Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಮರಳಿ ಮನೆಗೆ

ಮರಳಿ ಮನೆಗೆ

ಭಾವನೆಗಳ ಬೆಸುಗೆ

ವಾರ್ತಾಭಾರತಿವಾರ್ತಾಭಾರತಿ7 May 2017 12:06 AM IST
share
ಮರಳಿ ಮನೆಗೆ

ಇದು ಸಂಬಂಧಗಳ ಕತೆ. ಜಾಗತೀಕರಣದ ಹಿನ್ನೆಲೆಯಲ್ಲಿ ಕುಟುಂಬದೊಳಗೆ ಏರ್ಪಡುವ ತಾಕಲಾಟಗಳನ್ನು ಹಿಡಿದಿಡುವ ಕತೆಯೂ ಹೌದು. ಆಕರ್ಷಣೆಯಿಂದಲೋ, ಅನಿವಾರ್ಯತೆಗೋ ಹಳ್ಳಿಗಳಿಂದ ನಗರ-ಪಟ್ಟಣಗಳಿಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ಹೆಣಗುವವರೂ ಇಲ್ಲಿ ಕಾಣಸಿಗುತ್ತಾರೆ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಹೆತ್ತವರನ್ನು ತೊರೆದು ಬಂದು ಮುಂದೆ ಅವರ ದುಃಖಕ್ಕೆ ಎರವಾಗುವ, ಸ್ವತಃ ತಾವೂ ಅನಾಥರಂತೆ ಬದುಕುವ ಮಕ್ಕಳ ಕತೆಯನ್ನು ಭಾವುಕ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಯೋಗೇಶ್ ಮಾಸ್ಟರ್.

ಮೂಲತಃ ಲೇಖಕರಾದ ಯೋಗೇಶ್ ಮಾಸ್ಟರ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನೆಮಾ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತಾವೇ ಬರೆದಿದ್ದ ಕಾದಂಬರಿಯನ್ನು ಅದೇ ಶೀರ್ಷಿಕೆಯಡಿ ಈಗ ತೆರೆಗೆ ಅಳವಡಿಸಿದ್ದಾರೆ. ಚಿತ್ರಕತೆ, ಸಂಭಾಷಣೆ ರಚನೆಯ ಹೊಣೆಗಾರಿಕೆ ಜೊತೆ ಹಾಡುಗಳನ್ನೂ ಅವರೇ ರಚಿಸಿದ್ದಾರೆ. ಸದೃಢ ಕತೆ ಮತ್ತು ಸತ್ವಯುತ ಸಂಭಾಷಣೆ ಚಿತ್ರದ ಶಕ್ತಿ. ಲೇಖಕರೇ ತಮ್ಮ ಕಾದಂಬರಿಯನ್ನು ತೆರೆಗೆ ಅಳವಡಿಸಿರುವುದರ ಲಾಭ ಇದು. ಆದರೆ ನಿರೂಪಣೆಯ ಸಂದರ್ಭದಲ್ಲಿ ಒಂದಷ್ಟು ಮಿತಿಗಳಿವೆ.

ಇದರಿಂದಾಗಿ ಚಿತ್ರದ ಓಘಕ್ಕೆ ಆಗಾಗ ಅಡ್ಡಿಯಾಗುವುದು ಹೌದು. ಸರಳ ನಿರೂಪಣೆಗೆ ಮೊರೆ ಹೋಗಿರುವ ನಿರ್ದೇಶಕರಿಗೆ ತಾವು ದಾಟಿಸಬೇಕಿರುವ ಕತೆಯಷ್ಟೇ ಮುಖ್ಯವಾಗಿದೆ. ಆದರೇನಂತೆ ಸದೃಢ ಕತೆ ಇರುವುದರಿಂದಾಗಿ ಸಿನೆಮಾದ ತಾಂತ್ರಿಕ ಮಿತಿಗಳೂ ಗೌಣವಾಗುತ್ತವೆ. ರಂಗಭೂಮಿ ನಟ, ನಿರ್ದೇಶಕರೂ ಆಗಿರುವ ಯೋಗೇಶ್ ಸಿನೆಮಾದಲ್ಲಿ ರಂಗಭೂಮಿ ತಂತ್ರಗಳನ್ನೂ ಬಳಕೆ ಮಾಡಿದ್ದಾರೆ.

ಕನ್ನಡ ಸಿನೆಮಾ ಮಟ್ಟಿಗೆ ಖಂಡಿತವಾಗಿ ಇದೊಂದು ವಿಶಿಷ್ಟ ಪ್ರಯತ್ನ. ಇನ್ನು ಚಿತ್ರದ ಕಲಾವಿದರದ್ದು ಪಾತ್ರೋಚಿತ ಅಭಿನಯ. ನಿರ್ದೇಶಕರ ಆಣತಿಯಂತೆ ಎಲ್ಲರೂ ತಮ್ಮ ಪಾತ್ರಗಳನ್ನು ಉತ್ತಮವಾಗಿ ಪೋಷಿಸಿದ್ದಾರೆ. ಶೃತಿ ಅವರಿಗೆ ಇದು ವೃತ್ತಿ ಬದುಕಿನ ಶ್ರೇಷ್ಠ ಪಾತ್ರಗಳಲ್ಲೊಂದು ಎಂದು ಹೇಳಬಹುದು. ಸಂಗೀತ ಮತ್ತು ಛಾಯಾಗ್ರಹಣ ಕತೆಯ ಭಾವಕ್ಕೆ ಪೂರಕವಾಗಿದೆ. ಅಪ್ಪಟ ಕನ್ನಡದ ಸಿನೆಮಾಗಳ ಪಟ್ಟಿಗೆ ಸೇರ್ಪಡೆಯಾಗಬಹುದಾದ ಪ್ರಯೋಗವಿದು ಎಂದು ನಿಸ್ಸಂಶಯವಾಗಿ ಹೇಳಬಹುದು.

ನಿರ್ದೇಶನ: ಯೋಗೇಶ್ ಮಾಸ್ಟರ್, ನಿರ್ಮಾಣ: ಎಸ್.ಎನ್.ಲಿಂಗೇಗೌಡ ಮತ್ತು ಸುಭಾಷ್ ಎಲ್. ಗೌಡ, ಸಂಗೀತ: ಯೋಗೇಶ್ ಮಾಸ್ಟರ್ ಮತ್ತು ಗುರುಮೂರ್ತಿ ವೈದ್ಯ, ಛಾಯಾಗ್ರಹಣ: ರಾಜ್ ಶಿವಶಂಕರ್, ತಾರಾಗಣ: ಶೃತಿ, ಸುಚೇಂದ್ರ ಪ್ರಸಾದ್, ಶಂಕರ್ ಆರ್ಯನ್, ಸಹನಾ, ಅನಿರುದ್ಧ, ಆರುಂಧತಿ ಜಟ್ಕರ್ ಮತ್ತಿತರರು.

ರೇಟಿಂಗ್ - ***  ½
 

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X