Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಿಂದೂ ಯುವಕನ ಅಂತ್ಯ ಸಂಸ್ಕಾರ...

ಹಿಂದೂ ಯುವಕನ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಮರು

ವಾರ್ತಾಭಾರತಿವಾರ್ತಾಭಾರತಿ26 April 2017 5:46 PM IST
share
ಹಿಂದೂ ಯುವಕನ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಮರು

ಮಾಲ್ಡಾ,ಎ.26: ಈ ದೇಶದ ಸಮುದಾಯಗಳ ನಡುವೆ ಒಡಕು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ದೇಶದ ಅತ್ಯಂತ ಬಡ ಮತ್ತು ಕುಖ್ಯಾತ ಜಿಲ್ಲೆಗಳಲ್ಲೊಂದಾಗಿರುವ ಪಶ್ಚಿಮ ಬಂಗಾಲದ ಮಾಲ್ಡಾದಲ್ಲಿ ಹಿಂದು ಯುವಕನೋರ್ವನ ಅಂತಿಮ ಯಾತ್ರೆ ಮತ್ತು ಅಂತ್ಯ ಸಂಸ್ಕಾರವು ಸಮುದಾಯಗಳ ನಡುವಿನ ಸಹಜ ಸೌಹಾರ್ದಕ್ಕೆ ಒಂದು ಉದಾಹರಣೆ ಯಾಗಿದೆ.

ಸೋಮವಾರ ಕೊನೆಯುಸಿರೆಳೆದಿದ್ದ ಬಿಸ್ವಜಿತ್ ರಜಕ್(35)ನ ಶವವನ್ನು ಮುಸ್ಲಿಂ ಯುವಕರ ಗುಂಪೊಂದು ಚಿತಾಗಾರಕ್ಕೆ ಸಾಗಿಸಿದ್ದಲ್ಲದೆ, ಹಿಂದು ಸಂಪ್ರದಾಯಕ್ಕನುಗುಣ ವಾಗಿ ಅಂತಿಮ ಯಾತ್ರೆಯುದ್ದಕ್ಕೂ ‘ಹರಿ ಬೋಲ್’ ಎಂದು ಪಠಿಸುತ್ತಲೇ ಸಾಗಿದ್ದರು. ಮೂರು ಕಿ.ಮೀ.ದೂರದ ಚಿತಾಗಾರಕ್ಕೆ ಬಿಸ್ವಜಿತ್ ರಜಕ್ ಶವವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತು ಸಾಗಿಸಿದ್ದ ಈ ಹುಡುಗರು ಸಮೀಪದ ನದಿಯಲ್ಲಿ ಚಿತಾಭಸ್ಮ ವಿಸರ್ಜನೆ ಮತ್ತು ಶವದಹನದ ಬಳಿಕ ನದಿಯಲ್ಲಿ ಮುಳುಗು ಹಾಕಿದ್ದು ಸೇರಿದಂತೆ ಅಂತ್ಯಸಂಸ್ಕಾರದ ಎಲ್ಲ ವಿಧಿಗಳನ್ನು ಹಿಂದು ಸಂಪ್ರದಾಯದಂತೆ ಚಾಚೂ ತಪ್ಪದೇ ನೆರವೇರಿಸಿದ್ದರು.

ಬಿಸ್ವಜಿತ್ ರಜಕ್ ಕುಟುಂಬಿಕರು ತೀರ ಬಡವರಾಗಿದ್ದು, ಅಂತ್ಯಸಂಸ್ಕಾರ ಮತ್ತು ಇತರ ಸಂಬಂಧಿತ ವಿಧಿಗಳನ್ನು ನೆರವೇರಿಸಲೂ ಅವರ ಬಳಿ ಹಣವಿರಲಿಲ್ಲ.

ಕೋಲ್ಕತಾದಿಂದ ಸುಮಾರು 350 ಕಿ.ಮೀ.ದೂರದ ಮಾಲ್ಡಾ ಜಿಲ್ಲೆಯ ಮಾನಿಕ್‌ಚಾಕ್ ಬ್ಲಾಕ್‌ನ ಶೇಖಪುರಾ ಗ್ರಾಮದಲ್ಲಿ ಈ ಮನ ಕಲಕುವ ಘಟನೆ ನಡೆದಿದೆ.

 ಯಕೃತ್ತಿನ ಕ್ಯಾನ್ಸರ್‌ನಿಂದ ನರಳುತ್ತಿದ್ದ ಬಿಸ್ವಜಿತ್ ರಜಕ್ ಸೋಮವಾರ ತನ್ನ ಮನೆಯಲ್ಲಿ ಕೊನೆಯುಸಿರೆಳೆದಿದ್ದ. ಆದರೆ ಮಂಗಳವಾರ ಆತನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆಗಳನ್ನು ಮಾಡಲು ಕುಟುಂಬಿಕರಿಗೆ ಸಾಧ್ಯವಾಗದಿದ್ದಾಗ ಅಲ್ಲಿ ಬಂದು ಸೇರಿದ ಗ್ರಾಮಸ್ಥರು ಬಿಸ್ವಜಿತ್ ರಜಕ್‌ನ ಅಂತ್ಯಸಂಸ್ಕಾರ ನೆರವೇರಿಸಲು ತಮಗೆ ಅನುಮತಿ ನೀಡುವಂತೆ ಆತನ ತಂದೆ ನಾಗೇನ್ ರಜಕ್‌ರನ್ನು ಕೋರಿಕೊಂಡಿದ್ದರು.

 ಸ್ಥಳೀಯ ಮಸೀದಿಯ ಮೌಲ್ವಿಯವರು ಕೂಡ ಚಿತಾಗಾರಕ್ಕೆ ತೆರಳಿದ್ದರು. ಅಂತ್ಯಸಂಸ್ಕಾರಕ್ಕೆ ಅಗತ್ಯವಿದ್ದ ಹಣವನ್ನು ನೆರೆಕರೆಯ ಮುಸ್ಲಿಮರೇ ಒಟ್ಟುಗೂಡಿಸಿದ್ದರು. ಸುಮಾರು 6,000 ಜನಸಂಖ್ಯೆಯಿರುವ ಈ ಗ್ರಾಮದಲ್ಲಿ ಬಿಸ್ವಜಿತ್ ರಜಕ್ ಸೇರಿದಂತೆ ಎರಡೇ ಹಿಂದು ಕುಟುಂಬಗಳಿವೆ.

ಮಗನ ಶವವನ್ನು ಚಿತಾಗಾರಕ್ಕೆ ಸಾಗಿಸಲು ನನ್ನ ಬಳಿ ಹಣಬಲವೂ ಇರಲಿಲ್ಲ,ಜನಬಲವೂ ಇರಲಿಲ್ಲ. ಗ್ರಾಮಸ್ಥರು ನನ್ನ ಮಗನ ಅಂತ್ಯಸಂಸ್ಕಾರಕ್ಕೆ ಮುಂದಾಗಿರದಿದ್ದರೆ ಏನಾಗುತ್ತಿತ್ತೋ ನನಗೆ ಗೊತ್ತಿಲ್ಲ ಎಂದು ನಾಗೇನ್ ಕಣ್ಣೀರು ಸುರಿಸುತ್ತಲೇ ಹೇಳಿದರು.

ಯಾವುದೇ ಧರ್ಮವೂ ಇತರರನ್ನು ದ್ವೇಷಿಸು ಎಂದು ಬೋಧಿಸುವುದಿಲ್ಲ. ಬಿಸ್ವಜಿತ್ ನಮ್ಮ ಸೋದರನಂತಿದ್ದ. ಆತನ ಕುಟುಂಬ ಬೇರೆ ಧರ್ಮಕ್ಕೆ ಸೇರಿದ್ದೆಂದುಕೊಂಡು ನಾವು ಸುಮ್ಮನಿದ್ದರೆ ಅಲ್ಲಾಹು ನಮ್ಮನ್ನು ಕ್ಷಮಿಸುತ್ತಿರಲಿಲ್ಲ. ಎಂದು ಬಿಸ್ವಜಿತ್ ರಜಕ್ ಅಂತ್ಯಸಂಸ್ಕಾರ ವ್ಯಸ್ಥೆಯ ನೇತೃತ್ವ ವಹಿಸಿದ್ದ ಹಾಜಿ ಅಬ್ದುಲ್ ಖಾಲಿಕ್ ಹೇಳಿದರು.

ಮೌಲ್ವಿ, ಹಾಜಿ ಮತ್ತು ಮುಸ್ಲಿಂ ಸಮುದಾಯದ ನೂರಾರು ಜನರು ಬಿಸ್ವಜಿತ್ ರಜಕ್ ಅಂತ್ಯಸಂಸ್ಕಾರವನ್ನು ಏರ್ಪಾಡು ಮಾಡಿದ್ದರು.ಇದು ಈ ದೇಶದಲ್ಲಿಯ ಹಿಂದು ಮತ್ತು ಮುಸ್ಲಿಮರ ನಡುವಿನ ಆದರ್ಶಪ್ರಾಯ ಭ್ರಾತೃತ್ವವನ್ನು ತೋರಿಸುತ್ತದೆ ಎಂದು ಮಾಲ್ಡಾ ಜಿಲ್ಲಾ ಪರಿಷದ್‌ನ ಸಹ ಸಭಾಧಿಪತಿ ಗೌರಚಂದ್ರ ಮಂಡಲ್ ಹೇಳಿದರು. ಮಂಡಲ್ ಅವರೂ ಚಿತಾಗಾರಕ್ಕೆ ತರಳಿದ್ದರು.

ಸಾಮಾನ್ಯ ಜನರು ನಿಜಕ್ಕೂ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ನೆರವು ನೀಡುವುದು ಮತ್ತು ಕೆಲವು ಹಿಂದು ಹೆಸರುಗಳನ್ನು ಪಠಿಸುವುದು ನನ್ನಿಂದ ನನ್ನ ಧರ್ಮವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಗ್ರಾಮಸ್ಥ ಆಯಿಶ್ ಅಲಿ ಹೇಳಿದರು.

ಬಿಸ್ವಜಿತ್ ರಜಕ್‌ನ ಮುಸ್ಲಿಂ ನೆರೆಕರೆಯವರು ಆತನ ಚಿಕಿತ್ಸೆಗೆ ಹಣ ನೀಡಿದ್ದರಲ್ಲದೇ, ಕೋಲ್ಕತಾದ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನೂ ಮಾಡಿದ್ದರು. ಬಿಸ್ವಜಿತ್ ರಜಕ್‌ಗೆ ಪತ್ನಿ ಮತ್ತು ಮೂವರು ಮಕ್ಕಳೂ ಇದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X