ಎಸ್ಸೆಸ್ಸೆಫ್ ವಿದ್ಯಾರ್ಥಿ ಸಮ್ಮೇಳನ

ಮಂಗಳೂರು, ಮೇ 7: ಎಸ್ಸೆಸ್ಸೆಫ್ ಜಾಲ್ಸೂರು ಸೆಕ್ಟರ್ ವತಿಯಿಂದ ಎಸ್ಬಿಎಸ್ ವಿದ್ಯಾರ್ಥಿಗಳ ಸೆಕ್ಟರ್ ಮಟ್ಟದ ‘ಸ್ಲೇಟ್’ ಶಿಬಿರವು ಸುಣ್ಣಮೂಲೆ ಮದ್ರಸದಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷ ನಾಸಿರ್ ಹಸನಿ ಸುಣ್ಣಮೂಲೆ ಅಧ್ಯಕ್ಷತೆಯಲ್ಲಿ ಸ್ಥಳೀಯ ಖತೀಬ್ ಕರೀಂ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿವಿಷನ್ ಎಸ್ಬಿಎಸ್ ಕನ್ವೀನರ್ ಹನೀಫ್ ಸಖಾಫಿ ಬೆಳ್ಳಾರೆ ಶಿಬಿರದ ಉದ್ದೇಶವನ್ನು ವಿವರಿಸಿದರು. ಲತೀಫ್ ಸಖಾಫಿ ಮಾಡನ್ನೂರ್, ಎಸ್ಸೆಸ್ಸೆಫ್ ಬದಿಯಡ್ಕ ಡಿವಿಷನ್ ಕಾರ್ಯದರ್ಶಿ ಕರೀಂ ಜೌಹರಿ ತರಬೇತಿ ನೀಡಿದರು.
ಜಾಲ್ಸೂರು ಸೆಕ್ಟರ್ ವ್ಯಾಪ್ತಿಯ 6 ಶಾಖೆಗಳಿಂದ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಮೀದ್ ಸುಣ್ಣಮೂಲೆ, ಅಲಿಚ್ಚ ಮಂಡೆಕೋಲು, ಲತೀಫ್ ಸಖಾಫಿ ಗೂನಡ್ಕ, ಪಿ.ಎ.ಮುಹಮ್ಮದ್, ಅಬ್ದುಲ್ ರಹ್ಮಾನ್ ಸಅದಿ, ಸಿದ್ದೀಕ್ ಕಟ್ಟೆಕಾರ್ಸ್, ಮಜೀದ್ ಸುಣ್ಣಮೂಲೆ, ಖಲೀಲ್ ಝುಹ್ರಿ, ಇಬ್ರಾಹೀಂ ಅಂಜದಿ, ಜಬ್ಬಾರ್ ಸಖಾಫಿ, ಕಬೀರ್ ಜಟ್ಟಿಪಳ್ಳ, ಫೈಸಲ್ ಝುಹ್ರಿ ಉಪಸ್ಥಿತರಿದ್ದರು.
ಎಸ್ಬಿಎಸ್ ಸೆಕ್ಟರ್ ಕನ್ವೀನರ್ ನೌಫಲ್ ಸಅದಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹುಸೈನ್ ಇರುವಂಬಳ್ಳ ವಂದಿಸಿದರು. ಅಬ್ಬಾಸ್ ಎ.ಬಿ. ಕಾರ್ಯಕ್ರಮ ನಿರೂಪಿಸಿದರು.







