Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ನನ್ನ ಕೈಗಂಟಿದ ನೆತ್ತರು :ಸೇನಾಧಿಕಾರಿಗಳ...

ನನ್ನ ಕೈಗಂಟಿದ ನೆತ್ತರು :ಸೇನಾಧಿಕಾರಿಗಳ ಪಾಪ ನಿವೇದನೆಗಳು

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ24 April 2017 11:17 PM IST
share
ನನ್ನ ಕೈಗಂಟಿದ ನೆತ್ತರು :ಸೇನಾಧಿಕಾರಿಗಳ ಪಾಪ ನಿವೇದನೆಗಳು

ಇದೊಂದು ಪಾಪನಿವೇದನೆಯ ಕೃತಿ. ಸೈನ್ಯದ ಹಿರಿಯ ಅಧಿಕಾರಿಯೊಬ್ಬರು ಅನಾಮಧೇಯರಾಗಿ ಪತ್ರಕರ್ತನ ಮುಂದೆ ನಿವೇದಿಸಿಕೊಂಡ ತಪ್ಪೊಪ್ಪಿಗೆಯ ದಾಖಲೆ ಈ ಪುಸ್ತಕ. ಹೆಸರು ‘ನನ್ನ ಕೈಗಂಟಿದ ನೆತ್ತರು’. ಮುಖಪುಟವೇ ಹೇಳುವಂತೆ ಆಯೋಜಿತ ಎನ್‌ಕೌಂಟರ್‌ಗಳ ಪಾಪನಿವೇದನೆಗಳು ಇವು. ಅವುಗಳನ್ನು ಜನರ ಮುಂದಿಟ್ಟಿದ್ದಾರೆ ಹಿರಿಯ ಪತ್ರಕರ್ತ ಕಿಶಾಲಯ್ ಭಟ್ಟಾಚಾರ್ಜಿ. ಆಂತರಿಕ ನಿರಾಶ್ರಿತ ಜನರ ಸುದ್ದಿ ವರದಿಗಾರಿಕೆಗಾಗಿ ರಮಾನಾಥ ಗೊಯೆಂಕಾ ಪ್ರಶಸ್ತಿಯನ್ನು ಭಟ್ಟಾಚಾರ್ಜಿ ಪಡೆದಿದ್ದಾರೆ. ಈ ಕೃತಿ, ಗೌಪ್ಯತೆಯ ಹೆಸರಲ್ಲಿ ಸೇನೆ ಮುಚ್ಚಿಟ್ಟಿರುವ ರಕ್ತ ಸಿಕ್ತ ಸತ್ಯಗಳನ್ನು ತೆರೆದಿಡುತ್ತದೆ. ಪ್ರಶಸ್ತಿಗಾಗಿ, ಭಡ್ತಿಗಾಗಿ ಸೈನಿಕರು ಮಾಡುವ ಅಮಾಯಕರ ಕೊಲೆಗಳು, ಭೂಗತ ಜಗತ್ತಿನೊಂದಿಗೆ ಸೈನ್ಯಾಧಿಕಾರಿಗಳಿಗೆ ಇರುವ ನಂಟು, ಅಫೀಮು ಮಾರಾಟ ಮತ್ತು ನಾಟ ಕಳ್ಳ ಸಾಗಣೆೆಗಳಿಂದ ಅವರು ಗಳಿಸುವ ಕೋಟ್ಯಂತರ ರೂಪಾಯಿಗಳು, ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕವು ಅವರು ವ್ಯವಸ್ಥೆಯ ದೌರ್ಬಲ್ಯಗಳನ್ನೇ ಬಳಸಿಕೊಳ್ಳುವ ರೀತಿ...ಎಲ್ಲವೂ ಈ ಕೃತಿಯೊಳಗೆ ಇದೆ.
ಸಾಧಾರಣವಾಗಿ ಪತ್ರಕರ್ತನೊಬ್ಬ ವರದಿ ಮಾಡುವಾಗ, ಅಧಿಕೃತ ಮೂಲಗಳನ್ನು ಆಧರಿಸಿರಬೇಕು. ಅನೇಕ ಸಂದರ್ಭದಲ್ಲಿ ತಾನು ಮಾಡುತ್ತಿರುವ ವರದಿಗಳೆಲ್ಲವೂ ಸುಳ್ಳು ಎನ್ನುವುದು ವರದಿಗಾರನಿಗೆ ಗೊತ್ತಿರುತ್ತದೆ ಮತ್ತು ಸತ್ಯ ಏನು ಎನ್ನುವುದು ಗೊತ್ತಿದ್ದರೂ ಅದನ್ನು ಬರೆಯಲಾಗದ ಅಸಹಾಯಕತೆಯಲ್ಲಿ ಅವನಿರುತ್ತಾನೆ. ಪ್ರತೀ ಅಧಿಕೃತ ವರದಿಯ ತಳಹದಿಯಲ್ಲಿ ಒಂದು ಅಧಿಕೃತ ವರದಿ ಜೀವ ಪಡೆದುಕೊಳ್ಳುವುದಕ್ಕೆ ಕೊಸರಾಡುತ್ತಿರುತ್ತದೆ. ಭಟ್ಟಾಚಾರ್ಯರ ಮೂಲಕ ಆ ಸತ್ಯ ಈ ಕೃತಿಯಲ್ಲಿ ಜೀವ ಪಡೆದಿದೆ.
ಮುನ್ನುಡಿ ಹೇಳುವಂತೆ, ಈ ಪುಸ್ತಕ ಸೇನೆಯ ಅಧಿಕಾರಿಗಳು ನೀಡಿದ ಒಳ ಮಾಹಿತಿಯ ಆಧಾರದಿಂದಷ್ಟೇ ರೂಪುಕೊಂಡಿರುವುದಲ್ಲ. ಸೇನೆಯಲ್ಲೂ ಕೆಲವರಿಗೆ ಇರಬಹುದಾದ ಮಾನವೀಯ ವೌಲ್ಯಗಳನ್ನು ಬಿಂಬಿಸುವ ಕೃತಿಯೂ ಆಗಿದೆ. ಆ ಮಾನವೀಯ ತಳಮಳ ಸೇನೆಯೊಳಗೆ ಇದ್ದುದರಿಂದಲೇ, ಹಲವು ಅಧಿಕಾರಿಗಳು ತಮ್ಮಳಗೆ ಉಸಿರಾಡುತ್ತಿದ್ದ ಸತ್ಯಗಳನ್ನು ಈ ಕೃತಿಯಲ್ಲಿ ಬಹಿರಂಗಪಡಿಸಿದರು. ಸೇನೆಯನ್ನು ಮುಂದಿಟ್ಟು ಪ್ರಭುತ್ವ ನಡೆಸುತ್ತಿರುವ ವರ್ತಮಾನದ ಮೇಲಾಟಗಳನ್ನು ಅರ್ಥ ಮಾಡಿಕೊಳ್ಳಲು ಈ ಕೃತಿ ನಮಗೆ ತುಂಬಾ ಸಹಾಯ ಮಾಡುತ್ತದ. ಗಿರೀಶ್ ತಾಳಿಕಟ್ಟೆ ಅವರ ಅನುವಾದ ಕೃತಿಯ ಮೂಲಧ್ವನಿಗೆ ಎಲ್ಲೂ ಧಕ್ಕೆ ತರದೆ, ಜಾಗರೂಕವಾಗಿ ನಮ್ಮಳಗೆ ಇಳಿಸುತ್ತದೆ.
ಲಂಕೇಶ್ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 150 ರೂಪಾಯಿ. ಆಸಕ್ತರು 080- 26676427 ದೂರವಾಣಿಯನ್ನು ಸಂಪರ್ಕಿಸಬಹುದು.
 

share
-ಕಾರುಣ್ಯಾ
-ಕಾರುಣ್ಯಾ
Next Story
X