‘ಫೂಟ್ ಸೊಲ್ಜರ್ ಆಫ್ ದಿ ಕಾನ್ಸ್ಟಿಟೂಷನ್’ ತೀಸ್ತಾರ ಪುಸ್ತಕದ ಬಗ್ಗೆ ಇಂದು ಚರ್ಚೆ
ಬೆಂಗಳೂರು, ಮೇ 14: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ನೆನಪುಗಳು ಹಾಗೂ ‘ಫೂಟ್ ಸೊಲ್ಜರ್ ಆಫ್ ದಿ ಕಾನ್ಸ್ಟಿಟೂಷನ್’ ಪುಸ್ತಕದ ಕುರಿತು ಸೋಮವಾರ ಸಂಜೆ 4 ಗಂಟೆಗೆ ಆನಂದರಾವ್ ವೃತ್ತದ ಸಮೀಪದ ರೇಸ್ಕೋರ್ಸ್ ರಸ್ತೆಯಲ್ಲಿನ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಚರ್ಚೆ ಏರ್ಪಡಿಸಲಾಗಿದೆ.
ಈ ಚರ್ಚೆಯಲ್ಲಿ ಕೃತಿಯ ಲೇಖಕಿ ಹಾಗೂ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಹಿರಿಯ ಚಿಂತಕ ಡಾ.ಕೆ.ಮರಳಸಿದ್ದಪ್ಪ, ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಡಾ.ವಸುಂದರಾ ಭೂಪತಿ, ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.
ಇದೇ ವೇಳೆ ಎ.ಕೆ.ಸುಬ್ಬಯ್ಯ ಅವರ ‘ಆರ್ಎಸ್ಎಸ್ ಅಂತರಂಗ’ ಪುಸ್ತಕ ಬಿಡುಗಡೆ ಮಾಡಲಾಗುತ್ತದೆ ಎಂದು ದೇಶಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.
Next Story