Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನನ್ನನ್ನು ಮಾಮ ಎಂದು ಕರೆಯುತ್ತಿದ್ದವನು...

ನನ್ನನ್ನು ಮಾಮ ಎಂದು ಕರೆಯುತ್ತಿದ್ದವನು ನನ್ನ ಮಗನನ್ನು ಏಕೆ ಕೊಂದು ಬಿಟ್ಟ ?

ಹಿಂದೂ ರಾಷ್ಟ್ರೀಯ ಸೇನಾ ಮುಖಂಡನಿಂದ ಯುವಕನ ಬರ್ಬರ ಕೊಲೆ

ವಾರ್ತಾಭಾರತಿವಾರ್ತಾಭಾರತಿ12 May 2017 12:50 PM IST
share
ನನ್ನನ್ನು ಮಾಮ ಎಂದು ಕರೆಯುತ್ತಿದ್ದವನು ನನ್ನ ಮಗನನ್ನು ಏಕೆ ಕೊಂದು ಬಿಟ್ಟ  ?

ಭೋಪಾಲ್,ಮೇ 12 : ‘‘ಆತ ನನ್ನನ್ನು ಮಾಮ ಎಂದು ಕರೆಯುತ್ತಿದ್ದ. ಆ ದಿನ ಆತನಿಗೇನಾಯಿತೋ ಗೊತ್ತಿಲ್ಲ. ಆತನೇಕೆ ನನ್ನ ಮಗನನ್ನು ಅಷ್ಟೊಂದು ಬರ್ಬರವಾಗಿ ಕೊಂದು ಬಿಟ್ಟ ? ನನ್ನ ಮಗ ಯಾವತ್ತೂ ಆತನೊಡನೆ ಜಗಳವಾಡಿಲ್ಲ, ನಮ್ಮ ಕುಟುಂಬಗಳು ಕೂಡ,’’ ಎನ್ನುತ್ತಾರೆ ತನ್ನ ಮಗ ಅಬ್ದುಲ್ ಸಲ್ಮಾನ್(26)ನನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಅಬ್ದುಲ್ ಸಯೀದ್. ತಮ್ಮ ಮಗನನ್ನು ತಮ್ಮ ನೆರೆಮನೆಯ ನಿವಾಸಿ ಹಾಗೂ ಹಿಂದೂ ರಾಷ್ಟ್ರೀಯ ಸೇನೆಯ ಜಿಲ್ಲಾಧ್ಯಕ್ಷ ತಾನೆಂದು ಹೇಳಿಕೊಳ್ಳುತ್ತಿರುವ ಶಿವ ಪಾಟೀಲ್ ಕೊಂದಿದ್ದಾನೆಂಬುದರಲ್ಲಿ ಅವರಿಗೆ ಲವಲೇಶದ ಸಂಶಯವಿಲ್ಲ. ಸಲ್ಮಾನ್ ನ ಕುತ್ತಿಗೆ ಹಿಡಿದಿದ್ದ ವ್ಯಕ್ತಿಯೊಬ್ಬ ಇನ್ನೋವಾ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದುದನ್ನು ರವಿವಾರ ರಾತ್ರಿ ಒಂದು ಗಂಟೆ ಸುಮಾರಿಗೆ ಅವರು ನೋಡಿದ್ದಾರೆ. ಸುಮಾರು 20 ಮೀಟರ್ ದೂರ ಹೋಗುವಷ್ಟರಲ್ಲಿ ಸಲ್ಮಾನ್ ನೆಲಕ್ಕೆ ಬಿದ್ದು ಬಿಟ್ಟಿದ್ದ ಹಾಗೂ ಆತನ ತಲೆ ಟ್ಯಾಂಕರ್ ಒಂದಕ್ಕೆ ಬಡಿದಿತ್ತು. ಆಗ ಇನ್ನೋವಾ ಚಲಾಯಿಸುತ್ತಿದ್ದ ವ್ಯಕ್ತಿ ತನ್ನ ವಾಹನವನ್ನು ರಿವರ್ಸ್ ತೆಗೆದುಕೊಂಡು ಹೋಗಿ ಸಲ್ಮಾನ್ ಮೇಲೆ ಹಾಯಿಸಿ ಆತನನ್ನು ಕೊಂದಿದ್ದಾನೆಂದು ಸಯೀದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಕುಟುಂಬ ಹಾಗೂ ತಮ್ಮ ಪಕ್ಕದ ಗುಡಿಸಲಿನಲ್ಲಿ ವಾಸವಾಗಿದ್ದ ಶಿವ ಅತನ ತಾಯಿ ಸುನೀತ ಹಾಗೂ ಸಹೋದರಿ ಆರತಿಯೊಂದಿಗೆ ತಮ್ಮ ಕುಟುಂಬ ಹಬೀಬ್ ಗಂಜ್ ಜೈನ ದೇವಳದ ಸಮೀಪದ ಶಾಂತಿನಗರ ಕೊಳಚೆಗೇರಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ವಾಸವಾಗಿತ್ತು ಎಂದು ಅವರು ಹೇಳುತ್ತಾರೆ.

ಆರೋಪಿ ಶಿವ ಈಗ ಜೈಲಿನಲ್ಲಿದ್ದಾನೆ. 21 ವರ್ಷದ ಆತನ ಮೇಲೆ ಕನಿಷ್ಠ ಅರ್ಧ ಡಜನ್ ಹಲ್ಲೆ ಹಾಗೂ ಬಲವಂತದ ವಸೂಲಿ ಪ್ರಕರಣಗಳಿವೆ.

ಸಲ್ಮಾನ್ ನನ್ನು ಎಳೆದುಕೊಂಡು ಹೋದ ಇನ್ನೋವಾ ವಾಹನದಲ್ಲಿ ಆತನ ಹೊರತಾಗಿ ಆತನ ಸಹೊದರ ಭರತ್, ಮೈದುನ ರಾಕಿ ಹಾಗೂ ಗೆಳೆಯ ಚೋಟು ಇದ್ದರೆನ್ನಲಾಗಿದ್ದು ವಾಹನವು ಆತನ ತಾಯಿ ಸುನೀತಾಳ ಹೆಸರಿನಲ್ಲಿ ನೋಂದಣಿಯಾಗಿತ್ತು. ಆರೋಪಿ ರಾಕಿಯನ್ನು ಕೂಡ ಬಂಧಿಸಲಾಗಿದೆ.

ಸಲ್ಮಾನ್ ತನ್ನ ವಾಹನದಲ್ಲಿ ತನ್ನ ಸಹೋದರಿಯ ಬಗ್ಗೆ ಆಕ್ಷೇಪಾರ್ಹವಾಗಿ ಏನನ್ನೋ ಬರೆದಿದ್ದನೆಂಬ ಕಾರಣಕ್ಕೆ ತಾನು ಆತನ ಮೇಲೆ ಹಲ್ಲೆ ನಡೆಸಿದ್ದಾಗಿ ವಿಚಾರಣೆಯ ವೇಳೆ ಶಿವ ತಿಳಿಸಿದ್ದನೆನ್ನಲಾಗಿದೆ. ಆದರೆ ಶಾಲೆಗೆ ಹೋಗಿದ್ದರೂ ತನ್ನ ಹೆಸರನ್ನು ಸರಿಯಾಗಿ ಬರೆಯಲು ತಿಳಿಯದ ಸಲ್ಮಾನ್ ಹೀಗೆಲ್ಲಾ ಬರೆದಿರಲಿಕ್ಕಿಲ್ಲ ಎಂದು ಆತನ ತಂದೆ ಹೇಳುತ್ತಾರೆ.

ಸಲ್ಮಾನ್ ಸಹೋದರ ಸೋಹೆಬ್ ಪ್ರಕಾರ ಆರೋಪಿಗಳು ಮೊದಲು ಆತನನ್ನು ದೂರಿ ಆತನ ತಲೆಗೆ ಕತ್ತಿಯಿಂದ ಹೊಡೆದಿದ್ದರು. ನಂತರ ಆತ ಶಾಲೆಗೆ ಯಾವತ್ತೂ ಹೋಗಿಲ್ಲ ಎಂದು ತಿಳಿದ ಮೇಲೆ ಸಲ್ಮಾನ್ ಮೇಲೆ ಆರೋಪ ಹೊರಿಸಿದ್ದರೆನ್ನಲಾಗಿದೆ.

ಸಲ್ಮಾನ್ ಮತ್ತಾತನ ತಂದೆ ಎರಡು ಸರಕು ಸಾಗಾಟ ವಾಹನಗಳನ್ನು ಓಡಿಸುತ್ತಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X