ಎ.25, 26ರಂದು ಪುತ್ತೂರು ಬಾಲವನದಲ್ಲಿ ನಾಟಕೋತ್ಸವ
ಪುತ್ತೂರು, ಎ.24: ರಂಗಾಯಣ ಮೈಸೂರು ಆಶ್ರಯದಲ್ಲಿ ಪರ್ಲಡ್ಕದಲ್ಲಿರುವ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಎ.25 ಮತ್ತು 26ರಂದು 2 ದಿನಗಳ ನಾಟಕೋತ್ಸವ ನಡೆಯಲಿದೆ ಎಂದು ರಂಗಕರ್ಮಿ ವಿದ್ದು ಉಚ್ಚಿಲ್ ತಿಳಿಸಿದ್ದಾರೆ.
ರಂಗಾಯಣ ಮೈಸೂರು ಯುವ ಸಂಚಾರಿ ರಂಗಘಟಕವು ‘ರಂಗ ಪಯಣ-2017’ ಶೀರ್ಷಿಕೆಯಡಿ ರಾಜ್ಯಾದ್ಯಂತ 2 ದಿನಗಳ ನಾಟಕ ಪ್ರದರ್ಶನ ನೀಡುತ್ತಿದ್ದು, ಈ ಪ್ರಯುಕ್ತ ಡಾ. ಶಿವರಾಮ ಕಾರಂತರ ಬಾಲವನದ ಬಯಲು ರಂಗಮಂದಿರದಲ್ಲಿ ನಾಟಕೋತ್ಸವ ಆಯೋಜಿಸಲಾಗಿದೆ.
ಎ.25ರಂದು ಸಂಜೆ 6:30ಕ್ಕೆ ಚಂದ್ರಕಾಂತ ಕುಸನೂರು ರಚನೆಯ ಸಂತೋಷ್ ಕುಮಾರ್ ಕುಸನೂರು ನಿರ್ದೇಶದ ‘ದಿಂಡಿ’ ನಾಟಕ ಪ್ರದರ್ಶನಗೊಳ್ಳಲಿದೆ.
ಎ.26ರಂದು ಸಂಜೆ 6:30ಕ್ಕೆ ಬಸವಲಿಂಗಯ್ಯ ಹಿರೇಮಠ ಅವರ ರಂಗಪಠ್ಯ ಮತ್ತು ಸಂಗೀತದಲ್ಲಿ ವಿಶ್ವೇಶ್ವರ ಬಸವಲಿಂಗಯ್ಯ ಅವರ ರಂಗವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಸಂಗ್ಯಾ ಬಾಳ್ಯಾ’ ನಾಟಕ ಪ್ರದರ್ಶನವಾಗಲಿದೆ ಎಂದು ಅವರು ತಿಳಿಸಿದ್ದಾರೆ.
Next Story