Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಭೂತ-ವರ್ತಮಾನಗಳ ನಡುವಿನ ತೊಯ್ದಟ- ಪಾಟಕ್

ಭೂತ-ವರ್ತಮಾನಗಳ ನಡುವಿನ ತೊಯ್ದಟ- ಪಾಟಕ್

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ3 May 2017 12:27 AM IST
share
ಭೂತ-ವರ್ತಮಾನಗಳ ನಡುವಿನ ತೊಯ್ದಟ- ಪಾಟಕ್

ಮುಂಬೈ ಕನ್ನದ ಸಾಂಸ್ಕೃತಿಕ ಲೋಕದಲ್ಲಿ ಸಾ. ದಯಾ ಅಥವಾ ದಯಾನಂದ ಸಾಲಿಯಾನ್ ತಮ್ಮದೇ ಆದ ಕಾಲುದಾರಿಯೊಂದನ್ನು ಆರಿಸಿಕೊಂಡು, ಯಾವ ಗದ್ದಲವೂ ಇಲ್ಲದೆ ಸಾಹಿತ್ಯಕ, ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಮುಂಬೈಯ ರಂಗ ಭೂಮಿಯ ಬಹುತೇಕ ಜನಪ್ರಿಯ ನಿರ್ದೇಶಕರು ಸಿದ್ಧಮಾದರಿಯನ್ನೇ ಬಳಸಿಕೊಂಡು ಹೆಸರು ಪಡೆಯುತ್ತಿರುವಾಗ, ದಯಾ ಮುಂಬೈಯ ರಾತ್ರಿ ಶಾಲೆಯ ಹುಡುಗರನ್ನು ಜೊತೆ ಸೇರಿಸಿ, ಅನುಭವಿ ಗಳನ್ನು ದುಡಿಸಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದವರು. ತಮ್ಮದೇ ಒಂದು ಯುವ ಬಳಗವನ್ನು ಕಟ್ಟಿಕೊಂಡು ರಂಗಭೂಮಿ, ಸಾಹಿತ್ಯ ಲೋಕದಲ್ಲಿ ಸದಾ ಚಟುವಟಿಕೆಯಲ್ಲಿ ಇರುವವರು. ತುಳು ಮತ್ತು ಕನ್ನಡ ಎರಡರ ನಡುವಿನ ಕೊಂಡಿಯಾಗಿರುವವರು. ಜಾತ್ರೆಯ ಮರು ದಿನ, ಮಳೆ ಹನಿ ಮುತ್ತು ಕವನ ಸಂಕಲನದ ಮೂಲಕ ಗುರುತಿಸಿಕೊಂಡಿರುವ ಸಾ. ದಯಾ ಇದೀಗ ತಮ್ಮ ಚೊಚ್ಚಲ ಕತಾ ಂಕಲನ ‘ಪಾಟಕ್’ ಹೊರತಂದಿದ್ದಾರೆ.
ಜನ್ಮಭೂಮಿ-ಕರ್ಮಭೂಮಿಗಳ ನಡು ವಿನ, ಭೂತ-ವರ್ತಮಾನಗಳ ನಡುವಿನ ತೊಯ್ದಟಗಳಲ್ಲಿ ಒಡಮೂಡಿರುವ ಇಲ್ಲಿರುವ ಎಲ್ಲ ಕತೆಗಳ ಪಾತ್ರಗಳೂ ಸಾ.ದಯಾ ಅವರು ರಚಿಸಿ ನಿರ್ದೇಶಿಸಿರುವ ಹಲವು ನಾಟಕಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಲೆ ತೂರಿಸಿಕೊಂಡವುಗಳೇ ಆಗಿವೆ. ಸುಮಾರು ಒಂಬತ್ತು ಕತೆಗಳನ್ನು ಒಳ ಗೊಂಡಿರುವ ‘ಪಾಟಕ್’ ಹೆಸರೇ ವಿಶಿಷ್ಟವಾದುದು. ಇಲ್ಲಿರುವ ಕತೆಗಳಲ್ಲಿ ಬರುವ ಮರಾಠಿ, ಹಿಂದಿ, ತುಳು ಪದಗಳು ಬರೀ ಭಾಷೆಯಾಗಿಯಷ್ಟೇ ಅಲ್ಲ ಬದುಕಾಗಿಯೂ ನಮ್ಮನ್ನು ಸುತ್ತಿಕೊಳ್ಳುತ್ತದೆ. ಈ ಮೂರೂ ಸಂಸ್ಕೃತಿಗಳು ಕತೆಗಾರನನ್ನು ಕಾಡಿರುವ ರೀತಿ, ಪ್ರತೀ ಪಾತ್ರಗಳ ನಮ್ಮನ್ನು ತಟ್ಟುತ್ತವೆ. ವರ್ತಮಾನದಲ್ಲಿ ಪಾಲಿಸುವ ಸಂಯಮದ ಮೂಲಕ ಭೂತವನ್ನು ಎದುರಿಸುತ್ತಾ ಭವಿಷ್ಯದ ನಿರೀಕ್ಷೆಯಲ್ಲಿರುವ ಸುಮಾ ‘ಪಾಟಕ್’ ಕತೆಯ ನಾಯಕಿ. ‘ನನ್ನ ರಕ್ತಕ್ಕೆ ಕೆಂಪು ಬಣ್ಣ ಕೊಡಿ’ ಕತೆಯಲ್ಲಿ ವಸುಂಧರನಾಗಿ ಬದಲಾಗುವ ವಾಸು, ತನ್ನ ಹಳೆಯ ನೆನಪುಗಳ ಜೊತೆಗೆ ನಡೆಸುವ ಸಂಘರ್ಷಗಳು, ‘ಹಾವು ಮತ್ತು ವಿಜೂ ಎಂಬ ಹುಡುಗ’ ಕತೆಯಲ್ಲಿ ಕಾಮ ಮತ್ತು ಕ್ರೌರ್ಯ ಮುಗ್ಧ ಮನಸ್ಸಿನ ಮೇಲೆ ನಡೆಸುವ ದಾಳಿಯನ್ನು ರೂಪಕಗಳ ಮೂಲಕ ಹೇಳುತ್ತದೆ. ‘ಬದುಕನರಸಿದ ಕೈಗಳು’ ಕತೆಯಲ್ಲಿ ನಗರದ ಯುವಕರ ಅರಾಜಕ ಬದುಕನ್ನು ತೆರೆದಿಡುತ್ತದೆ. ಕತೆಯ ನಾಟಕೀಯ ಸನ್ನಿವೇಶಗಳಲ್ಲಿ ನಾಟಕಗಾರರಾಗಿರುವ ಸಾ. ದಯಾ ಅವರ ಹಸ್ತಕ್ಷೇಪವನ್ನೂ ನಾವು ಗುರುತಿಸಬಹುದಾಗಿದೆ.
ಸುವರ್ಣಗಿರಿ ಪ್ರಕಾಶನ ಮಂಗಳೂರು ಈ ಕೃತಿಯನ್ನು ಹೊರತಂದಿದೆ.101 ಪುಟಗಳ ಈ ಕೃತಿಯ ಮುಖಬೆಲೆ 150 ರೂ. ಆಸಕ್ತರು 09004957989 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X