ಜಗಲಿಯಿಂದ ಬಿದ್ದು ಮಗು ಮೃತ್ಯು
ಮಂಡ್ಯ, ಎ.26: ಆಟವಾಡುತ್ತಿದ್ದ ಮಗು ಜಗುಲಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕು ಯಡಗನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಮುತ್ತುರಾಜು ಎಂಬವರ ಪುತ್ರಿ ಚೈತ್ರ(3) ಮೃತಪಟ್ಟ ಮಗು. ಆಟವಾಡುವಾಗ ಜಗಲಿಯಿಂದ ಕೆಳಗೆ ಬಿದ್ದು ಗಾಯಗೊಂಡ ಮಗುವನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತು ಎಂದು ಕೆ.ಎಂ.ದೊಡ್ಡಿ ಪೊಲೀಸರು ತಿಳಿಸಿದ್ದಾರೆ.
Next Story





