Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನನಗೆ ಕಾಣಿಸುತ್ತಿಲ್ಲ ಎಂದಾಗ ಈ...

ನನಗೆ ಕಾಣಿಸುತ್ತಿಲ್ಲ ಎಂದಾಗ ಈ ವಯಸ್ಸಲ್ಲಿ ಏನನ್ನೂ ನೋಡಬೇಕಿಲ್ಲ ಎಂದರು ಮಕ್ಕಳು : ಮೆಹರುನ್ನಿಸಾ

ನನ್ನ ಕತೆ

ಜಿಎಂಬಿ ಆಕಾಶ್ಜಿಎಂಬಿ ಆಕಾಶ್13 May 2017 2:45 PM IST
share
ನನಗೆ ಕಾಣಿಸುತ್ತಿಲ್ಲ ಎಂದಾಗ ಈ ವಯಸ್ಸಲ್ಲಿ ಏನನ್ನೂ ನೋಡಬೇಕಿಲ್ಲ ಎಂದರು ಮಕ್ಕಳು  : ಮೆಹರುನ್ನಿಸಾ

ನಿನಗೇಕೆ ಅಷ್ಟೊಂದು ನೋವಿದೆ, ಸದಾಕಾಲವೂ ಏಕೆ ನರಳುತ್ತಿರುತ್ತೀಯಾ ಎಂದು ಅವರು ನನ್ನನ್ನು ಕೇಳಿದರು. ನನ್ನ ಮಂಡಿನೋವು, ಚರ್ಮದಲ್ಲಿ ತುರಿಕೆ ಆಥವಾ ಈ ಘಳಿಗೆಯಲ್ಲಿ ನನ್ನ ಹೃದಯದಲ್ಲಿ ಕಾಣಿಸಿಕೊಂಡಿರುವ ತೀವ್ರ ನೋವು...ಇವುಗಳ ಬಗ್ಗೆಯೂ ಹೇಳಿಕೊಳ್ಳಲು ನನಗೆ ಇರಿಸುಮುರಿಸಾಗುತ್ತಿದೆ, ಅವಮಾನದಿಂದ ಕುಗ್ಗಿ ಹೋಗುತ್ತಿದ್ದೇನೆ. ಈಗಲೂ ನನ್ನ ಮಕ್ಕಳು ನನಗೇನೂ ಹೇಳಬೇಕಿಲ್ಲ, ನನ್ನ ದೃಷ್ಟಿ ಮಂಜಾಗಿದ್ದರೂ ಅವರ ಮುಖಗಳನ್ನು ನೋಡಿಯೇ ನಾನು ಎಲ್ಲವನ್ನೂ ಹೇಳಬಲ್ಲೆ.

ಇತ್ತೀಚಿಗೆ ನನಗೆ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ ಎಂದು ನಾನು ನನ್ನ ಮಕ್ಕಳಿಗೆ ಹೇಳಿದಾಗ, ಈ ಮುದಿ ವಯಸ್ಸಿನಲ್ಲಿ ಏನನ್ನಾದರೂ ನೋಡುವ ಅಗತ್ಯವಿಲ್ಲ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದರು. ಆದರೆ ನಾನು ನಿಜಕ್ಕೂ ನನ್ನ ಸುತ್ತಲಿನ ಜಗತ್ತನ್ನು, ವಿಶೇಷವಾಗಿ ನನ್ನ ಮಕ್ಕಳ ಮುಖಗಳನ್ನು ನೋಡಲು ಬಯಸುತ್ತೇನೆ.

ನನ್ನ ಹಿರಿಯ ಮಗನಿಗೆ ಆರು ತಿಂಗಳುಗಳಾಗಿದ್ದಾಗ ಅವನೇಕೆ ಸದಾ ನನ್ನ ಮುಖವನ್ನೇ ನೋಡುತ್ತಾನೆ....ನನ್ನನ್ನೇಕೆ ಅಷ್ಟೊಂದು ಪ್ರೀತಿಸುತ್ತಾನೆ ಎಂದು ಅಚ್ಚರಿಪಟ್ಟಿದ್ದೆ. ಆದರೆ ಈಗ ಯಾರಿಗೂ ಸಮಯವೇ ಇಲ್ಲ. ಕೊನೆಯ ಬಾರಿ ಯಾವಾಗ ನನ್ನ ಮಕ್ಕಳು ನನ್ನ ಮುಖವನ್ನು ನೋಡಿದ್ದರು ಅಥವಾ ನನ್ನ ಪಕ್ಕದಲ್ಲಿ ಕುಳಿತು ನನ್ನ ಮಾತುಗಳನ್ನು ಕೇಳಿದ್ದರು ಎನ್ನುವುದನ್ನು ನನಗೆ ನೆನಪಿಲ್ಲ.

ಅವರೊಂದಿಗೆ ಮಾತನಾಡಲು ನಾನು ಇಷ್ಟ ಪಡುತ್ತೇನೆ, ಆದರೆ ನಾನು ಮಾತನಾಡುವ ಮುನ್ನವೇ ಅವರು ಅದನ್ನು ನಿಲ್ಲಿಸಿಬಿಡುತ್ತಾರೆ. ಪ್ರತಿಯೊ ಬ್ಬರೂ ತಮ್ಮ ಕೆಲಸಗಳಲ್ಲಿ ವ್ಯಸ್ತರಾಗಿದ್ದಾರೆ, ಅವರಿಗೆ ತಮ್ಮದೇ ಆದ ಬದುಕಿದೆ.... ನನ್ನೊಬ್ಬಳನ್ನು ಹೊರತುಪಡಿಸಿ.

ಕಳೆದೊಂದು ವರ್ಷದಿಂದ ಚಹಾ ಸೇವನೆಯನ್ನು ನಾನು ನಿಲ್ಲಿಸಿದ್ದೇನೆ. ಹಾಲು,ಚಹಾ ಆರೋಗ್ಯಕ್ಕೆ ಕೆಟ್ಟದ್ದು ಮತ್ತು ಅವು ತುಂಬ ದುಬಾರಿ ಕೂಡ ಎಂದು ನನ್ನ ಕಿರಿಯ ಮಗಳು ಹೇಳಿದ್ದಳು. ಅವರ ಹಾಲು ಮತ್ತು ಸಕ್ಕರೆ ವ್ಯರ್ಥವಾಗುವುದು ನನಗೆ ಬೇಕಿರಲಿಲ್ಲ, ಹೀಗಾಗಿ ಚಹಾ ಸೇವನೆಯ ನನ್ನ 50 ವರ್ಷಗಳ ಅಭ್ಯಾಸವನ್ನು ಬದಲಿಸಿಕೊಂಡಿದ್ದೇನೆ.

ಕೆಲವೊಮ್ಮೆ ನನ್ನ ಮರಿಮೊಮ್ಮಗ ಬಿಸ್ಕಿಟ್ ಖರೀದಿಸಲು ದುಡ್ಡು ಕೊಡು ಎಂದು ನನ್ನನ್ನು ಕೇಳುತ್ತಾನೆ. ನನ್ನ ಬಳಿ ಹಣವೇ ಇಲ್ಲ ಎಂದು ಆತನಿಗೆ ಹೇಳುವಾಗ ನನಗೆ ತುಂಬ ನಾಚಿಕೆಯಾಗುತ್ತದೆ. ಪುಣ್ಯ, ನಾನು ಹೆಚ್ಚು ವಿವರಿಸದೆ ಅವನಿಗೆ ಎಲ್ಲವೂ ಅರ್ಥವಾಗುತ್ತದೆ. ಹೌದು,ಅಜ್ಜಿ... ನಿನ್ನ ಬಳಿ ಏನೂ ಇಲ್ಲ ಎನ್ನುತ್ತಾನೆ ಆತ. ಆತ ಹೇಳುವುದು ಸರಿ. ನನ್ನ ಬಳಿ ಏನೂ ಇಲ್ಲ ಮತ್ತು ಬಹುಶಃ ನನ್ನವರೂ ಯಾರೂ ಇಲ್ಲ.

 ನನ್ನ ಮಕ್ಕಳು ನನ್ನನ್ನು ತುಂಬ ಪ್ರೀತಿಸುತ್ತಾರೆ, ಅವರು ತಮ್ಮ ಬದುಕಿನಲ್ಲಿ ನನ್ನನ್ನು ತುಂಬ ಇಷ್ಪಡುತ್ತಾರೆ ಎಂದು ನನಗೆ ನಾನು ಸಮಾಧಾನ ಮಾಡಿಕೊಳ್ಳಲು ಕೆಲವೊಮ್ಮೆ ಪ್ರಯತ್ನಿಸುತ್ತೇನೆ. ಆದರೆ ನನ್ನೊಳಗೆ ಇರುವ, ಸದಾ ಅಳುತ್ತಲೇ ಇರುವ ಯಾರೋ ನಾನು ಸೋತಿದ್ದೇನೆ ಎಂದು ನಾನು ಭಾವಿಸುವಂತೆ ಮಾಡುತ್ತಾರೆ.

ತುಂಬ ಸೋತಿದ್ದೇನೆ ಮತ್ತು ಯಾರಿಗೂ ನಾನು ಅಗತ್ಯವಲ್ಲ ಎಂದು ನನಗೆ ಅನ್ನಿಸುತ್ತದೆ. ಪ್ರತಿಯೊಬ್ಬರಿಗೂ.... ವಿಶೇಷವಾಗಿ ನಿಮ್ಮ ಸ್ವಂತಮಕ್ಕಳಿಗೇ ನೀವು ನಿರುಪಯುಕ್ತ ವಸ್ತುವಾದಾಗ ಬದುಕಿನಲ್ಲಿ ಇನ್ನೊಂದು ದಿನವನ್ನು ಕಳೆಯುವುದು ತುಂಬ ಕಷ್ಟವಾಗಿಬಿಡುತ್ತದೆ.....ನನ್ನ ಹಾಗೆ.

-ಮೆಹರುನ್ನಿಸಾ  

share
ಜಿಎಂಬಿ ಆಕಾಶ್
ಜಿಎಂಬಿ ಆಕಾಶ್
Next Story
X