ಮೂಡುಬಿದಿರೆ, ಮೇ 7: ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡ ಘಟನೆ ತೆಂಕಮಿಜಾರು ಗ್ರಾಪಂನಲ್ಲಿ ಸಂಭವಿಸಿದೆ.
ಸಂಜೆ 6:30ಕ್ಕೆ ಆರಂಭವಾದ ಸಿಡಿಲಿನ ಆರ್ಭಟ 7 ಗಂಟೆಯವರೆಗೂ ಮುಂದುವರಿದಿದ್ದು ಈ ಸಂದರ್ಭ ಘಟನೆ ನಡೆದಿದೆ. ನಂತರ ಸುರಿದ ಮಳೆಯಿಂದಾಗಿ ತೆಂಗಿನ ಗರಿಯಲ್ಲಿ ಹತ್ತಿಕೊಂಡ ಬೆಂಕಿಯು ಆರಿಹೋಗಿದೆ.