Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಗಿನ್ನೆಸ್ ದಾಖಲೆಯ ಸ್ಕೂಬಾ ಡೈವಿಂಗ್‌...

ಗಿನ್ನೆಸ್ ದಾಖಲೆಯ ಸ್ಕೂಬಾ ಡೈವಿಂಗ್‌ ತಂಡದಲ್ಲಿ ಕರಾವಳಿಯ ಅಪ್ಪ-ಮಗಳ ಜೋಡಿಯ ಮೋಡಿ

ಪುಣೆಯ ತಂಡದಲ್ಲಿ ಬ್ಯಾರಿ ಸಮುದಾಯದ ಹೆಗ್ಗಳಿಕೆ

ವಾರ್ತಾಭಾರತಿವಾರ್ತಾಭಾರತಿ3 May 2017 7:06 PM IST
share
ಗಿನ್ನೆಸ್ ದಾಖಲೆಯ ಸ್ಕೂಬಾ ಡೈವಿಂಗ್‌ ತಂಡದಲ್ಲಿ ಕರಾವಳಿಯ ಅಪ್ಪ-ಮಗಳ ಜೋಡಿಯ ಮೋಡಿ

ಮಂಗಳೂರು, ಮೇ 3: ಥಾಯ್ಲೆಂಡ್‌ನ ಕೊಹ್ ತಾವೊನಲ್ಲಿ ಸಮುದ್ರದಾಳದಲ್ಲಿ ಮಾನವ ಸರಪಳಿಯ ಮೂಲಕ ಮಹಾರಾಷ್ಟ್ರ ಪುಣೆಯ ಕ್ರಿಸಾಲಿಸ್ ಎಂಟರ್‌ಪ್ರನರ್ ಫೋರಂ (ಭಾರತ) ತಂಡವು ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿ ಭಾರತದ ಹೆಸರನ್ನು ವಿಶ್ವದಗಲಕ್ಕೆ ಪಸರಿಸಿತ್ತು. ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದ ಪುಣೆಯ ತಂಡದಲ್ಲಿದ್ದ 182 ಮಂದಿಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಬ್ಯಾರಿ ಸಮುದಾಯದ ಅಪ್ಪ ಮಗಳ ಜೋಡಿಯೂ ಸೇರಿರುವುದು ಜಿಲ್ಲೆ ಹಾಗೂ ಕರ್ನಾಟಕದ ಪಾಲಿಗೆ ಹೆಮ್ಮೆಯ ಸಂಗತಿ.

ಕಾರ್ಕಳ ನಿವಾಸಿ ಪ್ರಸ್ತುತ ಪುಣೆಯಲ್ಲಿ ವಾಸವಾಗಿರುವ ಅಬ್ದುಲ್ ಹಮೀದ್ ಹಾಗೂ ಅವರ ಪುತ್ರಿ ಆಯಿಷಾ ಹಿಬಾ (14 ವರ್ಷ) 2016ರ ಡಿಸೆಂಬರ್ 27ರಂದು ಗಿನ್ನೆಸ್ ವಿಶ್ವ ದಾಖಲೆಗೆ ಪಾತ್ರವಾದ ಸಮುದ್ರದಾಳದಲ್ಲಿ ಮಾನವ ಸರಪಳಿ ರಚಿಸಿದ ತಂಡದ ಸದಸ್ಯರು.

ಅಪ್ಪನ ದಾಖಲೆಯನ್ನು ಮುರಿಯುವಾಸೆ!: 

ಮೂಲತ: ಕಾರ್ಕಳ ನಿವಾಸಿಯಾಗಿರುವ ಅಬ್ದುಲ್ ಹಮೀದ್ ಪುಣೆಯಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡವರು. ಹವ್ಯಾಸಕ್ಕಾಗಿ ಸ್ಕೈ ಡೈವಿಂಗ್‌ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2014ರಲ್ಲಿ ಹಮೀದ್‌ರವರನ್ನು ಒಳಗೊಂಡ 34 ಜನರ ಸ್ಕೈ ಡೈವರ್‌ಗಳ ತಂಡವು ಹಿಂದಿನ 28 ಮಂದಿ ಸ್ಕೈ ಡೈವರ್‌ಗಳ ತಂಡದ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ತಂದೆಯಂತೆ ಮಗಳು ಆಯಿಷಾ ಹಿಬಾ ಕೂಡಾ ಕೂಡಾ ಸ್ಕೈ ಡೈವಿಂಗ್ ಹಾಗೂ ಸ್ಕೂಬಾ ಡೈವಿಂಗ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಓದು, ಸಾಹಿತ್ಯದ ಜತೆ ಸ್ಕೈ ಡೈವಿಂಗ್ ಸಾಹಸದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಆಯಿಷಾಗೆ ಸ್ಕೈ ಡೈವಿಂಗ್‌ನಲ್ಲಿನ ತಮ್ಮ ತಂದೆಯ ದಾಖಲೆಯನ್ನು ಮುರಿಯಬೇಕೆಂಬ ಆಸೆ ಇದೆಯಂತೆ.

‘‘ಈಜು ಎಂದರೆ ತುಂಬಾ ಇಷ್ಟ. ಸ್ಕೂಬಾ ಹಾಗೂ ಸ್ಕೈ ಡೈವಿಂಗ್‌ಗೆ ನನಗೆ ನನ್ನ ತಂದೆಯೇ ಪ್ರೇರಣೆ. ತಾಯಿಯ ಪ್ರೋತ್ಸಾಹದಿಂದಾಗಿ ನಾನೂ ತಂದೆಯ ಜತೆ ಸ್ಕೂಬಾ ಡೈವಿಂಗ್‌ನಲ್ಲಿ ಭಾಗವಹಿಸಲು ಕಾರಣವಾಯಿತು. ಈ ಭಾಗವಹಿಸುವಿಕೆ ಮುಖ್ಯವಾಗಿ ತಂಡದ ಶ್ರಮವನ್ನು ಕಲಿಸಿಕೊಟ್ಟಿದೆ’’ ಎಂದು ಹೇಳುತ್ತಾರೆ 14ರ ಹರೆಯದ ಆಯಿಷಾ.

‘‘15 ಅಡಿ ಆಳದ ಸಮುದ್ರದ ಉಪ್ಪು ನೀರಿನಲ್ಲಿ ಒಂದು ಗಂಟೆ ಕಾಲ ತಂಡದ ಎಲ್ಲರೂ ಗಿನ್ನೆಸ್ ದಾಖಲೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಮುದ್ರದ ನೀರಿನಲ್ಲಿ ಕಟ್ಟಿರುವ ಹಗ್ಗವನ್ನು ತಂಡದ ಎಲ್ಲರೂ ಏಕಪ್ರಕಾರದಲ್ಲಿ ಹಿಡಿದು ನೀರಿನೊಳಗೆ ಈಜುವ ಸ್ಥಿತಿಯಲ್ಲಿರಬೇಕಾಗುತ್ತದೆ. ಯಾರೊಬ್ಬರು ಒಂದಿನಿತು ತಪ್ಪಿದರೂ ದಾಖಲೆ ಮುರಿಯುವುದು ಕನಸಿನ ಮಾತು. ಹಾಗಾಗಿ ಇದರಲ್ಲಿ ಒಗ್ಗಟ್ಟು ಪ್ರದರ್ಶನ ಅತ್ಯಗತ್ಯ. ಅದೆಲ್ಲವನ್ನೂ ನಮ್ಮ ತಂಡ ಅಚ್ಚುಕಟ್ಟಾಗಿ ನಿರ್ವಹಿಸಿತು’’ಎನ್ನುತ್ತಾರೆ ಆಯಿಷಾ.

ಅವಿಭಜಿತ ದ.ಕ. ಜಿಲ್ಲೆಯ ಅದರಲ್ಲೂ ಬ್ಯಾರಿ ಸಮುದಾಯದ ಅಪ್ಪ ಮಗಳ ಈ ಸಾಹಸವನ್ನು ರಾಜ್ಯದ ಬ್ಯಾರಿ ಸಾಹಿತ್ಯ ಅಕಾಡಮಿ ಗುರುತಿಸಿ ಮೇ 3ರಂದು ಸನ್ಮಾನಿಸಿತ್ತು.

15 ಅಡಿ ಆಳದ ನೀರಿನಲ್ಲಿ ವಿಶ್ವದಾಖಲೆ

ಪುಣೆಯ ಉದ್ಯಮಿಗಳ ತಂಡವು ತನ್ನ ಪ್ರಥಮ ಪ್ರಯತ್ನದಲ್ಲೇ ಥಾಯ್ಲೆಂಡ್‌ನ ಕೊಹತಾವೊದ ಸಮುದ್ರದ ಸುಮಾರು 15 ಅಡಿ ಆಳದ ನೀರಿನಲ್ಲಿ ಈ ವಿಶ್ವ ದಾಖಲೆಯನ್ನು ನಿರ್ಮಿಸಿತ್ತು. ಸಾಮಾನ್ಯ ಜನರೂ ವಿಶ್ವ ದಾಖಲೆಯನ್ನು ನಿರ್ಮಿಸಬಲ್ಲರು ಎಂಬುದನ್ನು ಈ ತಂಡವು ಸಾಬೀತು ಪಡಿಸಿತ್ತು. ಈ ತಂಡದಲ್ಲಿ 9 ವರ್ಷದಿಂದ 60 ವರ್ಷ ಪ್ರಾಯದ ಪುಣೆಯ ನಿವಾಸಿಗಳು ಭಾಗವಹಿಸಿದ್ದರು.

ಅಂದ ಹಾಗೆ, ಈ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಭಾಗವಹಿಸುವ ಸಲುವಾಗಿ ಪುಣೆಯ ಕ್ರಿಸಾಲಿಸ್ ಎಂಟರ್‌ಪ್ರನರ್ ಫೋರಂನ ವತಿಯಿಂದ 204 ಮಂದಿ ಥಾಯ್ಲೆಂಡ್‌ಗೆ ಪ್ರಯಾಣಿಸಿದ್ದರು. ಆದರೆ ಹಿಂದಿನ ದಿನ ಕೊಹ್‌ತಾವೊದ ಸಮುದ್ರದ ನೀರಿನ ಅಬ್ಬರದ ಏರಿಳಿತವನ್ನು ಕಂಡ ಕೆಲವರು ನೀರಿನಲ್ಲಿ ಸುಮಾರು 1 ಗಂಟೆ ಕಾಲ ಮುಳುಗಿ ಈ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿದಿದ್ದರು. ಈ ತಂಡದವರಾರೂ ನುರಿತ, ತಜ್ಞ ಈಜುಗಾರರು ಅಲ್ಲ ಎಂಬುದು ವಿಶೇಷ. ಹಾಗಿದ್ದರೂ ತಂಡದ 182 ಮಂದಿ ಒಂದು ಗಂಟೆ ಕಾಲ ಸಮುದ್ರ ನೀರಿನಲ್ಲಿ ಮಾನವ ಸರಪಳಿ(ವಿಶ್ವ ದಾಖಲೆಯಾದ ಮಾನವ ಸರಪಳಿಯ ಅವಧಿ 6 ನಿಮಿಷ 49 ಸೆಕೆಂಡ್‌ಗಳು)ಯನ್ನು ನಿರ್ಮಿಸಿ, ಹಿಂದಿನ ಇಟಲಿಯ ಈಜುಗಾರರ ತಂಡ (173 ಮಂದಿ)ದಿಂದ ಮಾಡಲಾಗಿದ್ದ ಮಾನವ ಸರಪಳಿಯ ದಾಖಲೆಯನ್ನು ಮುರಿದರು.

ಬ್ಯಾರಿ ಸಮುದಾಯಕ್ಕೆ ಸಂದ ಗೌರವ

ಬ್ಯಾರಿ ಸಮುದಾಯದ ಅಪ್ಪ ಮಗಳ ಜೋಡಿ ಗಿನ್ನೆಸ್ ದಾಖಲೆಯ ತಂಡದಲ್ಲಿ ಭಾಗವಹಿಸಿ ದೇಶದ ಹೆಸರನ್ನು ವಿಶ್ವದಲ್ಲಿ ಅಜರಾಮರಗೊಳಿಸಿದೆ. ಇದು ರಾಜ್ಯದ ಜೊತೆಗೆ ಬ್ಯಾರಿ ಸಮುದಾಯಕ್ಕೆ ಸಂದ ಗೌರವ ಎಂದು ಅಖಿಲ ಭಾರತ ಬ್ಯಾರಿ ಪರಿಷತ್‌ನ ಗೌರವಾಧ್ಯಕ್ಷ ಸೂರಲ್ಪಾಡಿ ಅಬ್ದುಲ್ ಮಜೀದ್ ಹಾಗೂ ಕರ್ನಾಟಕ ಮುಸ್ಲಿಂ ಕೋರ್ಡಿನೇಶನ್ ಕಮಿಟಿಯ ಜತೆ ಕಾರ್ಯದರ್ಶಿ ಅಮೀರುದ್ದೀನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X