Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ‘‘ನಿಮ್ಮನ್ನು ದೇಶಕ್ಕೆ ಬರಲು...

‘‘ನಿಮ್ಮನ್ನು ದೇಶಕ್ಕೆ ಬರಲು ಬಿಡಬಾರದಿತ್ತು’’ : ಅಮೆರಿಕದ ಅಂಗಡಿಯಲ್ಲಿ ಮುಸ್ಲಿಮ್ ಮಹಿಳೆಗೆ ಕಿರುಕುಳ

ವಾರ್ತಾಭಾರತಿವಾರ್ತಾಭಾರತಿ8 May 2017 8:07 PM IST
share
‘‘ನಿಮ್ಮನ್ನು ದೇಶಕ್ಕೆ ಬರಲು ಬಿಡಬಾರದಿತ್ತು’’ : ಅಮೆರಿಕದ ಅಂಗಡಿಯಲ್ಲಿ ಮುಸ್ಲಿಮ್ ಮಹಿಳೆಗೆ ಕಿರುಕುಳ

ವಾಶಿಂಗ್ಟನ್, ಮೇ 8: ಅಮೆರಿಕದ ಅಂಗಡಿಯೊಂದರಲ್ಲಿ ಬಿಳಿಯ ಮಹಿಳೆಯೊಬ್ಬಳು ತನಗೆ ಕಿರುಕುಳ ನೀಡಿದ್ದಾಳೆ ಎಂದು ಮುಸ್ಲಿಮ್ ಮಹಿಳೆಯೊಬ್ಬರು ಆರೋಪಿಸಿದ್ದಾರೆ.

‘‘ಅವರು ನಿನ್ನನ್ನು ಒಳಗೆ ಬರಲು ಬಿಡಬಾರದಿತ್ತು. ಈಗ ಓವಲ್ ಕಚೇರಿಯಲ್ಲಿ ಬರಾಕ್ ಒಬಾಮ ಇಲ್ಲ’’ ಎಂಬುದಾಗಿ ಆ ಮಹಿಳೆ ಗಟ್ಟಿಯಾಗಿ ಹೇಳಿದಳು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ವರ್ಜೀನಿಯದ ಅಂಗಡಿಯೊಂದರಲ್ಲಿ ಹಣ ಪಾವತಿಸಲು ಸರತಿ ಸಾಲಿನಲ್ಲಿ ನಿಂತಿದ್ದಾಗ ಮುಸ್ಲಿಮ್ ಮಹಿಳೆಯು ತನ್ನ ಹಿಂದೆ ಇದ್ದ ಬಿಳಿಯ ಮಹಿಳೆಗೆ ಮುಂದೆ ಹೋಗಲು ಅವಕಾಶ ಮಾಡಿಕೊಟ್ಟಾಗ ಬಿಳಿಯ ಮಹಿಳೆ ಈ ರೀತಿಯಾಗಿ ನಿಂದಿಸಿದಳು ಎನ್ನಲಾಗಿದೆ.

ಸರತಿ ಸಾಲಿನಲ್ಲಿ ತನಗೆ ಮುಂದಕ್ಕೆ ಹೋಗಲು ಅವಕಾಶ ಮಾಡಿಕೊಟ್ಟ ಮುಸ್ಲಿಮ್ ಮಹಿಳೆಯತ್ತ ತಿರುಗಿದ ಬಿಳಿಯ ಮಹಿಳೆ, ‘‘ನಿನಗೆ ದೇಶದ ಒಳಗೆ ಬರಲು ಅವರು ಬಿಡಬಾರದಿತ್ತು’’ ಎಂದು ಹೇಳುವುದು ವೀಡಿಯೊವೊಂದರಲ್ಲಿ ಕೇಳುತ್ತದೆ. ವೀಡಿಯೊ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ವೀಡಿಯೊ ಆರಂಭವಾಗುವಾಗ ಇಬ್ಬರ ನಡುವೆ ಘರ್ಷಣೆ ಆರಂಭವಾಗಿರುತ್ತದೆ.

‘‘ನಾನು ನಿನಗೆ ಮುಂದಕ್ಕೆ ಹೋಗಲು ಬಿಡಬಾರದಿತ್ತು’’ ಎಂದು ಮುಸ್ಲಿಮ್ ಮಹಿಳೆ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ, ‘‘ಅವರು ನಿನ್ನನ್ನು ದೇಶದ ಒಳಗೆ ಬಿಡಬಾರದಿತ್ತು’’ ಎಂದು ಅದಕ್ಕೆ ಪ್ರತಿಯಾಗಿ ಬಿಳಿಯ ಮಹಿಳೆ ಹೇಳುತ್ತಾಳೆ.

‘‘ಇಲ್ಲಿ ಕೇಳಿ! ನಾನು ಇಲ್ಲೇ ಹುಟ್ಟಿದ್ದು’’ ಎಂದು ಮುಸ್ಲಿಮ್ ಮಹಿಳೆ ಉತ್ತರಿಸುತ್ತಾರೆ. ‘‘ಓಹ್.. ಹೌದಾ?... ಈಗ ಒಬಾಮ ಅಧಿಕಾರದಲ್ಲಿಲ್ಲ. ಅಲ್ಲಿ ಈಗ ಯಾರೂ ಮುಸ್ಲಿಮ್ ಇಲ್ಲ’’ ಎಂದು ಬಿಳಿಯ ಮಹಿಳೆ ಪ್ರತಿಕ್ರಿಯಿಸುತ್ತಾಳೆ.

‘‘ಹೌದು, ಆದರೆ ಅವರು ಈಗಲೂ ಅಧ್ಯಕ್ಷರಾಗಿರಬೇಕಿತ್ತು’’ ಎಂದು ಮುಸ್ಲಿಮ್ ಮಹಿಳೆ ಹೇಳುವುದು ಕೇಳಿಸುತ್ತದೆ. ‘‘ಅವರು ಹೋಗಿಯಾಯಿತು, ಅವರು ಹೋಗಿಯಾಯಿತು’’ ಎಂದು ಬಿಳಿಯ ಮಹಿಳೆ ನಗುತ್ತಾ ಹೇಳುತ್ತಾಳೆ. ‘‘ಮುಂದೆ ಅವರು ಜೈಲಿಗೂ ಹೋಗಬಹುದು’’ ಎಂದು ಹೇಳುತ್ತಾ ಕ್ಯಾಮರದತ್ತ ದಿಟ್ಟಿಸುತ್ತಾಳೆ.

ಆಗ ಘಟನೆಯನ್ನು ಚಿತ್ರಿಸುತ್ತಿದ್ದ ಮೂರನೆ ಮಹಿಳೆ ಬಿಳಿಯ ಮಹಿಳೆಗೆ, ‘‘ನೀವು ಸ್ವಲ್ಪ ಹುಚ್ಚರಂತೆ ಕಾಣಿಸುತ್ತಿದ್ದೀರಿ. ಬಹುಷಃ ನಿಮಗೆ ನೆರವಿನ ಅವಶ್ಯಕತೆ ಇದೆ’’ ಎಂದು ಹೇಳುವುದು ವೀಡಿಯೊದಲ್ಲಿ ಕೇಳಿಸುತ್ತದೆ.

‘‘ನಾನು ಸರಿಯಾಗೇ ಇದ್ದೇನೆ’’ ಎಂದು ಬಿಳಿಯ ಮಹಿಳೆ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ‘‘ಕಿರಾಣಿ ಅಂಗಡಿಯೊಂದರ ಸಾಲಿನಲ್ಲಿ ಅಪರಿಚಿತರೊಂದಿಗೆ ದ್ವೇಷಪೂರಿತ ಸಂಭಾಷಣೆ ನಡೆಸುವುದು ಸರಿಯಲ್ಲ’’ ಎಂದು ಚಿತ್ರೀಕರಿಸುತ್ತಿದ್ದ ಮಹಿಳೆ ಬುದ್ಧಿಮಾತು ಹೇಳುವುದು ದಾಖಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X