ಪುರಾತನ ಕೆರೆಗಳ ಅಭಿವೃದ್ಧಿಯಿಂದ ಗ್ರಾಮಗಳ ಉದ್ದಾರ: ಶಾಸಕ ಅಭಯಚಂದ್ರ ಜೈನ್
50 ಲಕ್ಷ ರೂ. ವೆಚ್ಚದಲ್ಲಿ ತುಡಾಮ್ ಕೆರೆ ಪುನರುಜ್ಜೀವನ

ಮುಲ್ಕಿ, ಮೇ 2: ಪುರಾತನ ಕೆರೆಗಳ ಅಭಿವೃದ್ಧಿಯಿಂದ ಅಂತರ್ಜಲ ಹೆಚ್ಚಿಸುವ ಮೂಲಕ ಕೃಷಿ ಕಾರ್ಯ ಹಾಗೂ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಗ್ರಾಮದಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಡೆಯುವ ತುಡಾಮ ಕೆರೆಯ ಪುನರುಜ್ಜೀವನ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿಲೊಮಿನಾ ಸಿಕ್ವೇರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ದಿವಾಕರ ಕರ್ಕೇರ, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಗ್ರಾಪಂ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಗ್ರಾಪಂ ಸದಸ್ಯ ಸಂತಾನ್ ಡಿಸೋಜ, ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ , ಇಂಜಿನಿಯರ್ ವಿಶ್ವನಾಥ , ಅಭಿಯಂತರ ಸುಜನ್ಚಂದ್ರ, ಶೇಷರಾಮ ಶೆಟ್ಟಿ , ನಾರಾಯಣ ಅಂಚನ್, ರಾಕಿ ಪಿಂಟೊ, ಸೆವ್ರಿನ್ ಲೋಬೊ, ಉಮೇಶ್ ಕೊಟ್ಯಾನ್, ಗ್ರಾ. ಪಂ ಸದಸ್ಯರಾದ ಅರುಣ್, ಸುನೀತಾ ರೊಡ್ರಿಗಸ್, ಸಂತೋಷ್ ಕುಮಾರ್, ಚಂದ್ರಶೇಖರ್, ಅರುಣ್ ಕುಮಾರ್, ಸುನಿತಾ, ಸಂಗೀತಾ ಸೆರಾವೂ, ಗುತ್ತಿಗೆದಾರ ಪುರುಷೋತ್ತಮ ಕುಲಾಲ್ ಕಲ್ಲಬಾವಿ, ಗ್ರಾ.ಪಂ. ಪಿಡಿಒ ಅರುಣ್ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.







