Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ವರ್ತಮಾನದ ಸುಡುವ ಕೆಂಡಗಳು!

ವರ್ತಮಾನದ ಸುಡುವ ಕೆಂಡಗಳು!

​ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ9 May 2017 11:48 PM IST
share
ವರ್ತಮಾನದ ಸುಡುವ ಕೆಂಡಗಳು!

ಸನತ್ ಕುಮಾರ್ ಬೆಳಗಲಿ ಅಂಕಣಗಳೆಂದರೆ ಸುಡುವ ಕೆಂಡಗಳು. ಈ ದೇಶದ ಜಾತೀಯ ಮನಸ್ಸುಗಳ ವಿರುದ್ಧ ಸದಾ ಕೆಂಡಕಾರುತ್ತಾ, ಕೋಮುವಾದಿ ರಾಜಕಾರಣವನ್ನು ಎದುರಿಸುತ್ತಾ, ವರ್ಗ ಸಮಾನತೆಗೆ ಹಂಬಲಿಸುತ್ತಾ ಬರೆಯುತ್ತಾ ಬಂದವರು ಸನತ್‌ಕುಮಾರ್ ಬೆಳಗಲಿ. ಹಿರಿಯ ಪತ್ರಕರ್ತರೂ ಆಗಿರುವ, ವಾರ್ತಾಭಾರತಿ ಅಂಕಣಕಾರ ಬೆಳಗಲಿ ಅವರ ‘ಬ್ರಾಹ್ಮಣವಾದಿ ಭಾರತ ದಲಿತ ಭಾರತ’ ಹೆಸರೇ ಒಳಗಿನ ವಸ್ತುವೇನು ಎನ್ನುವುದನ್ನು ತೆರೆದಿಡುತ್ತದೆ. ‘ಸುಡುವ ಕೆಂಡದೊಳಗಿನ ಜೀವ ಸಂತಾನ’ ಎಂದು ಅಡಿ ಬರಹವನ್ನೂ ತನ್ನ ಕೃತಿಗೆ ಅವರು ನೀಡಿದ್ದಾರೆ. ಅವರು ವಿವಿಧ ಪತ್ರಿಕೆಗಳಿಗೆ ಬರೆದಿರುವ ಅಂಕಣಗಳ ಸಂಗ್ರಹ ಇದು. ಇಲ್ಲಿರುವ ಹೆಚ್ಚಿನ ಬರಹಗಳು ಪರಸ್ಪರ ಬೆಸೆದುಕೊಂಡಂತಿವೆ ಅಥವಾ ಒಂದರ ಮುಂದುವರಿದ ಭಾಗ ಎನ್ನುವಂತಿವೆ. ಕಾಲ ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆಯ ಭಾಗವಾಗಿ ಚಿಮ್ಮಿರುವ ಅಂಕಣಗಳು ಇವು ಆಗಿರುವುದರಿಂದ, ವಸ್ತುಗಳು ಕೆಲವೊಮ್ಮೆ ಪುನರಪಿಯಾಗಿವೆ. ಕೃತಿಯಲ್ಲಿ ಒಟ್ಟು 56 ಲೇಖನಗಳಿವೆ. ಮಾಧ್ಯಮಗಳು, ಜಾತೀಯತೆ, ಸಾಹಿತ್ಯ ರಾಜಕೀಯ, ಅಂಬೇಡ್ಕರ್, ಮೀಸಲಾತಿ, ಪಂಕ್ತಿಭೇದ, ಸಾಮ್ರಾಜ್ಯಶಾಹಿ ವಿರುದ್ಧದ ಹೋರಾಟ, ಟಿಪ್ಪು, ಬಿ.ವಿ. ಕಕ್ಕಿಲಾಯರ ನೆನಪು, ಕ್ಯಾಪ್ಟನ್ ಲಕ್ಷ್ಮೀ, ಕಬೀರ ಕಲಾಮಂಚ, ಬ್ರಾಹ್ಮಣ್ಯದ ಹಿಂದುತ್ವದ ಮುಖವಾಡ, ಹಿಂದುತ್ವ ಮತ್ತು ಲಿಂಗಾಯತ ಮುಖಾಮುಖಿ, ಪೇಜಾವರರಿಗೇ ಮಾನವ ದೀಕ್ಷೆ, ಗಾಂಧಿಯನ್ನು ಕೊಂದ ದಿನ, ದ್ರಾವಿಡ ಚಳವಳಿಯ ದುರಂತ, ಜೆಎನ್‌ಯು ನಾಶಕ್ಕೆ ಹುನ್ನಾರ....ಹೀಗೆ ವರ್ತಮಾನದ ಜ್ವಲಂತ ವಿಷಯಗಳನ್ನು ಅವರು ತಮ್ಮ ಲೇಖನಗಳಿಗೆ ಆರಿಸಿಕೊಂಡಿದ್ದಾರೆ. ಹೊರಗೆ ಬೆಂಕಿಯಂತೆ ಜ್ವಲಿಸುವ ಲೇಖನಗಳು ಇವುಗಳಾದರೂ ಒಳಗೆ ಅಪ್ಪಟ ಮಾನವೀಯ ಅಂತಃಕರಣದಿಂದ ದ್ರವಿಸುತ್ತವೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಪುಟಗಳು 262. ಮುಖಬೆಲೆ 160 ರೂಪಾಯಿ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

share
ಕಾರುಣ್ಯಾ
ಕಾರುಣ್ಯಾ
Next Story
X