ಉಡಾನ್: ಮೂರು ತಿಂಗಳಿಗೊಮ್ಮೆ ದರ ಪರಿಷ್ಕರಣೆ

ಹೊಸದಿಲ್ಲಿ, ಮೇ 11: ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ‘ಉಡಾನ್’ನಡಿ ಕಾರ್ಯ ನಿರ್ವಹಿಸುವ ವಿಮಾನಯಾನ ಸಂಸ್ಥೆಗಳು
ಕಾರ್ಯ ನಿರ್ವಹಿಸದ ವಿಮಾನ ನಿಲ್ದಾಣಗಳನ್ನು ಮತ್ತು ಹೆಚ್ಚು ವಿಮಾನಯಾನ ಸೌಲಭ್ಯ ಇಲ್ಲದ ವಿಮಾನ ನಿಲ್ದಾಣಗಳನ್ನು ಕಡಿಮೆ ದರದಲ್ಲಿ ಸಂಪರ್ಕಿಸುವ ಕೇಂದ್ರ ಸರಕಾರದ ಯೋಜನೆಯಾದ ಉಡಾನ್(ಉಡೇ ದೇಶ್ ಕ ಆಮ್ ನಾಗರಿಕ್)ನಡಿ, ಕಳೆದ ತಿಂಗಳು ಪ್ರಪ್ರಥಮ ವಿಮಾನಯಾನವನ್ನು ಶಿಮ್ಲಾದಿಂದ ದಿಲ್ಲಿಗೆ ಕೈಗೊಳ್ಳಲಾಗಿತ್ತು.ಸಾಮಾನ್ಯ ನಾಗರಿಕನೂ ವಿಮಾನಯಾನ ಮಾಡುವ ಅವಕಾಶ ಪಡೆಯಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ನೋಂದಾಯಿಸಲ್ಪಟ್ಟಿರುವ ವಿಮಾನಯಾನ ಸಂಸ್ಥೆಗಳು ತಮ್ಮ ಸಾಮರ್ಥ್ಯದ ಶೇ.50ರಷ್ಟು ಸೀಟುಗಳನ್ನು ರಿಯಾಯ್ತಿ ದರದಲ್ಲಿ ಪ್ರಯಾಣಿಸುವವರಿಗೆ ಮೀಸಲಿಡಬೇಕಿದೆ. ಪ್ರತೀ ಗಂಟೆಗೆ 2,500 ರೂ. ಟಿಕೇಟು ದರವಾಗಿರುತ್ತದೆ.
ಉಡಾನ್ ಯೋಜನೆಯಡಿ ಕಾರ್ಯ ನಿರ್ವಹಿಸುವ ವಿಮಾನಯಾನ ಸಂಸ್ಥೆಗಳಿಗೆ ವಾಸ್ತವಿಕ ವಿಮಾನಯಾನ ದರ ವ್ಯವಸ್ಥೆ ಮತ್ತು ಸುಗಮ ನಿಧಿ ಪೂರೈಸುವ ಅವಕಾಶ (ವಿಜಿಎಫ್) ನೀಡಲಾಗಿದೆ. ಇಲ್ಲಿ ವಿಮಾನಯಾನ ದರವನ್ನು ಹಣದುಬ್ಬರದ ಆಧಾರದಲ್ಲಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವುದು. ವಿಜಿಎಫ್ ಅನ್ನು ಹಣದುಬ್ಬರದ ಸ್ಥಿತಿ, ವಿಮಾನದ ಇಂಧನ ವೆಚ್ಚ ಮತ್ತು ರೂಪಾಯಿ-ಡಾಲರ್ ವಿನಿಮಯ ದರದ ಆಧಾರದಲ್ಲಿ ಪರಿಷ್ಕರಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.