Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ...

ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ನೌಕಾಪಡೆಯ ಮಾಜಿ ಯೋಧ ಕೊಂದಿದ್ದು ಹೇಗೆ....?

ವಾರ್ತಾಭಾರತಿವಾರ್ತಾಭಾರತಿ1 May 2017 4:06 PM IST
share
ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ನೌಕಾಪಡೆಯ ಮಾಜಿ ಯೋಧ ಕೊಂದಿದ್ದು ಹೇಗೆ....?

ಲಂಡನ್,ಮೇ 1: ಭಯೋತ್ಪಾದಕ ಸಂಘಟನೆ ಅಲ್-ಕಾಯದಾದ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಿದ್ದು ತಾನೇ ಎಂದು ಹೇಳಿಕೊಂಡಿರುವ ಅಮೆರಿಕದ ನೌಕಾಪಡೆಯ ಮಾಜಿ ಸೀಲ್ ರಾಬರ್ಟ್ ಓ’ನೀಲ್ ಆ ಘಳಿಗೆಯನ್ನು ಹೀಗೆ ಬಣ್ಣಿಸಿದ್ದಾನೆ.

2011,ಮೇ ತಿಂಗಳಲ್ಲಿ ಪಾಕಿಸ್ತಾನದ ಅಬ್ಬತಾಬಾದ್‌ನಲ್ಲಿಯ ಲಾಡೆನ್‌ನ ಅಡಗು ದಾಣದ ಮೇಲೆ ಅಮೆರಿಕದ ನೌಕಾಪಡೆಯ ಸೀಲ್‌ಗಳು ನಡೆಸಿದ್ದ ದಾಳಿಯ ವಿವರಗಳನ್ನು ಓ’ನೀಲ್ ತನ್ನ ‘ದಿ ಆಪರೇಟರ್ ’ಪುಸ್ತಕದಲ್ಲಿ ಮೊದಲ ಬಾರಿಗೆ ಬಹಿರಂಗಗೊಳಿಸಿದ್ದಾನೆ.

ತಾನು ಲಾಡೆನ್‌ನತ್ತ ಎರಡು ಗುಂಡುಗಳನ್ನು ಹಾರಿಸಿದ್ದೆ ಮತ್ತು ಆತನ ತಲೆಬುರುಡೆ ಬಿಚ್ಚಿಕೊಂಡಿತ್ತು ಎಂದು ಓ’ನೀಲ್ ಬರೆದಿದ್ದಾನೆ.

‘‘ನಾನು ಬಲಕ್ಕೆ ತಿರುಗಿ ಅಲ್ಲಿಯೇ ಇದ್ದ ಕೋಣೆಯೊಳಗೆ ಇಣುಕಿದ್ದೆ. ಕೋಣೆಯ ಪ್ರವೇಶದ ಬಳಿಯೇ ಹಾಸಿಗೆಯೊಂದರ ಬಳಿ ಲಾಡೆನ್ ನಿಂತುಕೊಂಡಿದ್ದ. ಆತ ನಾನು ನಿರೀಕ್ಷಿಸಿದ್ದಕ್ಕಿಂತ ಎತ್ತರ ಮತ್ತು ನೀಳಕಾಯ ಹೊಂದಿದ್ದ. ಗಡ್ಡ ಚಿಕ್ಕದಾಗಿತ್ತು ಮತ್ತು ತಲೆಗೂದಲು ಬಿಳಿಯಾಗಿದ್ದವು. ಆತ ತನ್ನೆದುರಿಗಿದ್ದ ಮಹಿಳೆಯೋರ್ವಳ ಭುಜಗಳ ಮೇಲೆ ತನ್ನ ಕೈಗಳನ್ನಿರಿಸಿದ್ದ. ಒಂದು ಸೆಕೆಂಡ್‌ಗೂ ಕಡಿಮೆ ಅವಧಿಯಲ್ಲಿ ಮಹಿಳೆಯ ಭುಜದ ಮೇಲಿನಿಂದ ಬಂದೂಕಿನ ಗುರಿಯನ್ನಿರಿಸಿ ಎರಡು ಬಾರಿ ಟ್ರಿಗರ್ ಎಳೆದಿದ್ದೆ. ಲಾಡೆನ್‌ನ ತಲೆ ಬಿಚ್ಚಿಕೊಂಡು ಆತ ಧೊಪ್ಪನೆ ಕೆಳಕ್ಕೆ ಬಿದ್ದಿದ್ದ. ನಾನು ಇನ್ನೊಂದು ಗುಂಡನ್ನು ಆತನ ತಲೆಯೊಳಗೆ ನುಗ್ಗಿಸಿದ್ದೆ ’’ಎಂದು ಓ’ನೀಲ್ ಪುಸ್ತಕದಲ್ಲಿ ಹೇಳಿದ್ದಾನೆ.

ಗಾಢಾಂಧಕಾರದ ನೆರವು ಪಡೆದು ಸೀಲ್ ತಂಡ ಅಡಗುದಾಣದ ಕಂಪೌಂಡ್‌ನ ಹೊರಗೆ ಇಳಿದಾಗಿನ ಉದ್ವಿಗ್ನ ಕ್ಷಣಗಳನ್ನು ಆತ ನೆನಪಿಸಿಕೊಂಡಿದ್ದಾನೆ. ಸೀಲ್ ಕಮಾಂಡೋಗಳನ್ನು ಹೊತ್ತಿದ್ದ ಹೆಲಿಕಾಪ್ಟರ್‌ಗಳಲ್ಲೊಂದು ಬಲವಂತದ ಭೂಸ್ಪರ್ಶ ಮಾಡಿತ್ತು ಮತ್ತು ಆರಂಭದಲ್ಲಿ ಕಂಪೌಂಡ್‌ನ್ನು ಭೇದಿಸುವಲ್ಲಿ ತಂಡವು ವಿಫಲ ಗೊಂಡಿತ್ತು. ತಂಡವು ಕಾಪ್ಟರ್‌ನಿಂದ ಕೆಳಕ್ಕೆ ಹಾರಿದ್ದ ಕೆಲವೇ ಕ್ಷಣಗಳಲ್ಲಿ ಎದುರಿಗಿದ್ದ ಪ್ರವೇಶ ದ್ವಾರವನ್ನು ಮುರಿದಿತ್ತು. ಅದರ ಹಿಂದೆ ಕಲ್ಲುಗಳಿಂದ ನಿರ್ಮಿಸಲಾಗಿದ್ದ ಭದ್ರವಾದ ಗೋಡೆಯಿತ್ತು. ಆರಂಭದಲ್ಲಿ ಅದನು ್ನಒಡೆಯುವಲ್ಲಿ ತಂಡವು ವಿಫಲಗೊಂಡಿತ್ತಾದರೂ ತೀವ್ರ ಪ್ರಯತ್ನದ ನಂತರ ಯಶಸ್ಸು ಸಾಧಿಸಿತ್ತು.

ಮೂರು ಅಂತಸ್ತುಗಳ ಕಟ್ಟಡವನ್ನು ಪ್ರವೇಶಿಸಿದ್ದ ಕಮಾಂಡೋಗಳು ಎದುರಾಗಿದ್ದ ಎಲ್ಲ ಮಹಿಳೆಯರನ್ನು ಮತ್ತು ಮಕ್ಳಳನ್ನು ಕಟ್ಟಿ ಹಾಕುತ್ತ ಮುಂದಕ್ಕೆ ಹೆಜ್ಜೆಗಳನ್ನಿರಿಸಿದ್ದರು. ಲಾಡೆನ್ ತನ್ನ ನಾಲ್ವರು ಪತ್ನಿಯರು ಮತ್ತು 17 ಮಕ್ಕಳೊಂದಿಗೆ ಅಲ್ಲಿ ವಾಸವಾಗಿದ್ದ ಎನ್ನುವುದು ನಂತರ ಬೆಳಕಿಗೆ ಬಂದಿತ್ತು.

ಒಂದು ಹಂತದಲ್ಲಿ ತಂಡವು ಮನೆಯೊಳಗೆ ಮುಂದುಮುಂದಕ್ಕೆ ಸಾಗುತ್ತಿದ್ದಾಗ ಲಾಡೆನ್‌ನ ಕಿರಿಯ ಪುತ್ರ, 23ರ ಹರೆಯದ ಖಾಲಿದ್ ಎದುರಾಗಿದ್ದ. ಕಮಾಂಡೋಗಳನ್ನು ಕಂಡು ಬಚ್ಚಿಟ್ಟಿಕೊಳ್ಳಲು ಓಡತೊಡಗಿದ್ದ. ಒಳಗೆ ಬಂದವರು ಅಮೆರಿಕದ ಯೋಧರು ಎನ್ನುವುದು ಆತನಿಗೆ ಗೊತ್ತಾಗಿರಲಿಲ್ಲ. ಕಮಾಂಡೋಗಳ ತಂಡದ ನಾಯಕ ಅರೆಬಿಕ್ ಭಾಷೆಯಲ್ಲಿ ‘ಖಾಲಿದ್,ಇಲ್ಲಿ ಬಾ ’ಎಂದು ಪಿಸುಗುಟ್ಟಿದ್ದ. ಖಾಲಿದ್ ಕತ್ತನ್ನು ತಿರುಗಿಸಿ ‘ಏನು ?’ಎಂದು ಕೇಳಿದ್ದ,ಅಷ್ಟೇ. ಅದು ಅವನು ಉಸುರಿದ್ದ ಕೊನೆಯ ಶಬ್ದವಾಗಿತ್ತು. ಕಮಾಂಡರ್‌ನ ಕೈಯಲ್ಲಿದ್ದ ಬಂದೂಕು ಮಾತನಾಡಿತ್ತು. ಖಾಲಿದ್‌ನ ಗಲ್ಲದಿಂದ ಒಳನುಗ್ಗಿದ್ದ ಗುಂಡು ತಲೆಯ ಹಿಂಭಾಗದಿಂದ ಹೊರಬಿದ್ದಿತ್ತು. ಆತ ಅಲ್ಲಿಯೇ ಸತ್ತು ಹೋಗಿದ್ದ ಎಂದು ಓ’ನೀಲ್ ವಿವರಿಸಿದ್ದಾನೆ.

 ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಯೋಧರ ತಳಮಳಗಳನ್ನೂ ಓ’ನೀಲ್ ಬಣ್ಣಿಸಿದ್ದಾನೆ. ಒಂದು ಹಂತದಲ್ಲಿ ಓರ್ವ ಕಮಾಂಡೋ ಮಹಿಳೆಯೋರ್ವಳ ಮೇಲೆ ಗುಂಡು ಹಾರಿಸಿದ್ದ. ‘‘ನಾನು ವ್ಯಕ್ತಿಯೋರ್ವನ ಮೇಲೆ ಗುಂಡು ಹಾರಿಸುತ್ತಿದ್ದಾಗ ಅವಳು ದಿಢೀರನೆ ಆತನ ಮಂದೆ ಹಾರಿದ್ದಳು. ಆಕೆಯನ್ನು ಕೊಂದಿದ್ದಕ್ಕೆ ನನಗೇನಾದರೂ ತೊಂದರೆಯಾಗುವುದೇ ’’ಎಂದಾತ ಓ’ನೀಲ್‌ನನ್ನು ಪ್ರಶ್ನಿಸಿದ್ದ.

‘‘ಲಾಡೆನ್‌ನನ್ನು ಕೊಂದ ಬಳಿಕ ನನ್ನ ಮನಸ್ಸು ಓಡುತ್ತಲೇ ಇರಲಿಲ್ಲ. ಕೋಣೆಯೊಳಗೆ ಬಂದ ಸಹ ಕಮಾಂಡೋ,ನೀನು ಈಗಷ್ಟೇ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದಿದ್ದೀಯಾ ಎಂದು ಹೇಳಿದಾಗಲಷ್ಟೇ ನಾನು ಇಹಲೋಕಕ್ಕೆ ಮರಳಿದ್ದೆ ’’ ಎಂದು ಓ’ನೀಲ್ ಬರೆದುಕೊಂಡಿದ್ದಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X