್ಲಿ ಬಿತ್ತುವ ಕ್ರಿಯೆಯನ್ನು ಕಾಯಕ ಮಾಡಿಕೊಂಡಿರುವ ಮಿತ್ರ ಕಳವೆಯವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕನ್ನಡ ನಾಡನ್ನು ತಿರುಗುತ್ತಾ ಪ್ರತೀ ಪ್ರದೇಶದ ಮಣ್ಣಿನ ವಾಸನೆಯನ್ನು ಬಲ್ಲವರಾಗಿದ್ದಾರೆ. ಕನ್ನಡನಾಡಿನ ನೆಲ, ಜಲ, ವಾಯು, ಗಿಡ, ಮರ, ಪಕ್ಷಿ ಮತ್ತು ಪ್ರಾಣಿಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದಾರೆ. ಹಾಗಾಗಿ ಈ ಕೃತಿಯಲ್ಲಿ ಪ್ರಸ್ತಾವನೆಯ ಮಾತುಗಳನ್ನು ಬರೆಯುತ್ತಾ, ‘‘ಈಗ ಕರ್ನಾಟಕಕ್ಕೆ ಬಂದಿರುವ ಬರವನ್ನು ವಿಶ್ಲೇಷಿಸುತ್ತಾ ಇದನ್ನು ನೀರಿನ ಟ್ಯಾಂಕರ್‌ಗಳ ಸುಗ್ಗಿಗಾಗಿ ಸೃಷ್ಟಿಯಾದ ಬರ’’ ಎಂಬ ಅರ್ಥಪೂರ್ಣವಾದ ಮಾತುಗಳನ್ನು ದಾಖಲಿಸಿದ್ದಾರೆ.

ಉತ್ತರದ ಬೀದರ್ ನಿಂದ ದಕ್ಷಿಣದ ಚಾಮರಾಜನಗರದ ವರೆಗೆ ಮತ್ತು ಪೂರ್ವದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ ಹಿಡಿದು ಪಶ್ಚಿಮ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವರೆಗೆ ನಾಡಿ ಮಿಡಿತವನ್ನು ಬಲ್ಲ ಶಿವಾನಂದ ಕಳವೆಯವರು ಈ ಕೃತಿಯಲ್ಲಿ ಮೂವತ್ತೆರೆಡು ಲೇಖನಗಳನ್ನು ದಾಖಲಿಸಿದ್ದು, ಈ ನಾಡಿನ ಐತಿಹಾಸಿಕ ಕೆರೆಗಳಿಂದ ಹಿಡಿದು ಸಣ್ಣ ಕೆರೆಗಳವರೆಗಿನ ದುಸ್ಥಿತಿಯನ್ನು ಮನ ಮುಟ್ಟುವಂತೆ ವಿವರಿಸಿದ್ದಾರೆ. ಇವಿಷ್ಟು ಸಾಲದೆಂಬಂತೆ ಕಾವೇರಿ ಕಣಿವೆಯುದ್ದಕ್ಕೂ ತಿರುಗಾಡಿ ಅಲ್ಲಿನ ಸ್ಥಿತಿಗತಿಗಳ ಅವಲೋಕನವನ್ನು ಮಾಡುತ್ತಾ, ನಾವು ಜಲ ಸಂರಕ್ಷಣೆಯಲ್ಲಿ ಎಲ್ಲಿ ದಾರಿ ತಪ್ಪಿದ್ದೇವೆ ಎಂಬುದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಇಷ್ಟೇ ಕಾಳಜಿಯಿಂದ ಮಲೆನಾಡಿನ ಮಳೆಯ ಕೊರತೆಯನ್ನು ಚರ್ಚಿಸುವುದರ ಜೊತೆಗೆ ತಾವು ಹುಟ್ಟಿ ಬೆಳೆದ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿಯ ನೆಲೆಯಾದ ಲಾಲ್ ಗುಳಿ ಸಮೀಪದ ಗಿರಿ ಗಿರಿ ಪಾತರ್ ಎಂಬ ಸ್ಥಳದಿಂದ ಹಿಡಿದು, ಹಳಿಯಾಳ ತಾಲೂಕಿನ ಭಗವತಿ ಎಂಬ ಅರಣ್ಯ ಪ್ರದೇಶದಲ್ಲಿ ಬೀಳುತ್ತಿದ್ದ ಮಳೆಯ ಪ್ರಮಾಣ ಹಾಗೂ ನೀರನ್ನು ಹಿಡಿದಿಡುವ ಅಲ್ಲಿನ ಮಣ್ಣಿನ ಗುಣವನ್ನು ವಿಶ್ಲೇಷಿಸಿದ್ದಾರೆ.

ಕಳವೆಯ ಜಲಕ್ಷಾಮದ ಕುರಿತ ಚಿಂತನೆಯ ವಿಶೇಷವೇನೆಂದರೆ, ಅವರು ಕೇವಲ ಸಮಸ್ಯೆಗಳ ಬಗ್ಗೆ ಮಾತ್ರ ಬೊಟ್ಟು ಮಾಡದೆ, ಪರಿಹಾರಕ್ಕ್ಕೂ ಸಹ ಮಾರ್ಗೋಪಾಯಗಳನ್ನು ಸೂಚಿಸುತ್ತಾರೆ. ಇದರ ಜೊತೆಗೆ ಆ ಪ್ರದೇಶದ ಮಳೆಯ ಪ್ರಮಾಣದ ಇತಿಹಾಸ ಹಾಗೂ ಈ ಹಿಂದೆ ಇದ್ದ ಜಲಮೂಲ ತಾಣಗಳ ಬಗ್ಗೆ ಗಮನ ಸೆಳೆಯುತ್ತಾರೆ. ‘‘ನೀರಿನ ಸಮಸ್ಯೆ ಇರುವ ಹಳ್ಳಿಗಳು ನಿಧಾನಕ್ಕೆ ತಮ್ಮ ಕೃಷಿ ಜೀವನದ ಅವಲೋಕನ ನಡೆಸಬೇಕು. ನೀರಿನ ಬಳಕೆಯ ತಿಳುವಳಿಕೆ ಪಡೆಯಬೇಕು.

ನೀರು ಕಣ್ಮರೆಯಾದದ್ದು ಹೇಗೆ? ಎಂದು ಗಮನಿಸುತ್ತಾ ಹಿಂದಕ್ಕೆ ಹೋದರೆ, ಊರಲ್ಲಿ ನೀರು ಹಿಡಿಯುವ ಮುಂದಿನ ದಾರಿಗಳು ಕಾಣಿಸುತ್ತವೆ’’ ಎಂಬ ವಿವೇಕದ ಮಾತನ್ನಾಡುವ ಲೇಖಕರು. ಮಲೆನಾಡಿನ ಜಲಕ್ಷಾಮ ಕುರಿತಂತೆ ಬರೆಯುತ್ತಾ, ‘‘ಗುಡ್ಡಗಾಡಿನ ತುಂಬಾ ಮರದಮ್ಮನ ನೆಲೆಯಾಗಿ ನೀರಿನಲ್ಲಿ ನಗುತ್ತಿದ್ದ ಮಲೆನಾಡಿನ ಊರುಗಳಿಗೆ ಬರದಮ್ಮನ ಆಗಮನವಾಗಿದೆ. ಕಳೆದ ವರ್ಷ ವಾಡಿಕೆಯ ಅರ್ಧದಷ್ಟು ಮಳೆ ಸುರಿಯದ ಕಾರಣ ಜಲ ಸಮಸ್ಯೆ ಬೆಳೆದಿದೆ. ಕಾಡುಗುಡ್ಡಗಳಲ್ಲಿ ನಿಸರ್ಗ ಬಚ್ಚಿಟ್ಟ ನೀರಿನ ಠೇವಣಿಯನ್ನು ಖಾಲಿ ಮಾಡುವ ತಂತ್ರವನ್ನು ಕಳೆದ ನಲವತ್ತು ವರ್ಷಗಳಿಂದ ಅನುಸರಿಸಿದ ಪರಿಣಾಮ ಜಲನಿಧಿಗಳು ಬರಿದಾಗಿವೆ’’ ಎಂಬ ಎಚ್ಚರಿಕೆಯ ಸಂದೇಶವನ್ನೂ ಸಹ ಈ ಕೃತಿಯಲ್ಲಿ ನೀಡಿದ್ದಾರೆ.

ಬರದ ಸಂದರ್ಭದಲ್ಲಿ ಸರಕಾರ ಮತ್ತು ಜನಪ್ರತಿನಿಧಿಗಳತ್ತ ಮುಖಮಾಡದೆ, ನಾವೇ ಸ್ವಯಂ ಪ್ರೇರಿತರಾಗಿ ಏನೆಲ್ಲಾ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂಬುದಕ್ಕೆ ದಿಕ್ಷೂಚಿಯಂತಿರುವ ಶಿವಾನಂದ ಕಳವೆಯವರ ಈ ಕೃತಿ ಕರ್ನಾಟಕದ ಪ್ರತಿ ಮನೆಯಲ್ಲಿರಬೇಕಾದ ಅಮೂಲ್ಯ ಕೃತಿಯಾಗಿದೆ.

share
ಡಾ. ಜಗದೀಶ್ ಕೊಪ್ಪ
ಡಾ. ಜಗದೀಶ್ ಕೊಪ್ಪ
Next Story
X