ಬಿಸಿಲಿನ ತಾಪದಿಂದ ಬಳಲಿ ಸಾವು

ಕುಂದಾಪುರ, ಮೇ 7: ಕೂಲಿ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿಯೊಬ್ಬರು ಬಿಸಿಲಿನ ತಾಪದಿಂದ ಬಳಲಿ ತೀವ್ರವಾಗಿ ಅಸ್ವಸ್ಥ ಗೊಂಡು ಮೃತಪಟ್ಟ ಘಟನೆ ತಲ್ಲೂರು ಗ್ರಾಮದ ಕೋಟೆಬಾಗಿಲಿನಿಂದ ವರದಿಯಾಗಿದೆ.
ಕೋಟೆಬಾಗಿಲಿನ ತಿಮ್ಮ (33) ಎಂಬವರೇ ಮೃತ ವ್ಯಕ್ತಿ. ತಿಮ್ಮ ಅವರು ಉಪ್ಪಿನಕುದ್ರು ಬಾಬು ಶೆಟ್ಟಿ ಎಂಬವರೊಂದಿಗೆ ಕೂಲಿ ಕೆಲಸಕ್ಕೆ ತೆರಳಿದ್ದು, ಅಪರಾಹ್ನದ ಬಿಸಿಲಿನ ತಾಪಕ್ಕೆ ಬಳಲಿ ತೀವ್ರ ಅಸ್ತಸ್ಥಗೊಂಡು ಕುಸಿದು ಬಿದ್ದರು. ಅವರನ್ನು ಸಂಜೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





