Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಬಾಹುಬಲಿಯ ಬಲ್ಲಾಳದೇವ ದಗ್ಗುಬಾಟಿ...

ಬಾಹುಬಲಿಯ ಬಲ್ಲಾಳದೇವ ದಗ್ಗುಬಾಟಿ ಬಹಿರಂಗಪಡಿಸಿದ್ದಾರೆ ತನ್ನ ಅತಿ ದೊಡ್ಡ ರಹಸ್ಯವನ್ನು !

ನಂಬಲಸಾಧ್ಯ ಈ ಕಹಿಸತ್ಯ

ವಾರ್ತಾಭಾರತಿವಾರ್ತಾಭಾರತಿ30 April 2017 2:38 PM IST
share
ಬಾಹುಬಲಿಯ ಬಲ್ಲಾಳದೇವ ದಗ್ಗುಬಾಟಿ ಬಹಿರಂಗಪಡಿಸಿದ್ದಾರೆ ತನ್ನ ಅತಿ ದೊಡ್ಡ ರಹಸ್ಯವನ್ನು !

ಇತ್ತೀಚಿಗೆ ತೆಲುಗು ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಾಣಾ ದಗ್ಗುಬಾಟಿ ತನ್ನದೇ ಸ್ವಂತ ಕಥೆಯನ್ನು ಹಂಚಿಕೊಳ್ಳುವ ಜೊತೆಗೆ ಜೀವನದಲ್ಲಿ ಭರವಸೆಯನ್ನೂ ಎಂದೂ ಕಳೆದುಕೊಳ್ಳದಂತೆ ಸಭಿಕರನ್ನು ಉತ್ತೇಜಿಸಿದ್ದಾರೆ.

ದೇಶದಲ್ಲಿಂದು ಎಲ್ಲೆಲ್ಲೂ ‘ಬಾಹುಬಲಿ 2’ ಚಿತ್ರದ್ದೇ ಮಾತುಗಳು. ನಿರ್ದೇಶಕ ಎಸ್.ಎಸ್.ರಾಜವೌಳಿ ಮತ್ತು ನಾಯಕ ನಟ ಪ್ರಭಾಸ್ ಮಾತ್ರವಲ್ಲ, ಬಲ್ಲಾಳದೇವ ಪಾತ್ರದಲ್ಲಿ ತನ್ನ ಅಭಿನಯಕ್ಕಾಗಿ ದಗ್ಗುಬಾಟಿ ಕೂಡ ಸಿನಿರಸಿಕರ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಪಾತ್ರಕ್ಕೆ ಜೀವಂತಿಕೆ ತುಂಬಲು ಅವರು ದೇಹಸೌಷ್ಟವದಲ್ಲಿ ಮಾಡಿಕೊಂಡಿದ್ದ ಪರಿವರ್ತನೆ, ವಿನಿಯೋಗಿಸಿದ ಸಮಯ ಮತ್ತು ಶ್ರಮದ ಬಗ್ಗೆ ಬಹಳಷ್ಟು ಹೊಗಳಿಕೆಯ ಮಾತುಗಳು ಕೇಳಿಬರುತ್ತಿವೆ.

 ಆದರೆ ಅಪ್ರತಿಮ ಅಭಿನಯ ಪ್ರತಿಭೆಯ, ದೇಶಾದ್ಯಂತ ಕೋಟ್ಯಂತರ ಜನರ ಅಭಿಮಾನವನ್ನು ಗಳಿಸಿರುವ ಈ ನಟ ತನ್ನ ಬಲಗಣ್ಣಿನಿಂದ ನೋಡಲಾರರು ಎನ್ನುವ ಕಹಿಸತ್ಯ ಯಾರಿಗಾದರೂ ಗೊತ್ತೇ...? ಹೌದು,ಸ್ವತಃ ದಗ್ಗುಬಾಟಿ ಅವರೇ ತನ್ನ ಒಂದು ಕಣ್ಣು ಕುರುಡು ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಈ ಕಣ್ಣನ್ನು ಅವರು ತನ್ನ ಬಾಲ್ಯದಲ್ಲಿ ದಾನಿಯೋರ್ವರಿಂದ ಪಡೆದಿದ್ದರು.

 ದಗ್ಗುಬಾಟಿ ತೆಲುಗು ಚಾಟ್ ಶೋದಲ್ಲಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಜನರು ತಮ್ಮ ಜೀವನದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತಾರೆ. ರಾಣಾ ಈ ಶೋದಲ್ಲಿ ಬಹಿರಂಗಗೊಳಿಸಿದ ಸತ್ಯ ಸಭಿಕರನ್ನು ಸ್ಥಂಭೀಭೂತಗೊಳಿಸಿತ್ತು.

‘‘ನಿಮಗೆ ಒಂದು ವಿಷಯವನ್ನು ನಾನು ಹೇಳಲೇಬೇಕು. ನನ್ನ ಬಲಗಣ್ಣು ಸಂಪೂರ್ಣ ಕುರುಡಾಗಿದೆ. ಎಡಗಣ್ಣಿನಿಂದ ಮಾತ್ರ ನಾನು ನೋಡಬಲ್ಲೆ. ನೀವು ನೋಡುತ್ತಿರುವ ಈ ಕಣ್ಣು ನನ್ನದಲ್ಲ.....ಅದು ಬೇರೆಯವರದು. ಅವರು ಮೃತಪಟ್ಟ ನಂತರ ಈ ಕಣ್ಣು ನನಗೆ ದಾನವಾಗಿ ದೊರಕಿತ್ತು. ನಾನು ಎಡಗಣ್ಣನ್ನು ಮುಚ್ಚಿದರೆ ನನಗೇನೂ ಕಾಣುವುದಿಲ್ಲ ’’ ಎಂದು ದಗ್ಗುಬಾಟಿ ನುಡಿದಾಗ ಆಘಾತಕ್ಕೊಳಗಾದ ಸಭಿಕರು ಮತ್ತು ಟಿವಿಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರಿಗೆ ಈ ಕಹಿಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

 ‘‘ಅಂಧಳಾಗಿರುವುದು ನೀನು ಅಥವಾ ನಿನ್ನ ಮಕ್ಕಳು ಬದುಕನ್ನು ಅನುಭವಿಸುವುದಕ್ಕೆ ತಡೆಯಾಗುವುದಿಲ್ಲ ಮತ್ತು ನೀನು ಹೆದರಿಕೊಳ್ಳಬೇಕಿಲ್ಲ ’’ ಎಂದು ಸ್ಪರ್ಧಿಯೋರ್ವಳಿಗೆ ಹಿತವಚನ ನುಡಿದ ದಗ್ಗುಬಾಟಿ, ಒಳ್ಳೆಯದಾಗಿ ಓದು. ನಾವೆಲ್ಲ ನಿನ್ನ ಬೆಂಬಲಕ್ಕಿದ್ದೇವೆ. ಧೈರ್ಯವನ್ನು ಕಳೆದುಕೊಳ್ಳಬೇಡ. ದುಃಖಗಳೆಲ್ಲ ಒಂದು ದಿನ ಕರಗಿ ಹೋಗುತ್ತವೆ, ಆದರೆ ಅದಕ್ಕೆ ನೀನು ಸಿದ್ಧಳಾಗಿರಬೇಕು ಮತ್ತು ಸದಾ ಸಂತಸದಿಂದಿರಬೇಕು, ನಿನ್ನ ಹತ್ತಿರದವರನ್ನು ಸಂತಸದಲ್ಲಿಡಬೇಕು ಎಂದು ಹೇಳಿದರು.

ತನ್ನ ಎಂಟು ವರ್ಷಗಳ ವೃತ್ತಿಜೀವನದಲ್ಲಿ ದಗ್ಗುಬಾಟಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಬಾಹುಬಲಿ 1’ ಚಿತ್ರ 2015ರಲ್ಲಿ ಬಿಡುಗಡೆಗೊಳ್ಳುವುದರೊಂದಿಗೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಈಗ ‘ಬಾಹುಬಲಿ 2’ ಬಿಡುಗಡೆಯಾದ ಬಳಿಕ ಜನರ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X